ಆ್ಯಪ್ನಗರ

ಪ್ರವಾಹಕ್ಕೆ ಹೆದರಿ ಅಟ್ಟ ಏರಿದ್ದ ಕುಟುಂಬ ರಕ್ಷಣೆ

ಹಗಲು ರಾತ್ರಿ ಎಡಬಿಡದೆ ಸುರಿದ ಮಳೆ. ಇನ್ನೊಂದು ಕಡೆ ನದಿಯಲ್ಲಿ ಒಂದೇ ಸಮನೆ ಏರುತ್ತಿರುವ ನೀರು. ನೋಡನೋಡುತ್ತಿದ್ದಂತೆ ನದಿ ಪ್ರವಾಹದ ನೀರು ಮನೆ ಆವರಿಸಿತು. ಆ ಕುಟುಂಬಕ್ಕೆ ದಿಕ್ಕು ತೋಚದಂತಾಯಿತು. ಸಹಾಯಕ್ಕಾಗಿ ಯಾರನ್ನು ಕರೆಯಬೇಕು ಎಂಬುದೆ ಗೊತ್ತಾಗಲಿಲ್ಲ. ದೇವರ ಮೇಲೆ ಭಾರ ಹಾಕಿ ರಾತ್ರಿ ಕಳೆದ ಕುಟುಂಬಕ್ಕೆ ಬೆಳಗಾದ ತಕ್ಷಣ ಸಿಕ್ಕಿದ್ದು ನೆಮ್ಮದಿ.

Vijaya Karnataka 8 Aug 2019, 5:00 am
ತೀರ್ಥಹಳ್ಳಿ: ಹಗಲು ರಾತ್ರಿ ಎಡಬಿಡದೆ ಸುರಿದ ಮಳೆ. ಇನ್ನೊಂದು ಕಡೆ ನದಿಯಲ್ಲಿ ಒಂದೇ ಸಮನೆ ಏರುತ್ತಿರುವ ನೀರು. ನೋಡನೋಡುತ್ತಿದ್ದಂತೆ ನದಿ ಪ್ರವಾಹದ ನೀರು ಮನೆ ಆವರಿಸಿತು. ಆ ಕುಟುಂಬಕ್ಕೆ ದಿಕ್ಕು ತೋಚದಂತಾಯಿತು. ಸಹಾಯಕ್ಕಾಗಿ ಯಾರನ್ನು ಕರೆಯಬೇಕು ಎಂಬುದೆ ಗೊತ್ತಾಗಲಿಲ್ಲ. ದೇವರ ಮೇಲೆ ಭಾರ ಹಾಕಿ ರಾತ್ರಿ ಕಳೆದ ಕುಟುಂಬಕ್ಕೆ ಬೆಳಗಾದ ತಕ್ಷಣ ಸಿಕ್ಕಿದ್ದು ನೆಮ್ಮದಿ.
Vijaya Karnataka Web SMR-7TTH8


ಇಂತಹ ಜೀವ ಭಯದಲ್ಲಿ ಮಂಗಳವಾರ ರಾತ್ರಿ ಕಳೆದಿದ್ದು ತಾಲೂಕಿನ ಆರಗ ಸಮೀಪದ ಹಿರೇಸರ ಗ್ರಾಮದ ರಂಗನಾಥ್‌, ಪತ್ನಿ, ಇಬ್ಬರು ಮಕ್ಕಳು, ಮತ್ತವರಿಗೆ ಸೇರಿದ 5 ಜಾನುವಾರು. ಮಂಗಳವಾರ ರಾತ್ರಿಯಿಂದ ಬುಧವಾರದ ಬೆಳಗೆವರೆಗೆ ಸುರಿದ ಭಾರೀ ಮಳೆ ಕುಶಾವತಿ ನದಿಯನ್ನು ಪ್ರವಾಹ ಮಟ್ಟಕ್ಕೇರಿಸಿ ಬಿಟ್ಟಿತು. ಮನೆ ಸುತ್ತಲು ಪ್ರವಾಹದ ನೀರು ನಿಂತ ಪರಿಣಾಮ ರಂಗನಾಥ್‌ ಅವರ ಕುಟುಂಬಕ್ಕೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಪತ್ನಿ, ಇಬ್ಬರು ಮಕ್ಕಳ ಸಮೇತ ಮನೆಯ ಅಟ್ಟದಲ್ಲಿ ರಾತ್ರಿ ಕಾಲ ತಳ್ಳ ಬೇಕಾಯಿತು.

ಬೆಳಗಾಗುತ್ತಿದ್ದಂತೆ ಸಂಕಟಕ್ಕೆ ಸಿಲುಕಿದ ಕುಟುಂಬದ ಕುರಿತು ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಹಿರೇಸರ ಗ್ರಾಮಕ್ಕೆ ತಕ್ಷಣ ಧಾವಿಸಿದರು. ಪ್ರವಾಹ ನೀರು ಮನೆ ಸುತ್ತಲು ನಿಂತ ಕಾರಣ ಸಿಬ್ಬಂದಿಗೆ ಕುಟುಂಬವನ್ನು ರಕ್ಷಿಸುವ ಸವಾಲು ಎದುರಾಯಿತು. ಸತತ ಕಾರಾರ‍ಯಚರಣೆ ನಂತರ ಮನೆಗೆ ತೆರಳಿದ ಸಿಬ್ಬಂದಿ ಅಟ್ಟದ ಮೇಲಿದ್ದ ಕುಟುಂಬದ ಸದಸ್ಯರನ್ನು ಏಣಿ ಮೂಲಕ ಕೆಳಗೆ ಇಳಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. 5 ಜಾನುವಾರುಗಳನ್ನು ರಕ್ಷಿಸಿದರು. ರಂಗನಾಥ್‌ ಕುಟುಂಬದವರು ಈಗ ಆರಗದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ