ಆ್ಯಪ್ನಗರ

ಅಸಮಂಜಸ ಯೋಜನೆಯಿಂದ ರೈತ ಸಾಲಗಾರ

ಸರಕಾರಗಳು ಮಾಡುತ್ತಿರುವ ಅಸಮಂಜಸ ಯೋಜನೆ, ನೀತಿ ಹಾಗೂ ನಿಯಮಗಳಿಂದಾಗಿ ರೈತರು ಸಾಲಗಾರರಾಗಿದ್ದಾರೆ ಎಂದು ಪ್ರಗತಿಪರ ರೈತ ಗಿರೀಶ್‌ ಹೇಳಿದರು.

Vijaya Karnataka 19 Dec 2018, 5:00 am
ಹೊಳೆಹೊನ್ನೂರು: ಸರಕಾರಗಳು ಮಾಡುತ್ತಿರುವ ಅಸಮಂಜಸ ಯೋಜನೆ, ನೀತಿ ಹಾಗೂ ನಿಯಮಗಳಿಂದಾಗಿ ರೈತರು ಸಾಲಗಾರರಾಗಿದ್ದಾರೆ ಎಂದು ಪ್ರಗತಿಪರ ರೈತ ಗಿರೀಶ್‌ ಹೇಳಿದರು.
Vijaya Karnataka Web SMR-18HHR2


ಕನಸಿನಕಟ್ಟೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಕೃಷಿ ಉತ್ಸವ ಹಾಗೂ ಕೃಷಿ ಕಾರಾರ‍ಯಗಾರದಲ್ಲಿ ಅವರು ಮಾತನಾಡಿದರು.

ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಹೊಣೆಗಾರಿಕೆ ಸರಕಾರದ ಮೇಲಿದೆ. ಇದರಿಂದ ರೈತರು ಋುಣ ಮುಕ್ತರಾಗಿ ನೆಮ್ಮದಿಯಿಂದ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಾರೆ. ಮಾತ್ರವಲ್ಲ ರೈತರು ಆತ್ಮಹತ್ಯೆಗೆ ಶರಣಾಗುವುದು ನಿಲ್ಲುತ್ತದೆ. ರೈತರು ಭತ್ತಕ್ಕೆ ಸರಿಯಾದ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತ ಬೆಳೆಯಲು ಖರ್ಚು ಮಾಡಿರುವಷ್ಟು ಹಣ ಕೂಡ ಫಸಲಿನಿಂದ ಪಡೆಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರಕಾರವು ಉತ್ತಮ ಬೆಲೆ ನಿಗದಿ ಮಾಡಬೇಕೆಂದರು.

ಸಾವಯವ ಕೃಷಿಕ ಕುಮಾರ ನಾಯ್ಡು ಮಾತನಾಡಿ, ಇತ್ತೀಚಿಗೆ ಕೃಷಿ ಪದ್ಧತಿಯಲ್ಲಿ ಕಳೆನಾಶಕದಂತಹ ದುಷ್ಪರಿಣಾಮಕಾರಿ ಔಷಧ ಸಿಂಪಡಿಸಿ ರೈತ ಸ್ನೇಹ ಜೀವಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಮಾಡುತ್ತಿರುವ ಕೃಷಿ ಪದ್ಧತಿಯಲ್ಲಿ ಅನೇಕ ರೀತಿಯ ಬದಲಾವಣೆ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂದರು.

ರೈತ ಮುಖಂಡ ಕಡಿದಾಳ್‌ ಶ್ಯಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ಲೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್‌.ಶ್ರೀನಿವಾಸ್‌, ಪಶುವೈದ್ಯಾಧಿಕಾರಿ ಡಾ.ಕೆಂಡೇಶ್‌, ಕೃಷಿ ಅಧಿಕಾರಿ ಪ್ರಕಾಶ್‌ ಹಾಗೂ ಆಧುನಿಕ ಕೃಷಿಕ ಮಹಾದೇವಪ್ಪ ಮಾತನಾಡಿದರು. ಸನ್ಯಾಸಿಕೋಡಮಗ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ ವಿಶ್ವನಾಥ್‌ ಅಧ್ಯಕ್ಷ ತೆ ವಹಿಸಿದ್ದರು.

ಕೃಷಿ ಉತ್ಸವದ ಅಂಗವಾಗಿ ಮೊಲ, ಕುರಿ ಸಾಕಣೆ, ಸುಧಾರಿತ ಬೇಸಾಯ ಪದ್ಧತಿಗೆ ಕೃಷಿ ಯಂತ್ರೋಪಕರಣ, ಅಣಬೆ ಕೃಷಿ, ಜವಾರಿ ತಳಿ ಎತ್ತುಗಳ ಪ್ರದರ್ಶನ ನಡೆಯಿತು.

ಗ್ರಾ.ಪಂ. ಸದಸ್ಯೆ ಸಾಕಮ್ಮ, ಕೃಷಿ ವಿವಿ ಕೃಷಿ ವಿಸ್ತರಣಾ ವಿಭಾಗದ ಡಾ.ಎಸ್‌.ಸಹನಾ, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಾದ ಎಚ್‌.ಕೆ.ಹೊಯ್ಸಳ, ಆನಂದ್‌ ಹೆಗಡೆ, ಪೆಲಿಕ್ಸ್‌ ನಿಖಿತ್‌ಕುಮಾರ್‌, ಎಂ.ಎಸ್‌.ಗಿರೀಶ್‌, ಮಹೇಶ, ಗ್ರಾಮ ಮುಖಂಡರಾದ ಕೆ.ಜಿ.ಹಾಲೇಶ್‌, ವಿ.ಅಶ್ವತ್‌ ಮತ್ತಿತರರು ಹಾಜರಿದ್ದರು. ಅನುಷಾ ಪ್ರಾರ್ಥಿಸಿ, ಗಿರೀಶ್‌ ಸ್ವಾಗತಿಸಿದರು. ಚೇತನಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ