ಆ್ಯಪ್ನಗರ

ರೈತ ಸಂಘ ಪ್ರತಿಭಟನೆ

ಕೇಂದ್ರದ ಭೂಸ್ವಾಧೀನ ಸ್ಥಳಾಂತರ ಮತ್ತು ಪುನರ್ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರ ಹಕ್ಕು ಅಧಿನಿಯಮ 2013ರಲ್ಲಿ ರಾಜ್ಯ ಸರಕಾರ ಪಾಸು ಮಾಡಿರುವ ತಿದ್ದುಪಡಿ ಬಿಲ್ಲು ಧಿ-2019ನ್ನು ಕೂಡಲೇ ವಾಪಾಸ್‌ ಪಡೆಯಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Vijaya Karnataka 3 Mar 2019, 5:00 am
ಶಿವಮೊಗ್ಗ : ಕೇಂದ್ರದ ಭೂಸ್ವಾಧೀನ ಸ್ಥಳಾಂತರ ಮತ್ತು ಪುನರ್ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರ ಹಕ್ಕು ಅಧಿನಿಯಮ 2013ರಲ್ಲಿ ರಾಜ್ಯ ಸರಕಾರ ಪಾಸು ಮಾಡಿರುವ ತಿದ್ದುಪಡಿ ಬಿಲ್ಲು ಧಿ-2019ನ್ನು ಕೂಡಲೇ ವಾಪಾಸ್‌ ಪಡೆಯಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
Vijaya Karnataka Web SMR-2GANESH3


ಈ ಹಿಂದೆ ಬ್ರಿಟಿಷ್‌ ಸರಕಾರ ರೂಪಿಸಿದ್ದ ಭೂ ಸ್ವಾಧೀನ ಕಾಯಿದೆಯನ್ನು ಯುಪಿಎ ನೇತೃತ್ವದ ಕೇಂದ್ರ ಸರಕಾರ ರದ್ದುಪಡಿಸಿ ಹೊಸ ಕಾಯಿದೆ ರೂಪಿಸಿ ಜಾರಿಗೆ ತಂದಿದೆ. ಕೇಂದ್ರ, ರಾಜ್ಯ ಸರಕಾರ ಯಾವುದೇ ಉದ್ದೇಶಕ್ಕೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಸಂತ್ರಸ್ತರ ಸಮ್ಮತಿ ಅಗತ್ಯ. ಭೂಮಿಯನ್ನು ಕಳೆದುಕೊಳ್ಳುವವರ ಪುನರ್ವಸತಿ ಹಾಗೂ ಪುನರ್‌ ವ್ಯವಸ್ಥೆ ಮತ್ತು ಪರಿಹಾರ ನಿಗದಿ ಬಗ್ಗೆ ಕಾಳಜಿವಹಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಭೂ ಸ್ವಾಧೀನ ಕಾಯಿದೆ 2013ರ ಮೂಲ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ಈಗಿನ ರಾಜ್ಯ ಸರಕಾರದ ತಿದ್ದುಪಡಿ ಬಿಲ್‌ನಿಂದಾಗಿ ಭೂಮಿ ಕಳೆದುಕೊಂಡಿರುವವರ ಹಿತಾಸಕ್ತಿ ಕಡೆಗಣಿಸಲಾಗಿದೆ. ಜತೆಗೆ ಪರಿಹಾರ ಮೊತ್ತ ಪಡೆದುಕೊಳ್ಳುವಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ವಿಧಾನಸಭೆಯಲ್ಲಿ ಯಾವುದೇ ಚರ್ಚೆಗೆ ಒಳಪಡಿಸದೇ ಪಾಸ್‌ ಮಾಡಿರುವ ಭೂಸ್ವಾಧೀನ ಕಾಯಿದೆಯ ತಿದ್ದುಪಡಿ ಬಿಲ್ಲನ್ನು ಕೂಡಲೇ ವಾಸ್‌ ಪಡೆದುಕೊಳ್ಳಬೇಕು. ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಎಲ್ಲ ಸಾಲವನ್ನು ಸರಕಾರ ಮನ್ನಾ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌, ವೀರೇಶ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ