ಆ್ಯಪ್ನಗರ

ಎಂಪಿಎಂ ನೀಲಗಿರಿ ನೆಡುತೋಪಿಗೆ ಬೆಂಕಿ: ಅಪಾರ ನಷ್ಟ

ಸಮೀಪದ ಸುಳಗೋಡು ಗ್ರಾಮ ಸಂಪರ್ಕ ರಸ್ತೆಯ ಬಲ ಭಾಗದಲ್ಲಿರುವ ಎಂಪಿಎಂ ನೀಲಗಿರಿ ನೆಡುತೋಪಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

Vijaya Karnataka 23 May 2019, 5:00 am
ಆನಂದಪುರಂ: ಸಮೀಪದ ಸುಳಗೋಡು ಗ್ರಾಮ ಸಂಪರ್ಕ ರಸ್ತೆಯ ಬಲ ಭಾಗದಲ್ಲಿರುವ ಎಂಪಿಎಂ ನೀಲಗಿರಿ ನೆಡುತೋಪಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
Vijaya Karnataka Web SMR-22ANPP5


ಸುಮಾರು 20 ಎಕರೆಗೂ ಅಧಿಕ ವ್ಯಾಪ್ತಿಯ ನೆಡುತೋಪಿನ ನೀಲಗಿರಿ ಮರಗಳು ಸುಟ್ಟು ಕರಕಲಾಗಿದೆ. ಇವುಗಳ ಪೈಕಿ ಅರ್ಧದಷ್ಟು ಪ್ರದೇಶದಲ್ಲಿ ಕಳೆದ ವರ್ಷ ಮರ ಕಟಾವು ಮಾಡಲಾಗಿತ್ತು. ಕಟಾವು ಮಾಡಿದ ಮರದ ಬುಡದಲ್ಲಿ ಎರಡನೇ ಬೆಳೆಯ ಕಾಂಡ ಬೆಳೆದಿತ್ತು. ಅಲ್ಲದೇ ಇನ್ನು ಕೆಲವು ಭಾಗದಲ್ಲಿ ಸುಮಾರು 4-5 ವರ್ಷ ಪ್ರಾಯದ ಕಟಾವಿನ ಹಂತದಲ್ಲಿದ್ದ ದೊಡ್ಡ ಮರಗಳು ಸಹ ಬೆಂಕಿಗೆ ಆಹುತಿಯಾಗಿದೆ. ಸುಟ್ಟ ಮರಗಳನ್ನು ಗಮನಿಸಿದರೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಸುಳಗೋಡು ರಸ್ತೆಯ ಎಡಭಾಗದಿಂದ ಮಹಂತನ ಮಠದ ಕಡೆಗೆ ಸಾಗುವ ರಸ್ತೆಯಲ್ಲಿ ಸಂಚರಿಸಿದಾಗ ನೀಲಗಿರಿ ಮರಗಳು ಬೆಂಕಿಯಲ್ಲಿ ಸುಟ್ಟ ದೃಶ್ಯ ಗೋಚರಿಸುತ್ತದೆ. ಎಂಪಿಎಂ ಅರಣ್ಯ ಕಾವಲುಗಾರನ ತಾತ್ಕಾಲಿಕ ಶೆಡ್‌ ಸಹ ಬೆಂಕಿಯಲ್ಲಿ ಸುಟ್ಟುಹೋಗಿದೆ. ಎಂಪಿಎಂ ಸಿಬ್ಬಂದಿ ನಷ್ಟದ ಅಂದಾಜು ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ