ತೀರ್ಥಹಳ್ಳಿ: ಜಾನುವಾರು ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟುಹೋದ ಘಟನೆ ಶನಿವಾರ ತಾಲೂಕಿನ ಬಗ್ಗೋಡಿಗೆ ಗ್ರಾಮದಲ್ಲಿ ನಡೆದಿದೆ. ರೈತ ಶೇಷಪ್ಪಗೌಡ ಅವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 2 ಲಕ್ಷ ರೂ ನಷ್ಟ ಉಂಟಾಗಿದೆ. ಜಾನುವಾರು ಕೊಟ್ಟಿಗೆ, ಜಾನುವಾರು ಮೇವಿನ ಹುಲ್ಲು ಬೆಂಕಿಗೆ ಆಹುತಿ ಆಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಪಿಎಂಸಿ ಅಧ್ಯಕ್ಷ ಹಸಿರುಮನೆಮಹಾಬಲೇಶ್, ಹೊನ್ನೇತಾಳು ಗ್ರಾ.ಪಂ.ಸದಸ್ಯ ಕೋಟೆಗುಡ್ಡ ಸುರೇಂದ್ರ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಬೆಂಕಿಗೆ ಕೊಟ್ಟಿಗೆ ಆಹುತಿ: ನಷ್ಟ
ಜಾನುವಾರು ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟುಹೋದ ಘಟನೆ ಶನಿವಾರ ತಾಲೂಕಿನ ಬಗ್ಗೋಡಿಗೆ ಗ್ರಾಮದಲ್ಲಿ ನಡೆದಿದೆ. ರೈತ ಶೇಷಪ್ಪಗೌಡ ಅವರಿಗೆ ಸೇರಿದ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮ ಸುಮಾರು 2 ಲಕ್ಷ ರೂ ನಷ್ಟ ಉಂಟಾಗಿದೆ.
Vijaya Karnataka 24 Feb 2019, 5:00 am