ಆ್ಯಪ್ನಗರ

ಜಿ.ಆರ್‌.ಪಂಡಿತರಿಗೆ ಎಫ್‌ಐಪಿ ಡಿಸ್ಟಿಂಕ್ಷ ನ್‌ ಆವಾರ್ಡ್‌

ಇಲ್ಲಿನ ಗಾಂಧೀನಗರದ ನಿವಾಸಿ, ಪ್ರಧಾನ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ಜಿ.ಆರ್‌.ಪಂಡಿತ ಅವರಿಗೆ ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಫಿಯ ಆರ್ಟಿಸ್ಟ್‌ ಎಫ್‌ಐಪಿ ಡಿಸ್ಟಿಂಕ್ಷ ನ್‌ ಆವಾರ್ಡ್‌ ಘೋಷಚಣೆಯಾಗಿದೆ.

Vijaya Karnataka 7 Aug 2019, 5:00 am
ಸಾಗರ: ಇಲ್ಲಿನ ಗಾಂಧೀನಗರದ ನಿವಾಸಿ, ಪ್ರಧಾನ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ಜಿ.ಆರ್‌.ಪಂಡಿತ ಅವರಿಗೆ ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೋಗ್ರಫಿಯ ಆರ್ಟಿಸ್ಟ್‌ ಎಫ್‌ಐಪಿ ಡಿಸ್ಟಿಂಕ್ಷ ನ್‌ ಆವಾರ್ಡ್‌ ಘೋಷಚಣೆಯಾಗಿದೆ.
Vijaya Karnataka Web SMR-05sgr14


ಭಾರತದ ಅತ್ಯಂತ ಹಿರಿಯ ಸಂಸ್ಥೆಯಾದ ಎಫ್‌ಐಪಿ ಸಲಾನ್‌ ಸ್ಪರ್ಧೆಗಳಲ್ಲಿ ಸ್ವೀಕೃತವಾದ ಛಾಯಾಚಿತ್ರ, ಆವಾರ್ಡ್‌ ಇತ್ಯಾದಿಗಳನ್ನು ಪರಿಗಣಿಸಿ ನೀಡುವ ಆರ್ಟಿಸ್ಟ್‌ ಆವಾರ್ಡ್‌ ಇದಾಗಿದ್ದು, ಜಿ.ಆರ್‌.ಪಂಡಿತರು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದ ಸುಮಾರು 550 ಛಾಯಾಚಿತ್ರಗಳು ಈಗಾಗಲೇ ಸಲಾನ್‌ನಲ್ಲಿ ಸ್ವೀಕೃತವಾಗಿವೆ.

ಅಮೆರಿಕಾದ ಪಿಎಸ್‌ಎ ಬಂಗಾರದ ಪದಕ, ಬೆಳ್ಳಿ, ರಿಬ್ಬನ್‌ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಆವಾರ್ಡ್‌ಗಳು ಬಂದಿವೆ. ಅಲ್ಲದೇ ಅಲ್ಮೇನಿಯಾ,ಸೆಲ್ವಿಯಾ, ಇಟಲಿ, ಜಾರ್ಜಿಯಾ ಮುಂತಾದ ಕಡೆಗಳಲ್ಲಿನ ಸ್ಪರ್ಧೆಗಳಲ್ಲಿ ಸಹ ಪಂಡಿತರು ಸ್ಥಾನಗಳಿಸಿದ್ದಾರೆ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ ಜಿ.ಆರ್‌.ಪಂಡಿತರಿಗೆ ಎಫ್‌ಐಪಿ ಆವಾರ್ಡ್‌ ಘೋಷಿಸಿದೆ. ದೇಶದ 120 ಛಾಯಾಗ್ರಾಹಕರು ಈ ಆವಾರ್ಡ್‌ಗೆ ಭಾಜನರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ