ಆ್ಯಪ್ನಗರ

ಗ್ರಾಮದಲ್ಲಿ ವಾಂತಿಬೇಧಿ: ಅಪ್ಪ,ಮಗ ಸಾವು

ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ವಾಂತಿಭೇದಿಯಿಂದಾಗಿ ಅಪ್ಪ-ಮಗ ಮೃತಪಟ್ಟು 25ಕ್ಕೂ ಜನರು ಅಸ್ವಸ್ಥರಾಗಿದ್ದಾರೆ.

Vijaya Karnataka Web 11 Feb 2018, 5:40 pm
ಶಿವಮೊಗ್ಗ: ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ವಾಂತಿಭೇದಿಯಿಂದಾಗಿ ಅಪ್ಪ-ಮಗ ಮೃತಪಟ್ಟು 25ಕ್ಕೂ ಜನರು ಅಸ್ವಸ್ಥರಾಗಿದ್ದಾರೆ. ಶಿವಪ್ಪ ಶನಿವಾರ ತಡರಾತ್ರಿ ಮೃತಪಟ್ಟಿದ್ದು, ಅವರ ಮಗ ಹನುಮಂತಪ್ಪ(40) ಭಾನುವಾರ ಮಧ್ಯಾಹ್ನ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Vijaya Karnataka Web father and son died by diarrhea
ಗ್ರಾಮದಲ್ಲಿ ವಾಂತಿಬೇಧಿ: ಅಪ್ಪ,ಮಗ ಸಾವು


ಅಸ್ವಸ್ಥಗೊಂಡವರು ಮೈದೊಳಲು ಪ್ರಾಥಮಿ ಆರೋಗ್ಯ ಕೇಂದ್ರ ಮತ್ತು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನ ತೊಟ್ಟಿ ಸ್ವಚ್ಛ ಮಾಡದೆ ಕಲುಷಿತ ನೀರು ಪೂರೈಕೆಯಿಂದಾಗಿ ವಾಂತಿಬೇಧಿ ವ್ಯಾಪಿಸಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಸ್ಥಳಕ್ಕೆ ಜಿ.ಪಂ ಸಿಇಒ, ಡಿಎಚ್‌ಒ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ನೀರು ಪೂರೈಕೆ ತೊಟ್ಟಿ ಮತ್ತು ಪೈಪ್‌ಲೈನ್ ಸ್ವಚ್ಛ ಮಾಡಲು ಸೂಚಿಸಿದ್ದಾರೆ. ಜನರು ಚೇತರಿಸಿಕೊಳ್ಳುವವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಹಿರಿಯ ಅಧಿಕಾರಿಗಳು ಪಂಚಾಯಿತಿ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ