ಆ್ಯಪ್ನಗರ

ಕೃಷಿ ಸಮಗ್ರ ಮಾಹಿತಿ ರೈತರಿಗೆ ಅಗತ್ಯ

ಕೃಷಿ ಬಗ್ಗೆ ಸಮಗ್ರ ಮಾಹಿತಿ ಕೊರತೆಯಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಲಾಖೆ ರೈತರಿಗೆ ಹೋಬಳಿವಾರು ಸಮಗ್ರ ಕೃಷಿ ಅಭಿಯಾನದ ಮೂಲಕ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದು ಎಪಿಎಂಸಿ ಅಧ್ಯಕ್ಷ ಕೆ.ಅಜ್ಜಪ್ಪ ಹೇಳಿದರು.

Vijaya Karnataka 22 Jun 2019, 5:00 am
ಸೊರಬ: ಕೃಷಿ ಬಗ್ಗೆ ಸಮಗ್ರ ಮಾಹಿತಿ ಕೊರತೆಯಿಂದಾಗಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಲಾಖೆ ರೈತರಿಗೆ ಹೋಬಳಿವಾರು ಸಮಗ್ರ ಕೃಷಿ ಅಭಿಯಾನದ ಮೂಲಕ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದು ಎಪಿಎಂಸಿ ಅಧ್ಯಕ್ಷ ಕೆ.ಅಜ್ಜಪ್ಪ ಹೇಳಿದರು.
Vijaya Karnataka Web farmers need agriculture macro information
ಕೃಷಿ ಸಮಗ್ರ ಮಾಹಿತಿ ರೈತರಿಗೆ ಅಗತ್ಯ


ತಾಲೂಕಿನ ಉಳವಿ ಗ್ರಾಮದಲ್ಲಿ ಶುಕ್ರವಾರ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸಮಗ್ರ ಕೃಷಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಕಾಲ ಕಾಲಕ್ಕೆ ಹಾಗೂ ಹವಾಮಾನ ವೈಪರೀತ್ಯಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಆರ್ಥಿಕ ಮುಗ್ಗಟ್ಟಿನಿಂದ ರೈತರು ಹೊರಬರಲು ಸಾಧ್ಯವಿದೆ ಎಂದರು.

ಸರಕಾರದ ಮಟ್ಟದಲ್ಲಿ ದೊರೆಯುವ ಯೋಜನೆಗಳನ್ನು ರೈತರಿಗೆ ಸ್ಪಂದಿಸಿ ಅಧಿಕಾರಿಗಳು ಸಹಕಾರ ನೀಡುವುದನ್ನು ಕಲಿತುಕೊಳ್ಳಬೇಕೆಂದ ಅವರು, ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವವರೆಗೂ ಗೋದಾಮಿನಲ್ಲಿ ಇಟ್ಟರೆ ಬಡ್ಡಿರಹಿತವಾಗಿ ಶೇ 20 ಹಣ ನೀಡಲಾಗುವುದು. ರೈತರ ಬೆಳೆ ಹಸನು ಮಾಡಲು 22ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಣ ನಿರ್ಮಿಸಲಾಗುವುದು ಎಂದರು.

ಶಿವಮೊಗ್ಗ ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯ ಸಂಶೋಧಕ ಡಾ.ಉಲ್ಲಾಸ್‌ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಬೆಳೆಗಳ ಸಂರಕ್ಷ ಣೆ ಮತ್ತು ಬೇಸಾಯ ಪದ್ಧತಿ ರೂಢಿಸಿಕೊಂಡಾಗ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಾವಯವ ಬೇಸಾಯದಿಂದ ಕೃಷಿ ಲಾಭದಾಯಕವಾಗಿ ಮಾಡಿಕೊಳ್ಳಬಹುದಾಗಿದೆ.ಮಣ್ಣಿನ ಸಂರಕ್ಷ ಣೆ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಫಲವತ್ತತೆಗೆ ಕಾರಣವಾಗಿ ಉತ್ತಮ ಇಳುವರಿ ಪಡೆಯಬಹುದು ಎಂದರು. ನಾಗರಾಜ್‌ ಚಿಕ್ಕಸವಿ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯಿತಿ ಸದಸ್ಯ ಬೈರಪ್ಪ ಅಧ್ಯಕ್ಷ ತೆ ವಹಿಸಿದ್ದರು. ತಾಂತ್ರಿಕ ಕೃಷಿ ಅಧಿಕಾರಿ ಕಾಂತರಾಜ್‌ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಧನಂಜಯ ಮತ್ತು ಪೂರ್ಣಿಮಾ ನಿರೂಪಿಸಿದರು. ಎಪಿಎಂಸಿ ಸದಸ್ಯ ಫಯಾಜ್‌ ಅಹಮದ್‌, ಗ್ರಾ.ಪಂ.ಅಧ್ಯಕ್ಷ ಮಹಾದೇವಪ್ಪ, ಭರಮಪ್ಪ, ನಿಸಾರ್‌ ಅಹಮದ್‌, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್‌, ದೇವರಾಜ್‌, ವಿಜಯಕುಮಾರ್‌, ಕುಮಾರ್‌, ಹನುಮಂತಪ್ಪ, ಸಹನಾ, ಡಾ.ಮಲ್ಲಿಕಾರ್ಜುನ, ಸೋಮಶೇಖರ್‌ ಇದ್ದರು. ಕೃಷಿ ಅಭಿಯಾನದಲ್ಲಿ ಗೆಂಡ್ಲ-ಹೊಸೂರಿನ ಶಿವರುದ್ರಪ್ಪ ಜೋಗಿ ಅವರು ಕೃಷಿ ಬಗ್ಗೆ ಗೀಗೀಪದ ಹಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ