ಆ್ಯಪ್ನಗರ

ಅನ್ಯಾಯ ವಿರುದ್ಧ ಹೋರಾಡಲು ರೈತ ಸಂಘ ಸಶಕ್ತ

ಚುನಾವಣಾ ಪೂರ್ವದಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ಸರಕಾರಗಳು ರೈತರ ಹಿತ ಕಾಪಾಡುವಲ್ಲಿ ವಿಫಲಗೊಂಡಿವೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಮಂಜುನಾಥಗೌಡ ಹೇಳಿದರು.

Vijaya Karnataka 14 Jul 2019, 5:00 am
ಸೊರಬ: ಚುನಾವಣಾ ಪೂರ್ವದಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬರುವ ಸರಕಾರಗಳು ರೈತರ ಹಿತ ಕಾಪಾಡುವಲ್ಲಿ ವಿಫಲಗೊಂಡಿವೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ‍್ಯದರ್ಶಿ ಮಂಜುನಾಥಗೌಡ ಹೇಳಿದರು.
Vijaya Karnataka Web SMR-13SRBP1


ಪಟ್ಟಣದಲ್ಲಿ ಶನಿವಾರ ತಾಲೂಕು ರೈತ ಸಂಘದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಶಿವಪ್ಪ ಕೊಡಕಣಿ ಅವರನ್ನು ಅಭಿನಂದಿಸಿ ಮಾತನಾಡಿದರು.

ರಾಜ್ಯದಲ್ಲಿ ರೈತ ಸಂಘಟನೆ ಬಲವಾಗಿದ್ದು, ಅನ್ಯಾಯದ ವಿರುದ್ಧ ಚಳವಳಿ ಮಾಡಲು ಸಶಕ್ತವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ರಾಜ್ಯಾದ್ಯಂತ ಪ್ರತಿ ಹಂತದಲ್ಲೂ ರೈತ ಸಂಘ ಸರಕಾರಗಳಿಗೆ ಆಡಳಿತ ವೈಖರಿ ಬಗ್ಗೆ ಎಚ್ಚರಿಕೆ ನೀಡಿದರೂ ಜನರಿಗೆ ಉಪಯೋಗವಿಲ್ಲದ ಯೋಜನೆ ರೂಪಿಸಿ ಜನಸಾಮಾನ್ಯರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆ ಗಮನಿಸಿದರೆ ಮತದಾರ ಪಶ್ಚಾತ್ತಾಪ ಪಡುವಂತಾಗಿದೆ. ತಾಲೂಕಲ್ಲೂ ಆಡಳಿತ ಯಂತ್ರ ಕುಸಿದಿದ್ದು, ಅಧಿಕಾರಿ ವರ್ಗದಲ್ಲಿ ಸಾಮಾನ್ಯರ ಕೆಲಸಗಳಿಗೆ ಯಾವುದೇ ಸಹಮತ ದೊರಕದಿರುವುದು ಬೇಸರದ ಸಂಗತಿ ಎಂದರು.

ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ ಮಾತನಾಡಿ, 30 ವರ್ಷಗಳಿಂದ ರೈತ ಸಂಘದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು, ಸಂಘಟನೆ ಜತೆಗೆ ನಿರಂತರವಾಗಿ ರೈತರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಡುತ್ತ ಬಂದಿದ್ದೇನೆ. ಮುಂದಿನ ದಿನಗಳಲ್ಲೂ ಅನ್ಯಾಯದ ವಿರುದ್ಧ ರೈತ ಸಂಘ ಜನರ ಜತೆ ಇರಲಿದೆ ಎಂದರು. ಉಮೇಶ್‌ ಪಾಟೀಲ್‌, ಬಲೀಂದ್ರಪ್ಪ ಚಿಕ್ಕಾವಲಿ, ವೀರಭದ್ರಪ್ಪಗೌಡ, ಈಶ್ವರಪ್ಪ ಚಿಮಣೂರು, ಶಫೀವುಲ್ಲಾ, ಪಕ್ಕೀರಸ್ವಾಮಿ, ಶಿವಪ್ಪ, ನಾಗರಾಜ ಬೆಣ್ಣಗೇರಿ, ಶಿವಪ್ಪ ಹುಣಸವಳ್ಳಿ, ಬಸವರಾಜಗೌಡ ಹೆಗ್ಗೋಡು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ