ಆ್ಯಪ್ನಗರ

ಮಾರ್ಗದರ್ಶನದಿಂದ ಕೃಷಿ ಲಾಭದಾಯಕ

ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಾಗರ ಮತ್ತು ಇಲ್ಲಿನ ರೈತ ಸಂಪರ್ಕ ಕೇಂದ್ರದ ನೇತೃತ್ವದಲ್ಲಿ ಆನಂದಪುರಂ ಹೋಬಳಿಯ ಸಮಗ್ರ ಕೃಷಿ ಅಭಿಯಾನ ಸೋಮವಾರ ಆರಂಭವಾಯಿತು. ಆನಂದಪುರಂ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಕೃಷಿ ಅಭಿಯಾನ ಉದ್ಘಾಟಿಸಿದರು.

Vijaya Karnataka 16 Jul 2019, 5:00 am
ಆನಂದಪುರ: ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಾಗರ ಮತ್ತು ಇಲ್ಲಿನ ರೈತ ಸಂಪರ್ಕ ಕೇಂದ್ರದ ನೇತೃತ್ವದಲ್ಲಿ ಆನಂದಪುರಂ ಹೋಬಳಿಯ ಸಮಗ್ರ ಕೃಷಿ ಅಭಿಯಾನ ಸೋಮವಾರ ಆರಂಭವಾಯಿತು. ಆನಂದಪುರಂ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಕೃಷಿ ಅಭಿಯಾನ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮುಂಗಾರಿನ ಆರಂಭದಲ್ಲಿ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ಮಳೆ ಆಧಾರಿತ ಕೃಷಿ ಮಾಡುವವರೇ ಈ ವ್ಯಾಪ್ತಿಯಲ್ಲಿ ಅಧಿಕವಾಗಿದ್ದಾರೆ. ಕೃಷಿ ಇಲಾಖೆಯ ತಜ್ಞ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಕೃಷಿ ಲಾಭದಾಯಕ ಗೊಳಿಸಲು ಗಮನ ನೀಡಬೇಕಾಗಿದೆ ಎಂದರು.
Vijaya Karnataka Web SMR-15ANPP5 KRUSHI


ಕೃಷಿ ಅಧಿಕಾರಿ ವಿನಾಯಕರಾವ್‌ ಮಾತನಾಡಿ, ಸರಕಾರದಿಂದ ಕೃಷಿ ಚಟುವಟಿಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತದೆ. ಕೃಷಿ ಕಾರ‍್ಯದಲ್ಲಿ ಬಳಸುವ ಬೀಜ, ಗೊಬ್ಬರ , ಕೀಟ ನಾಶಕ ಇತ್ಯಾದಿ ಪ್ರತಿಯೊಂದನ್ನೂ ಅಧಿಕೃತ ಕಂಪನಿಯದ್ದನ್ನೇ ಅನುಸರಿಸಬೇಕು. ಈ ಬಗ್ಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದರು. ಔಷಧ ಸಿಂಪಡಣೆ ಯಂತ್ರ, ಕೊಯ್ಲು ಯಂತ್ರ ಇತ್ಯಾದಿಗೆ ಕೃಷಿ ಇಲಾಖೆಯಿಂದ ಅರ್ಹ ರೈತರಿಗೆ ಸಬ್ಸಿಡಿ ದೊರೆಯುತ್ತದೆ. ರೈತರು ಆಗಾಗ ಕೃಷಿ ಕ್ಷೇತ್ರದಲ್ಲಿ ಪರಿಚಯಿಸಲ್ಪಡುವ ಅತ್ಯಾಧುನಿಕ ಯಂತ್ರ ಬಗ್ಗೆ ಮತ್ತು ಆಯಾ ಭೌಗೋಳಿಕ ಪರಿಸರಕ್ಕೆ ಯೋಗ್ಯವಾದ ಕೃಷಿ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಪಡೆಯಬೇಕೆಂದರು. ಗ್ರಾ.ಪಂ. ಸದಸ್ಯರಾದ ಸುನಂದಮ್ಮ, ಸುಜಾತ, ಗಂಗಾ, ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮೋಹನ್‌, ತೋಟಗಾರಿಕೆ ಇಲಾಖೆ ಅಧಿಕಾರಿ ರಮೇಶ, ಮೀನುಗಾರಿಕೆ ಇಲಾಖಾ ಅಧಿಕಾರಿ ಸೌಮ್ಯ, ಅಂಗನವಾಡಿ ಮೇಲ್ವಿಚಾರಕಿ ರೇಖಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ