ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ರೈತರಿಗೆ ಮನವಿ

ಭದ್ರಾ ಅಚ್ಚುಕಟ್ಟು ಕೆಳ ಭಾಗದ ರೈತರು ಸಂತಸದಿಂದ ಇದ್ದೇವೆ. ಆದರೆ, ಇದಕ್ಕೆ ಕಾರಣರಾದ ಅಣೆಕಟ್ಟು ಮೇಲ್ಭಾಗದ ಚಿಕ್ಕಮಗಳೂರು ಜಿಲ್ಲೆಯ ನದಿ ಪಾತ್ರದ ಜನರು ನೆರೆ ಹಾವಳಿಗೆ ಸಿಲುಕಿ ಸಂತ್ರಸ್ತರಾಗಿದ್ದಾರೆ.

Vijaya Karnataka 29 Aug 2019, 5:00 am
ಭದ್ರಾವತಿ: ಭದ್ರಾ ಅಚ್ಚುಕಟ್ಟು ಕೆಳ ಭಾಗದ ರೈತರು ಸಂತಸದಿಂದ ಇದ್ದೇವೆ. ಆದರೆ, ಇದಕ್ಕೆ ಕಾರಣರಾದ ಅಣೆಕಟ್ಟು ಮೇಲ್ಭಾಗದ ಚಿಕ್ಕಮಗಳೂರು ಜಿಲ್ಲೆಯ ನದಿ ಪಾತ್ರದ ಜನರು ನೆರೆ ಹಾವಳಿಗೆ ಸಿಲುಕಿ ಸಂತ್ರಸ್ತರಾಗಿದ್ದಾರೆ. ಅವರ ಬದುಕನ್ನು ಕಟ್ಟಿಕೊಡಲು ರೈತರು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಮನವಿ ಮಾಡಿದರು.
Vijaya Karnataka Web SMR-28BDVT2


ಅವರು ಮಂಗಳವಾರ ಭದ್ರಾ ಜಲಾಶಯದಲ್ಲಿರೈತ ಸಂಘದಿಂದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿಮಾತನಾಡಿದರು.

ಭದ್ರಾ ಅಣೆಕಟ್ಟು ನಿರ್ಮಾಣದಿಂದಲೂ ಈ ಭಾಗದ ಜನರು ತಮ್ಮ ಮನೆ ಮಠ, ಜನ ಜಾನುವಾರುಗಳನ್ನು ಕಳೆದುಕೊಂಡು ತ್ಯಾಗ ಮನೋಭಾವ ತೋರಿದ್ದಾರೆ. ಅವರ ತ್ಯಾಗದಿಂದ ಇಂದು ಭದ್ರಾ ಅಚ್ಚುಕಟ್ಟು ಭಾಗದ ರೈತರು ಸಂತೋಷದಿಂದ ಇರಲು ಸಾಧ್ಯವಾಗಿದೆ. ಫಲಾನುಭವಿಗಳಾದ ನಾವು ಪ್ರಸ್ತುತ ನೆರೆ ಹಾವಳಿಗೆ ತುತ್ತಾಗಿರುವ ಅಲ್ಲಿನ ಜನರಿಗೆ ನೆರವು ನೀಡಿ ಸಹಾನುಭೂತಿ ವ್ಯಕ್ತಪಡಿಸಬೇಕಿದೆ. ಸರಕಾರಗಳು ಪರಿಹಾರ ರೂಪದಲ್ಲಿನೀಡುವ ಬಿಡಿಗಾಸು ಹಣ ಯಾವುದಕ್ಕೂ ಸಾಲುವುದಿಲ್ಲ. ಅವೈಜ್ಞಾನಿಕ ಪರಿಹಾರ ಮಾರ್ಗಸೂಚಿ ಬದಲಾವಣೆಯಾಗಬೇಕು ಎಂದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ