ಆ್ಯಪ್ನಗರ

ಮಗು ಸಾವಿನ ನೋವಿಗೆ ತಂದೆ ಆತ್ಮಹತ್ಯೆ

ಪುಟ್ಟ ಮಗನ ಆಕಸ್ಮಿಕ ಸಾವಿನ ನೋವಿನಲ್ಲಿ ಬಳಲಿದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಚಿಂತಾಜನಕ ಘಟನೆ ಕುಸ್ಕೂರು ಗ್ರಾಮದಲ್ಲಿ ನಡೆದಿದೆ.

Vijaya Karnataka 10 Aug 2018, 10:07 pm
ಶಿರಾಳಕೊಪ್ಪ : ಪುಟ್ಟ ಮಗನ ಆಕಸ್ಮಿಕ ಸಾವಿನ ನೋವಿನಲ್ಲಿ ಬಳಲಿದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಚಿಂತಾಜನಕ ಘಟನೆ ಕುಸ್ಕೂರು ಗ್ರಾಮದಲ್ಲಿ ನಡೆದಿದೆ.
Vijaya Karnataka Web father committed suicide in the death of a child
ಮಗು ಸಾವಿನ ನೋವಿಗೆ ತಂದೆ ಆತ್ಮಹತ್ಯೆ


ಮಂಜುನಾಥ್‌(35) ಮೃತಪಟ್ಟವರು. ಮಂಜುನಾಥ್‌ ಅವರ ಒಂದೂವರೆ ವರ್ಷದ ಮಗು ಕುಮಾರ, 4 ನಾಲ್ಕು ದಿನದ ಹಿಂದೆ ನೀರು ತುಂಬಿದ್ದ ಬಕೆಟ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿತ್ತು. ಮಗುವಿನ ಸಾವಿನಿಂದ ತೀವ್ರ ಮನನೊಂದಿದ್ದ ಮಂಜುನಾಥ್‌, ಬುಧವಾರ ಕಳೆನಾಶಕ ಸೇವಿಸಿದ್ದರು. ಅವರಿಗೆ ಶಿಕಾರಿಪುರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ವೈದ್ಯರ ಸಲಹೆ ಮೇಲೆಗೆ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ