ಆ್ಯಪ್ನಗರ

ದಯಾನಂದ್‌ ಅವರಿಗೆ ಬೀಳ್ಕೊಡುಗೆ

ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬೀಳ್ಕೊಡಲಾಯಿತು.

Vijaya Karnataka 9 Aug 2019, 5:00 am
ಶಿವಮೊಗ್ಗ: ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬೀಳ್ಕೊಡಲಾಯಿತು.
Vijaya Karnataka Web 7SMG22


ಅತ್ಯಂತ ಕಡಿಮೆ ಅವಧಿಯಲ್ಲಿ ದಿನಕ್ಕೆ 18 ಗಂಟೆ ಕೆಲಸ ಮಾಡಿ 'ಸಕಾಲ'ದಲ್ಲಿ ಶಿವಮೊಗ್ಗವನ್ನು ನಂ.1 ಸ್ಥಾನಕ್ಕೆ ತಂದಿದ್ದು, 10 ವರ್ಷಗಳ ನಂತರ ಸಹ್ಯಾದ್ರಿ ಉತ್ಸವಕ್ಕೆ ಮರು ಜೀವ ತುಂಬಿದ್ದರು. ರಾಜ್ಯದಲ್ಲಿ ಮೊದಲ ಸೈನಿಕ ಉದ್ಯಾನ ಸ್ಥಾಪನೆ ಮಾಡಿದ್ದಾರೆ. ಅತಿ ಹೆಚ್ಚು ಮತದಾನ ಮಾಡುವಲ್ಲಿ ಪ್ರೋತ್ಸಾಹಿಸಿದ್ದಾರೆ.

ಭಾರತದ ಮೊದಲ ಕೌಶಲ್ಯ ಶಾಲೆಯನ್ನು ಸ್ಥಾಪಿಸಲು ಸಹಕಾರ ನೀಡಿ, ಮನೆ ಮನೆಗಳಿಗೆ ಪರಿಸರ ಪ್ರಶಸ್ತಿ ನೀಡಿ ಬಗರ್‌ ಹುಕುಂ ಸಾಗುವಳಿದಾರರಿಗೆ ಅರಣ್ಯ ಹಕ್ಕು ನೀತಿಯಡಿ ಹೊಸ ಬದುಕನ್ನು ಕಲ್ಪಿಸಲು ಹೋರಾಟಮಾಡಿ, ಒಂದೇ ದಿನದಲ್ಲಿ 1ಲಕ್ಷ ಬೀಜಗಳನ್ನು ಭೂಮಿಗೆ ಬಿತ್ತುವ ಕಾರ್ಯ ಮಾಡಿ ಹೀಗೆ ಹತ್ತಾರು ಕೆಲಸಗಳನ್ನು ಅಲ್ಪಾವಧಿಯಲ್ಲಿಯೇ ಮಾಡಿದ ಕೀರ್ತಿ ಇವರಿಗೆ ಸಲ್ಲಿತ್ತದೆ ಎಂದು ಕೈಗಾರಿಕಾ ಸಂಘ ತಿಳಿಸಿದೆ. ಸಂಘದ ಅಧ್ಯಕ್ಷ ಜೆ.ಆರ್‌ ವಾಸುದೇವ್‌, ಕಾರ್ಯದರ್ಶಿ ಗೋಪಿನಾಥ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯ್‌ ಕುಮಾರ್‌, ನಿರ್ದೇಶಕ ಬಿ.ಗೋಪಿನಾಥ್‌, ಚನ್ನವೀರಪ್ಪ, ಬಿ.ಸಂತೋಷ್‌ ಕುಮಾರ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ