ಆ್ಯಪ್ನಗರ

ಕೆಎಫ್‌ಡಿ ಸೋಂಕಿನ ಭೀತಿ: ಆತಂಕ

ತಾಲೂಕಿನ ವಿವಿಧೆಡೆ ಮಂಗಗಳು ಸಾಯುತ್ತಿರುವುದು ಶಂಕಿತ ಕೆಎಫ್‌ಡಿ ಸೋಂಕು ತಗುಲುವ ಆತಂಕಕ್ಕೆ ಕಾರಣವಾಗಿದೆ. ಗುರುವಾರ ಪಟ್ಟಣಕ್ಕೆ ಸಮೀಪದ ಚಂದನವನ ಬಳಿ ಮಂಗದ ಕಳೇಬರ ಪತ್ತೆಯಾಗಿದ್ದು, ಆರೋಗ್ಯ ಮತ್ತು ಪಶುವೈದ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

Vijaya Karnataka 11 Jan 2019, 5:00 am
ಹೊಸನಗರ: ತಾಲೂಕಿನ ವಿವಿಧೆಡೆ ಮಂಗಗಳು ಸಾಯುತ್ತಿರುವುದು ಶಂಕಿತ ಕೆಎಫ್‌ಡಿ ಸೋಂಕು ತಗುಲುವ ಆತಂಕಕ್ಕೆ ಕಾರಣವಾಗಿದೆ. ಗುರುವಾರ ಪಟ್ಟಣಕ್ಕೆ ಸಮೀಪದ ಚಂದನವನ ಬಳಿ ಮಂಗದ ಕಳೇಬರ ಪತ್ತೆಯಾಗಿದ್ದು, ಆರೋಗ್ಯ ಮತ್ತು ಪಶುವೈದ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
Vijaya Karnataka Web SMR-10HOSP4

ಬುಧವಾರ ಸಂಪೆಕಟ್ಟೆ ಸಮೀಪದ ತೌಡಗಳಲೆಯಲ್ಲಿ 3, ನಿಟ್ಟೂರು ಸಮೀಪದ ಕೆಳಕಲ್ಮನೆ ಬಳಿ 1 ಹಾಗೂ ಮುಂಬಾರು ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ 2ಮಂಗಗಳ ಶವ ಬಹುತೇಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ಹರಿದ್ರಾವತಿ, ಸಂಪೆಕಟ್ಟೆಯಲ್ಲಿ ಕೆಎಫ್‌ಡಿ ಸೋಂಕಿನ ಕುರಿತು ಆರೋಗ್ಯ ಇಲಾಖೆ ಜನಜಾಗೃತಿ ಕಾರ‍್ಯಕ್ರಮ ನಡೆಸಿದೆ.

ಸಾಗರ ತಾಲೂಕಿನ ಕೆಲವೆಡೆ ಮಂಗನಕಾಯಿಲೆ ಹರಡಿರುವ ಕುರಿತು ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಮಂಗಗಳು ಸತ್ತಿದ್ದರೂ, ಆರೋಗ್ಯ ಇಲಾಖೆ ಗಮನಕ್ಕೆ ತಂದಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಡಿಸೆಂಬರ್‌ ಮಧ್ಯಭಾಗದಲ್ಲೇ ಹಲವು ಕಡೆ ಮಂಗಗಳು ಸತ್ತಿದ್ದು, ಗ್ರಾಮಸ್ಥರು ಅದನ್ನು ದಹನ ಮಾಡಿದ್ದಾರೆ.

ಬೈದೂರಿನಲ್ಲಿ ಶೀಘ್ರ ಲಸಿಕಾ ಕಾರ‍್ಯಕ್ರಮ
ಇದುವರೆಗೂ ತಾಲೂಕಲ್ಲಿ ಕೆಎಫ್‌ಡಿ ಸೋಂಕು ಮನುಷ್ಯರಲ್ಲಿ ಪತ್ತೆಯಾಗಿಲ್ಲ. ಹಸಿರುಮಕ್ಕಿ ಸಮೀಪದ ಬೈದೂರಿನಲ್ಲಿ ಶೀಘ್ರವೇ ಲಸಿಕಾ ಕಾರ‍್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಇದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗೂ ಲಸಿಕೆ ನೀಡಲಾಗುವುದು. ತುಮಕೂರು ಮತ್ತು ಮಂಡ್ಯದಿಂದ ತಜ್ಞರು ಆಗಮಿಸಿದ್ದು ಉಣ್ಣೆಗಳ ಮಾದರಿ ಸಂಗ್ರಹಿಸಲಾಗುತ್ತಿದೆ. ಪುರಪ್ಪೆಮನೆ, ಬಾಣಿಗ, ಸಂಪೆಕಟ್ಟೆ, ನಿಟ್ಟೂರಿನಲ್ಲಿ ಮಾದರಿ ಸಂಗ್ರಹಿಸಲಾಗಿದ್ದು, ರಿಪ್ಪನ್‌ಪೇಟೆ ಮತ್ತು ಹುಂಚಾದಲ್ಲಿ ಶುಕ್ರವಾರ ಸಂಗ್ರಹಿಸಲಾಗುತ್ತದೆ. ಉಣ್ಣೆಯಲ್ಲಿ ಸೋಂಕು ಕಂಡು ಬಂದರೆ, ಆ ಪ್ರದೇಶದ ಜನರಿಗೂ ಕೆಎಫ್‌ಡಿ ಲಸಿಕೆ ನೀಡಲಾಗುವುದು.

-ಡಾ.ಸುರೇಶ್‌, ತಾಲೂಕು ವೈದ್ಯಾಧಿಕಾರಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ