ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿವಿಫಲ

ರಾಜ್ಯದಲ್ಲಿಪ್ರವಾಹದಿಂದ ನೆಲೆ ಕಳೆದುಕೊಂಡ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸುವಲ್ಲಿರಾಜ್ಯ, ಕೇಂದ್ರ ಸರಕಾರ ವಿಫಲವಾಗಿವೆ ಎಂದು ಭದ್ರಾ ಕಾಡ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಟೀಕಿಸಿದರು.

Vijaya Karnataka 13 Sep 2019, 10:33 pm
ಶಿಕಾರಿಪುರ: ರಾಜ್ಯದಲ್ಲಿಪ್ರವಾಹದಿಂದ ನೆಲೆ ಕಳೆದುಕೊಂಡ ಸಾವಿರಾರು ಜನರಿಗೆ ಪುನರ್ವಸತಿ ಕಲ್ಪಿಸುವಲ್ಲಿರಾಜ್ಯ, ಕೇಂದ್ರ ಸರಕಾರ ವಿಫಲವಾಗಿವೆ ಎಂದು ಭದ್ರಾ ಕಾಡ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಟೀಕಿಸಿದರು.
Vijaya Karnataka Web failure to rehabilitate neighboring victims
ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿವಿಫಲ


ಪಟ್ಟಣದಲ್ಲಿಗುರುವಾರ ಬ್ಲಾಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆಯಲ್ಲಿಅವರು ಮಾತನಾಡಿದರು. ರಾಜ್ಯದಲ್ಲಿಎರಡು ಬಾರಿ ಪ್ರವಾಹ ಬಂದಿದ್ದು ಜನರು ತತ್ತರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದರೂ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸದೆ ಸಂತ್ರಸ್ತರಿಗೆ ಅವಮಾನಿಸಿದ್ದಾರೆ. ರಾಜ್ಯ ಸರಕಾರವೂ ಪರಿಹಾರ ನೀಡುವಲ್ಲಿವಿಳಂಬ ನೀತಿ ಅನುಸರಿಸುತ್ತಿದೆ ಎಂದರು.

ಜಿ.ಪಂ. ಸದಸ್ಯ ನರಸಿಂಗನಾಯ್ಕ ಮಾತನಾಡಿ, ರಾಜ್ಯದಲ್ಲಿನೆರೆ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕಾಗಿ ಕೇಂದ್ರದ ನೆರವು ಕೋರಿದರೂ ಬಿಡಿಗಾಸು ಸಿಕ್ಕಿಲ್ಲ, ರೈತರು ಬೆಳೆದ ಬೆಳೆ ಕೊಚ್ಚಿ ಹೋಗಿದೆ, ಮನೆ ಮಠವಿಲ್ಲದೆ ಜನರು ಕಾಳಜಿ ಕೇಂದ್ರದಲ್ಲಿಆಶ್ರಯ ಪಡೆದಿದ್ದಾರೆ. ಆದರೂ ಸರಕಾರಗಳು ಸೂಕ್ತ ಪರಿಹಾರ ನೀಡುವಲ್ಲಿವಿಫಲವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಕಚೇರಿಯಿಂದ ತಹಸೀಲ್ದಾರ್‌ ಕಚೇರಿವರೆಗೆ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು. ಸಭೆ ನಂತರ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ರವೀಂದ್ರ, ಗೋಣಿಪ್ರಕಾಶ್‌, ಮೌನೇಶಾಚಾರ್‌, ಗೋಣಿ ರಾಮು, ರಾಘನಾಯ್ಕ, ಸಿದ್ದಣ್ಣ, ಸುರೇಶ್‌, ಕಬೂತರ್‌, ಸಂದೀಪ್‌, ನಗರದ ರವಿಕಿರಣ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ