ಆ್ಯಪ್ನಗರ

‘ಉತ್ಸವ’ ನೆಲದ ಸಂಸ್ಕೃತಿಯ ಪ್ರತೀಕ

ಸನಾತನ ಹಿಂದೂ ಧರ್ಮದಲ್ಲಿ ಜಾತ್ರೆ, ಉತ್ಸವಕ್ಕೆ ವಿಶೇಷ ಅರ್ಥವಿದೆ. ಹಬ್ಬ , ಉತ್ಸವ, ಜಾತ್ರೆ ನೆಲದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸ್ಥಳೀಯ ಕಾಳೇನಹಳ್ಳಿಯ ಶಿವಯೋಗಾಶ್ರಮದ ಶ್ರೀ ಮನಿಪ್ರ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Vijaya Karnataka 8 Mar 2019, 5:00 am
ಶಿಕಾರಿಪುರ: ಸನಾತನ ಹಿಂದೂ ಧರ್ಮದಲ್ಲಿ ಜಾತ್ರೆ, ಉತ್ಸವಕ್ಕೆ ವಿಶೇಷ ಅರ್ಥವಿದೆ. ಹಬ್ಬ , ಉತ್ಸವ, ಜಾತ್ರೆ ನೆಲದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸ್ಥಳೀಯ ಕಾಳೇನಹಳ್ಳಿಯ ಶಿವಯೋಗಾಶ್ರಮದ ಶ್ರೀ ಮನಿಪ್ರ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
Vijaya Karnataka Web festival is a symbol of ground culture
‘ಉತ್ಸವ’ ನೆಲದ ಸಂಸ್ಕೃತಿಯ ಪ್ರತೀಕ


ಪಟ್ಟಣದ ಆದಿಶಕ್ತಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸನಾತನ ಹಿಂದೂ ಧರ್ಮ ಜಗತ್ತಿನ ಅತಿ ಶ್ರೇಷ್ಠ ಧರ್ಮ. ಧರ್ಮ ಮಾರ್ಗದಿಂದ ಪ್ರತಿಯೊಬ್ಬರಿಗೂ ನೆಮ್ಮದಿ ದೊರೆಯಲಿದೆ. ಧರ್ಮದ ರಕ್ಷಣೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಲಭಿಸಲಿದೆ ಎಂದ ಅವರು, ಆದಿಶಕ್ತಿ ದೇವಿ ಶಕ್ತಿದೇವತೆಯಾಗಿದೆ. ಬೆಳಗಾವಿ ಜಿಲ್ಲೆಯ ಗರಗದಿಂದ ರಾಣೆಬೆನ್ನೂರು ನಂತರ ಶಿಕಾರಿಪುರದಲ್ಲಿ ನೆಲೆಸಿದ ಐತಿಹ್ಯ ಹೊಂದಿರುವ ಆದಿಶಕ್ತಿ ದೇವಿ ಚಿಂಚನೂರು ದುರ್ಗಮ್ಮ ಎಂಬ ಅನ್ವರ್ಥ ನಾಮದಿಂದ ಪ್ರಸಿದ್ಧಿ ಗಳಿಸಿದೆ. ಭಕ್ತರ ಇಷ್ಟಾರ್ಥ ನೆರವೇರಿಸುವ ಶಕ್ತಿ ಇಲ್ಲಿದೆ ಎಂದರು.

ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಕೆ.ಹಾಲಪ್ಪ ಭದ್ರಾಪುರ ಮಾತನಾಡಿ, ದೇವಿ ಅಭಯ ಆಶೀರ್ವಾದದಿಂದ ಸಹಸ್ರಾರು ಭಕ್ತರು ನೆಮ್ಮದಿ ಕಂಡುಕೊಂಡಿದ್ದಾರೆ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಉಮೇಶ್‌ ಲೋಂಡೆ, ಉಪಾಧ್ಯಕ್ಷ ಕುಬೇಂದ್ರ, ಪ್ರ.ಕಾ.ಮಂಜುನಾಥ್‌, ಖಜಾಂಚಿ ಪುರುಷೋತ್ತಮ್‌, ಸುನೀಲ್‌, ಆರ್‌.ಈಶ್ವರಪ್ಪ, ಶಿವನಗೌಡ ಬೊಗಳೆಗೌಡರ, ಜಯರಾಂ, ಮಂಜುನಾಥ್‌ ನೆಲವಾಗಿಲು, ಮಂಜಪ್ಪ ಮಾಸ್ತಿಬೈಲು, ರಮೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ