ಆ್ಯಪ್ನಗರ

‘ಹೋರಾಟ, ಬಲಿದಾನದ ಪ್ರತಿಫಲ ಸ್ವಾತಂತ್ರ್ಯ’

ದೇಶದ ಸರ್ವತೋಮುಖ ಪ್ರಗತಿಗೆ ಶಿಕ್ಷ ಣವೇ ಮೂಲಮಂತ್ರ. ಅಭಿವೃದ್ಧಿಗೆ ಒದಗುವ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ಹೋಗಲಾಡಿಸುವ ಶಕ್ತಿ ಶಿಕ್ಷ ಣಕ್ಕಿದೆ ಎಂದು ತಹಸೀಲ್ದಾರ್‌ ಚಂದ್ರಶೇಖರನಾಯ್ಕ್‌ ಹೇಳಿದರು.

Vijaya Karnataka 16 Aug 2018, 5:00 am
ಹೊಸನಗರ: ದೇಶದ ಸರ್ವತೋಮುಖ ಪ್ರಗತಿಗೆ ಶಿಕ್ಷ ಣವೇ ಮೂಲಮಂತ್ರ. ಅಭಿವೃದ್ಧಿಗೆ ಒದಗುವ ಎಲ್ಲ ಅಡೆತಡೆಗಳನ್ನು ಯಶಸ್ವಿಯಾಗಿ ಹೋಗಲಾಡಿಸುವ ಶಕ್ತಿ ಶಿಕ್ಷ ಣಕ್ಕಿದೆ ಎಂದು ತಹಸೀಲ್ದಾರ್‌ ಚಂದ್ರಶೇಖರನಾಯ್ಕ್‌ ಹೇಳಿದರು.
Vijaya Karnataka Web SMR-15HOSP1


ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ದ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸ್ವಾತಂತ್ರ ಸುಲಭದಲ್ಲಿ ದೊರೆತಿಲ್ಲ. ಹಲವು ಮಹಾತ್ಮರ ನೂರಾರು ವರ್ಷಗಳ ಹೋರಾಟ, ಬಲಿದಾನದ ಪ್ರತಿಫಲ. ಆದರೆ ಸ್ವಾತಂತ್ರ್ಯದ ನೈಜ ಆಶಯ ಇನ್ನೂ ಸಂಪೂರ್ಣ

ನೆರವೇರಿಲ್ಲ. ಸ್ವಾತಂತ್ರ ಎಂದರೆ ಸ್ವೇಚ್ಛಾಚಾರವಲ್ಲ. ಯುವ ಜನತೆ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದೆ ಎಂದರು. ತಾ.ಪಂ.ಅಧ್ಯಕ್ಷ ವಾಸಪ್ಪಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಪ.ಪಂ.ಅಧ್ಯಕ್ಷ ಹಾಲಗದ್ದೆ ಉಮೇಶ್‌, ಉಪಾಧ್ಯಕ್ಷ ಸುಜಾತಾ ಡಿ ಉಡುಪ, ಜಿ.ಪಂ.ಸದಸ್ಯರಾದ ಎಸ್‌.ಸುರೇಶ್‌, ಶ್ವೇತಾ ಬಂಡಿ, ಎಪಿಎಂಸಿ ಅಧ್ಯಕ್ಷ ಬಂಡಿ ರಾಮಚಂದ್ರ, ತಾಪಂ ಕಾರ‍್ಯನಿರ್ವಹಣಾಧಿಕಾರಿ ಡಾ.ಎಂ.ಎಸ್‌.ರಾಮಚಂದ್ರ, ವೃತ್ತ ನಿರೀಕ್ಷ ಕ ಮಂಜುನಾಥ್‌, ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಕೇಶವಮೂರ್ತಿ, ಆರ್‌ಎಫ್‌ಓ ಕೆ.ಸಿ.ಜಯೇಶ್‌ ಮತ್ತಿತರರು ಹಾಜರಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಬಿ.ಎಚ್‌.ರಾಮಪ್ಪಗೌಡ ಸ್ವಾಗತಿಸಿ, ಡಾ.ಅಂಜಲಿ ಅಶ್ವಿನ್‌ಕುಮಾರ್‌ ನಿರೂಪಿಸಿದರು. ಕಳೆದ ಶೈಕ್ಷ ಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ