ಆ್ಯಪ್ನಗರ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಸಿಡಿಸಿ ವಿಕೃತಿ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಸಿಡಿಸಿ ವಿಕೃತಿ ಮೆರೆದಿದ್ದ ಮೂವರು ಯುವಕರಿಗೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.

Vijaya Karnataka 31 Oct 2019, 5:00 am
ಶಿವಮೊಗ್ಗ: ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಸಿಡಿಸಿ ವಿಕೃತಿ ಮೆರೆದಿದ್ದ ಮೂವರು ಯುವಕರಿಗೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದಾರೆ.
Vijaya Karnataka Web fireworks at the dogs tail
ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಸಿಡಿಸಿ ವಿಕೃತಿ


ಭದ್ರಾವತಿ ತಾಲೂಕಿನ ಸಿಂಗನಮನೆಯಲ್ಲಿಭರತ್‌, ನಿತಿನ್‌, ಮಿಥುನ್‌ ಎಂಬುವರು ನಾಯಿ ಬಾಲಕ್ಕೆ ಹನುಮಂತನ ಬಾಲದ ಪಟಾಕಿ ಅಂಟಿಸಿ ವಿಕೃತಿ ಮೆರೆದಿದ್ದು, ಅಲ್ಲದೇ ಅದನ್ನು ಸಾಮಾಜಿಕ ಜಾಲ ತಾಣದಲ್ಲಿಹರಿಬಿಟ್ಟಿದ್ದರು. ವಿಡಿಯೊ ವೀಕ್ಷಿಸಿದ ಶಿವಮೊಗ್ಗ ಪ್ರಾಣಿದಯಾ ಸಂಘದವರು ಇವರ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಮೂವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಿದ್ದಾರೆ.

ಸುಳಿವುಕೊಟ್ಟ ಬೈಕ್‌ ನಂ: ಸಾಮಾಜಿಕ ಜಾಲ ತಾಣದಲ್ಲಿಹರಿಬಿಟ್ಟಿದ್ದ ವಿಡಿಯೊದಲ್ಲಿಬೈಕ್‌ ಇರುವುದನ್ನು ಪರಿಶೀಲಿಸಿ, ಬೈಕ್‌ ನಂಬರ್‌ ಆಧಾರವಾಗಿಟ್ಟುಕೊಂಡು ಈ ಮೂವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ