ಆತೀಶ್ ಬಿ.ಕನ್ನಾಳೆ ಶಿವಮೊಗ್ಗ
ಶಿವಮೊಗ್ಗ: ಕಳೆದ 10 ವರ್ಷಗಳಲ್ಲಿ ಮಾವು ಬೆಳೆಯುವ ಕ್ಷೇತ್ರ ತಟಸ್ಥವಾಗಿದೆ. ಅಡಕೆಗೆ ತೋರುತ್ತಿರುವ ಒಲವು ಮಾವಿನೆಡೆಗೆ ಇಲ್ಲ. ಜಿಲ್ಲೆಯ ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಾವು ಬೆಳೆಯಲು ಪ್ರಶಸ್ತ ವಾತಾವರಣ ಇದೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲಿ ಬೆಳೆಯುವ ಮಾವಿಗೆ ಉತ್ತಮ ಬೇಡಿಕೆ ಇದೆ. ಆದರೆ, ಇದರೆಡೆಗೆ ರೈತರು ಗಮನ ಹರಿಸುತ್ತಿಲ್ಲ.
ತೋಟಗಾರಿಕೆ ಇಲಾಖೆಯ 10 ವರ್ಷಗಳ ಅಂಕಿ-ಅಂಶದ ಪ್ರಕಾರ, 2008-09ರಲ್ಲಿ ಶಿವಮೊಗ್ಗದಲ್ಲಿ 2,845 ಹೆಕ್ಟೆರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿತ್ತು. 2014-15 ಮತ್ತು 2015-16ರಲ್ಲಿ ಅತಿ ಹೆಚ್ಚು 3595 ಹೆಕ್ಟೇರ್ ವಿಸ್ತೀರ್ಣ ಏರಿಕೆಯಾಗಿತ್ತು. ಪ್ರಸ್ತುತ 3390 ಹೆಕ್ಟೇರ್ ವಿಸ್ತೀರ್ಣವಿದೆ. ಇನ್ನೊಂದೆಡೆ ಅಡಕೆ ಬೆಳೆಯುವ ಪ್ರದೇಶ 10 ವರ್ಷದಲ್ಲಿ 64,905 ಹೆಕ್ಟೆರ್ ಏರಿಕೆಯಾಗಿದೆ. ವಿಶೇಷವೆಂದರೆ, ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸೊರಬ ಭಾಗದಲ್ಲಿ ಅಡಕೆ ಬೆಳೆಯುವ ಕ್ಷೇತ್ರ ಏರಿಕೆ ಕಂಡುಬಂದಿದ್ದು, ಈ ಬೆಳವಣಿಗೆ ಮಾವು ಕ್ಷೇತ್ರದಲ್ಲಿ ಆಗಿಲ್ಲ. 2008-09ಕ್ಕೂ ಮುಂಚೆ ಸಾಕಷ್ಟು ಮಾವಿನ ತೋಪುಗಳು ಜಿಲ್ಲೆಯಲ್ಲಿದ್ದವು. ಆದರೆ, ಅದು ಅಭಿವೃದ್ಧಿಗೆ ಸಿಲುಕಿ ಹಾಳಾಗಿದೆ. ಇದನ್ನು ಅರಿತು ಮಾವು ಕೃಷಿಗೆ ತೋಟಗಾರಿಕೆ ಇಲಾಖೆ ಉತ್ತೇಜನ ನೀಡಿದೆ. ತೋಟಗಾರಿಕೆ ಇಲಾಖೆಯು ನೀಡಿದ ಜಾಗೃತಿಯ ಫಲವಾಗಿ ಕೆಲವು ರೈತರು ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕೃಷಿ ಕಡೆಗೆ ಮುಖ ಮಾಡಿದ್ದಾರೆ. ಆದರೂ ಅಡಕೆಗಿರುವಷ್ಟು ಬೇಡಿಕೆ ಮಾವಿಗಿಲ್ಲ.
ಮಾವಿನಲ್ಲೂ ಪಡೆಯಬಹುದು ಲಾಭ
ತೋಟಗಾರಿಕೆ ಸೂಚನೆಯ ಪ್ರಕಾರ ವೈಜ್ಞಾನಿಕವಾಗಿ ಮಾವು ಕೃಷಿ ಮಾಡಿದ್ದಲ್ಲಿ ಪ್ರತಿ ಎಕರೆಗೆ 160 ಮರಗಳನ್ನು ಹೈಡೆನ್ಸಿಟಿ ಪ್ಲಾಂಟೇಷನ್ (ಎಚ್ಡಿಪಿ) ಮಾದರಿಯಲ್ಲಿ ನೆಟ್ಟರೆ ಸೀಸನ್ನಲ್ಲಿ ಅಂದಾಜು 40 ಸಾವಿರ ರೂ.ವರೆಗೆ ಲಾಭ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಬಾದಾಮಿ, ರಸಪುರಿ ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಸಲಾಗುತ್ತಿದೆ. ಲಾಭವನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ, ತೋತಾಪುರಿ, ಮಲ್ಲಿಕಾ ತಳಿಯನ್ನು ಬೆಳೆಯಬಹುದಾಗಿದೆ. ಮಾವಿನ ಹಣ್ಣಿನ ರಸಕ್ಕಾಗಿ ಸಂಸ್ಕರಣಾ ಘಟಕಗಳಿಗೆ ಇದನ್ನು ನೀಡಬಹುದು. 3-4 ಎಕರೆಯಲ್ಲಿ ಬೆಳೆಯಬೇಕಾದವರು ಎಚ್ಡಿಪಿ ಮೂಲಕ ಮಾವು ಕೃಷಿ ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಇಳಿಕೆ
ಭದ್ರಾವತಿಯಲ್ಲಿ 2008-09ರಲ್ಲಿ 184 ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತಿತ್ತು. ಅದರ ಪ್ರಮಾಣ 2020-21ರಲ್ಲಿ 109 ಹೆಕ್ಟೇರ್ಗೆ ಇಳಿಕೆಯಾಗಿದೆ. ಅದೇ ಶಿಕಾರಿಪುರದಲ್ಲಿ ಮಾವು ಕೃಷಿಗೆ ಕೆಲ ರೈತರು ಮುಂದೆ ಬಂದಿದ್ದರಿಂದ ಇಲ್ಲಿ 836 ಹೆ.ನಿಂದ 1043 ಹೆ.ಗೆ ಹೆಚ್ಚಿದೆ. ಸೊರಬದಲ್ಲಿ 1,244 ಹೆ.ನಿಂದ 1,624 ಹೆ.ಗೆ ಏರಿಕೆಯಾಗಿದೆ. ಆದರೂ ಹತ್ತು ವರ್ಷಗಳ ಅಂತರಕ್ಕೆ ಹೋಲಿಸಿದರೆ ಇದನ್ನು ಬೆಳವಣಿಗೆ ಎನ್ನಲಾಗದು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಮಾವು ಬೆಳೆ ವಿಸ್ತೀರ್ಣ (ಹೆಕ್ಟೆರ್ಗಳಲ್ಲಿ)
ವರ್ಷ- ಮಾವು
ಟಿ.ಸಿದ್ದಲಿಂಗೇಶ್ವರ, ಪ್ರಭಾರ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ
ಶಿವಮೊಗ್ಗ: ಕಳೆದ 10 ವರ್ಷಗಳಲ್ಲಿ ಮಾವು ಬೆಳೆಯುವ ಕ್ಷೇತ್ರ ತಟಸ್ಥವಾಗಿದೆ. ಅಡಕೆಗೆ ತೋರುತ್ತಿರುವ ಒಲವು ಮಾವಿನೆಡೆಗೆ ಇಲ್ಲ. ಜಿಲ್ಲೆಯ ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಮಾವು ಬೆಳೆಯಲು ಪ್ರಶಸ್ತ ವಾತಾವರಣ ಇದೆ. ಸೊರಬ ತಾಲೂಕಿನ ಆನವಟ್ಟಿ ಭಾಗದಲ್ಲಿ ಬೆಳೆಯುವ ಮಾವಿಗೆ ಉತ್ತಮ ಬೇಡಿಕೆ ಇದೆ. ಆದರೆ, ಇದರೆಡೆಗೆ ರೈತರು ಗಮನ ಹರಿಸುತ್ತಿಲ್ಲ.
ತೋಟಗಾರಿಕೆ ಇಲಾಖೆಯ 10 ವರ್ಷಗಳ ಅಂಕಿ-ಅಂಶದ ಪ್ರಕಾರ, 2008-09ರಲ್ಲಿ ಶಿವಮೊಗ್ಗದಲ್ಲಿ 2,845 ಹೆಕ್ಟೆರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿತ್ತು. 2014-15 ಮತ್ತು 2015-16ರಲ್ಲಿ ಅತಿ ಹೆಚ್ಚು 3595 ಹೆಕ್ಟೇರ್ ವಿಸ್ತೀರ್ಣ ಏರಿಕೆಯಾಗಿತ್ತು. ಪ್ರಸ್ತುತ 3390 ಹೆಕ್ಟೇರ್ ವಿಸ್ತೀರ್ಣವಿದೆ. ಇನ್ನೊಂದೆಡೆ ಅಡಕೆ ಬೆಳೆಯುವ ಪ್ರದೇಶ 10 ವರ್ಷದಲ್ಲಿ 64,905 ಹೆಕ್ಟೆರ್ ಏರಿಕೆಯಾಗಿದೆ. ವಿಶೇಷವೆಂದರೆ, ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ, ಸೊರಬ ಭಾಗದಲ್ಲಿ ಅಡಕೆ ಬೆಳೆಯುವ ಕ್ಷೇತ್ರ ಏರಿಕೆ ಕಂಡುಬಂದಿದ್ದು, ಈ ಬೆಳವಣಿಗೆ ಮಾವು ಕ್ಷೇತ್ರದಲ್ಲಿ ಆಗಿಲ್ಲ.
ಮಾವಿನಲ್ಲೂ ಪಡೆಯಬಹುದು ಲಾಭ
ತೋಟಗಾರಿಕೆ ಸೂಚನೆಯ ಪ್ರಕಾರ ವೈಜ್ಞಾನಿಕವಾಗಿ ಮಾವು ಕೃಷಿ ಮಾಡಿದ್ದಲ್ಲಿ ಪ್ರತಿ ಎಕರೆಗೆ 160 ಮರಗಳನ್ನು ಹೈಡೆನ್ಸಿಟಿ ಪ್ಲಾಂಟೇಷನ್ (ಎಚ್ಡಿಪಿ) ಮಾದರಿಯಲ್ಲಿ ನೆಟ್ಟರೆ ಸೀಸನ್ನಲ್ಲಿ ಅಂದಾಜು 40 ಸಾವಿರ ರೂ.ವರೆಗೆ ಲಾಭ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಬಾದಾಮಿ, ರಸಪುರಿ ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಸಲಾಗುತ್ತಿದೆ. ಲಾಭವನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ, ತೋತಾಪುರಿ, ಮಲ್ಲಿಕಾ ತಳಿಯನ್ನು ಬೆಳೆಯಬಹುದಾಗಿದೆ. ಮಾವಿನ ಹಣ್ಣಿನ ರಸಕ್ಕಾಗಿ ಸಂಸ್ಕರಣಾ ಘಟಕಗಳಿಗೆ ಇದನ್ನು ನೀಡಬಹುದು. 3-4 ಎಕರೆಯಲ್ಲಿ ಬೆಳೆಯಬೇಕಾದವರು ಎಚ್ಡಿಪಿ ಮೂಲಕ ಮಾವು ಕೃಷಿ ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರಾವತಿಯಲ್ಲಿ ಇಳಿಕೆ
ಭದ್ರಾವತಿಯಲ್ಲಿ 2008-09ರಲ್ಲಿ 184 ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತಿತ್ತು. ಅದರ ಪ್ರಮಾಣ 2020-21ರಲ್ಲಿ 109 ಹೆಕ್ಟೇರ್ಗೆ ಇಳಿಕೆಯಾಗಿದೆ. ಅದೇ ಶಿಕಾರಿಪುರದಲ್ಲಿ ಮಾವು ಕೃಷಿಗೆ ಕೆಲ ರೈತರು ಮುಂದೆ ಬಂದಿದ್ದರಿಂದ ಇಲ್ಲಿ 836 ಹೆ.ನಿಂದ 1043 ಹೆ.ಗೆ ಹೆಚ್ಚಿದೆ. ಸೊರಬದಲ್ಲಿ 1,244 ಹೆ.ನಿಂದ 1,624 ಹೆ.ಗೆ ಏರಿಕೆಯಾಗಿದೆ. ಆದರೂ ಹತ್ತು ವರ್ಷಗಳ ಅಂತರಕ್ಕೆ ಹೋಲಿಸಿದರೆ ಇದನ್ನು ಬೆಳವಣಿಗೆ ಎನ್ನಲಾಗದು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಮಾವು ಬೆಳೆ ವಿಸ್ತೀರ್ಣ (ಹೆಕ್ಟೆರ್ಗಳಲ್ಲಿ)
ವರ್ಷ- ಮಾವು
- 2015-16 -3,959
- 2016-17 -3,359
- 2017-18 -3,265
- 2018-19 -3,547
- 2019-20- 3,334
- 2020-21 -3,399
ಟಿ.ಸಿದ್ದಲಿಂಗೇಶ್ವರ, ಪ್ರಭಾರ ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ