ಆ್ಯಪ್ನಗರ

ಕಂದಕಕ್ಕೆ ಬಿದ್ದ ಕಾರು: ಯುವಕ ಗಂಭೀರ

ರಸ್ತೆ ಪಕ್ಕ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಎದುರಿನಿಂದ ವೇಗವಾಗ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಜಯನಗರ ಸಮೀಪದ ಶರಾವತಿ ಸೇತುವೆ ಬಳಿ ಗುರುವಾರ ಸಂಭವಿಸಿದೆ.

Vijaya Karnataka 7 Jun 2019, 5:00 am
ಹೊಸನಗರ: ರಸ್ತೆ ಪಕ್ಕ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ವೇಳೆ ಎದುರಿನಿಂದ ವೇಗವಾಗ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಜಯನಗರ ಸಮೀಪದ ಶರಾವತಿ ಸೇತುವೆ ಬಳಿ ಗುರುವಾರ ಸಂಭವಿಸಿದೆ.
Vijaya Karnataka Web SMR-6HOSP2


ಬೈಕ್‌ ಸವಾರ ಜಯನಗರದ ನಿವಾಸಿ ತಜಮ್ಮುಲ್‌(22) ತೀವ್ರ ಗಾಯಗೊಂಡಿದ್ದು, ಕಾಲಿನ ಮೂಳೆ ಮುರಿದಿದೆ. ಅಪಘಾತದ ರಭಸಕ್ಕೆ ವೋಲ್ಸ್‌ವೋಗನ್‌ ಕಾರು 20 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ಗೊರಗೋಡು ಗ್ರಾಮದ ಶ್ರೀನಾಥ ಮತ್ತು ಶ್ರೀಧರ ಎಂಬುವವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಕಾರಣಗಿರಿ ಕಡೆಯಿಂದ ಹೊಸನಗರದತ್ತ ಸಾಗುತ್ತಿತ್ತು. ಬೈಕ್‌ ಸವಾರ ರಸ್ತೆ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಸ್ನೇಹಿತನ ಬಳಿ ಮಾತನಾಡುತ್ತಿದ್ದ. ಚಾಲಕನ ನಿಯಂತ್ರಣ ತಪ್ಪಿದ ಕಾರು ಯುವಕ ಮೇಲೆ ಏಕಾಏಕಿ ನುಗ್ಗಿದ್ದು, ಅವಘಡಕ್ಕೆ ಕಾರಣವಾಯಿತು. ತೀವ್ರ ಅಸ್ವಸ್ಥಗೊಂಡ ಯುವಕನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮರಿದ ಕನಸು:
ಯುವಕ ಸೇನೆಗೆ ಆಯ್ಕೆಯಾಗಿ, ಇನ್ನೊಂದು ವಾರದಲ್ಲಿ ತರಬೇತಿಗೆ ಸೇರ್ಪಡೆಗೊಳ್ಳುವವನಿದ್ದ. ಆದರೆ ಅಪಘಾತದಿಂದ, ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕನ ಭವಿಷ್ಯ ಕತ್ತಲೆಗೆ ಸರಿದಿದೆ. ಬಲತೊಡೆಯ ಮೂಳೆ ಸಂಪೂರ್ಣ ತುಂಡಾಗಿದ್ದು, ಸೇನೆ ಸೇರುವ ಕನಸು ನುಚ್ಚು ನೂರಾಗಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರೂ, ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆ ಮಾಡುವ ತನ್ನ ಕನಸು ಹಾಳಾಯಿತು ಎಂದು ಮರುಗುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ