ಆ್ಯಪ್ನಗರ

ಸಿಎಂ ಕ್ಷೇತ್ರದಲ್ಲೇ ನಿರ್ವಹಣೆ ಇಲ್ಲದೆ ಕಳೆಗುಂದಿದೆ ಪಾರ್ಕ್

ಸಮುದಾಯ ವಾಸಿಸುವ ನಗರೀಕರಣದ ನಡುವೆ ಪಾರ್ಕ್ ಇದ್ದರೆ ಜಂಜಾಟದ ಬದುಕಿನ ನಡುವೆ ಮನಸ್ಸಿಗೆ ಮುದ ನೀಡುತ್ತದೆ ಎನ್ನುವ ಕಾರಣಕ್ಕೆ ಪಟ್ಟಣದಲ್ಲಿನಿರ್ಮಾಣವಾಗಿರುವ ಪಾರ್ಕ್ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

Vijaya Karnataka 15 Oct 2019, 5:00 am
ಚಂದ್ರಶೇಖರ ಮಠದ್‌
Vijaya Karnataka Web fading park at cm constituency
ಸಿಎಂ ಕ್ಷೇತ್ರದಲ್ಲೇ ನಿರ್ವಹಣೆ ಇಲ್ಲದೆ ಕಳೆಗುಂದಿದೆ ಪಾರ್ಕ್

ಶಿಕಾರಿಪುರ: ಸಮುದಾಯ ವಾಸಿಸುವ ನಗರೀಕರಣದ ನಡುವೆ ಪಾರ್ಕ್ ಇದ್ದರೆ ಜಂಜಾಟದ ಬದುಕಿನ ನಡುವೆ ಮನಸ್ಸಿಗೆ ಮುದ ನೀಡುತ್ತದೆ ಎನ್ನುವ ಕಾರಣಕ್ಕೆ ಪಟ್ಟಣದಲ್ಲಿನಿರ್ಮಾಣವಾಗಿರುವ ಪಾರ್ಕ್ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಪುರಸಭೆ ನಿರ್ವ ಹಣೆ ಮಾಡುತ್ತಿರುವ 8 ಪಾರ್ಕ್ ಪಟ್ಟಣ ದಲ್ಲಿವೆ, ಬಸ್‌ನಿಲ್ದಾಣ ಸಮೀಪ ಕೃಷ್ಣರಾಜೇಂದ್ರ, ಈಸೂರು ಹುತಾತ್ಮ ಪಾರ್ಕ್, ಕನಕ ಪಾರ್ಕ್ಗಳಿವೆ. ಕೃಷ್ಣ ರಾಜೇಂದ್ರ ಪಾರ್ಕ್ನಲ್ಲಿಅಳವಡಿಸಿರುವ ಕಾರಂಜಿ ಮೊದಲ ವರ್ಷ ಮಾತ್ರ ಸರಿ ಯಾಗಿತ್ತು, ನಂತರ ಅದು ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ವಾಕಿಂಗ್‌ ಮಾಡುವುದಕ್ಕೆ ಟ್ರ್ಯಾಕ್‌ ಇದ್ದು, ನಿತ್ಯ ನೂರಾರು ಜನರು ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಪಕ್ಕದ ಈಸೂರು ಹುತಾತ್ಮ ಪಾರ್ಕ್ ಇತ್ತೀ ಚೆಗೆ ನವೀಕರಣ ಗೊಂಡಿದೆ. ಎರಡೂ ಪಾರ್ಕ್ ಸುತ್ತಲಿನ ತಿಂಡಿ ಅಂಗಡಿ ತ್ಯಾಜ್ಯ ಪಾರ್ಕ್ ಒಳಗೆ ಬೀಳುವ ಕಾರ ಣಕ್ಕೆ, ಜನರೂ ಪಾರ್ಕ್ ಸುಸ್ಥಿತಿ ಕುರಿತು ಕಾಳಜಿ ವಹಿಸದ ಕಾರಣಕ್ಕೆ ಪಾರ್ಕ್ ಅಂದ ಹಾಳಾಗಿದೆ. ಕೋರ್ಟ್‌ ಹಿಂಭಾಗದ ಪಾರ್ಕ್, ಆರ್ಯಾರ ಕೇರಿಯಲ್ಲಿಸಣ್ಣ ಪಾರ್ಕ್ಗಳಿವೆ, ಅಲ್ಲಿನಿರ್ವಹಣೆ ಉತ್ತಮವಾಗಿದೆ. ಜನರು ಇದರ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಂ.ಎಸ್‌. ಕೇರಿ ಪಾರ್ಕ್ ಕೃಷಿ ಇಲಾಖೆ ಆವರಣದಲ್ಲಿದ್ದು ನಾಗರೀಕರಿಗೆ ಪ್ರವೇಶ ಇಲ್ಲವಾಗಿದೆ. ಭದ್ರಾಪುರ ಸಮೀಪದ ಪಾರ್ಕ್ ಹೆಸರಿಗಷ್ಟೆ ಎನ್ನುವಂತಾಗಿದ್ದು, ಆಳೆತ್ತರಕ್ಕೆ ಕಳೆಗಿಡ ಬೆಳೆದು ನಿಂತಿವೆ. ಚನ್ನಮಲ್ಲಿಕಾರ್ಜುನ ಸಿಬಿಎಸ್‌ಸಿ ಶಾಲೆ ಸಮೀಪದ ಪಾರ್ಕ್ ಸುತ್ತಲೂ ಗಿಡ ಇರುವುದು ಬಿಟ್ಟರೆ ಇಡೀ ಪಾರ್ಕ್ ಹಾಳುಸುರಿಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ