ಆ್ಯಪ್ನಗರ

ಶಿಬಿರಾರ್ಥಿಗಳಿಗೆ ತಜ್ಞರಿಂದ ಫಿಟ್ನೆಸ್‌ ಸಲಹೆ

ವಿಶ್ವ ಆರೋಗ್ಯ ದಿನದ ಪ್ರಯುಕ್ತ ನಗರದ ತೀರ್ಥಹಳ್ಳಿ ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 'ವಿಜಯ ಕರ್ನಾಟಕ' ದಿನಪತ್ರಿಕೆ ಸಹಯೋಗದಲ್ಲಿ 'ಆರೋಗ್ಯ ಉಚಿತ ತಪಾಸಣಾ ಶಿಬಿರ'ವನ್ನು ಭಾನುವಾರ ಏರ್ಪಡಿಸಲಾಗಿತ್ತು.

Vijaya Karnataka 9 Apr 2018, 5:00 am
ಶಿವಮೊಗ್ಗ : ವಿಶ್ವ ಆರೋಗ್ಯ ದಿನದ ಪ್ರಯುಕ್ತ ನಗರದ ತೀರ್ಥಹಳ್ಳಿ ರಸ್ತೆಯಲ್ಲಿರುವ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 'ವಿಜಯ ಕರ್ನಾಟಕ' ದಿನಪತ್ರಿಕೆ ಸಹಯೋಗದಲ್ಲಿ 'ಆರೋಗ್ಯ ಉಚಿತ ತಪಾಸಣಾ ಶಿಬಿರ'ವನ್ನು ಭಾನುವಾರ ಏರ್ಪಡಿಸಲಾಗಿತ್ತು.
Vijaya Karnataka Web fitness suggest from specialist
ಶಿಬಿರಾರ್ಥಿಗಳಿಗೆ ತಜ್ಞರಿಂದ ಫಿಟ್ನೆಸ್‌ ಸಲಹೆ


ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಂದ ಸುಮಾರು 250ಕ್ಕೂ ಅಧಿಕ ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 9ರಿಂದಲೇ ನೋಂದಣಿ ಆರಂಭಗೊಂಡಿತ್ತು.

ಹಿಮೊಗ್ಲೋಬಿನ್‌, ಬಿಪಿ, ಅರ್ಥೊಪೆಡಿಕ್‌, 40 ವರ್ಷ ಮೇಲ್ಪಟ್ಟವರಿಗೆ ಕಾರ್ಡಿಯಾಲಜಿ ವಿಭಾಗದಲ್ಲಿ ಇಸಿಜಿ/ಇಕೋ ಸ್ಕ್ರೀನಿಂಗ್‌, ರೇಡಿಯಾಲಜಿ ವಿಭಾಗದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಅಲ್ಟ್ರಾಸೌಂಡ್‌ ಸ್ಕ್ಯಾ‌ನಿಂಗ್‌, ನೆಫ್ರಾಲಜಿ ಮತ್ತು ಫಿಜಿಷಿಯನ್‌ ವಿಭಾಗದಲ್ಲಿ ಮಧುಮೇಹಿಗಳಿಗೆ ರೊಟೀನ್‌ ಯುರಿನ್‌ ತಪಾಸಣೆ ಮಾಡಲಾಯಿತು. ಸಂಜೆ 6ರವರೆಗೆ ನಡೆದ ಉಚಿತ ತಪಾಸಣೆಯಲ್ಲಿ ನಾನಾ ಕಡೆಗಳಿಂದ ಸಾರ್ವಜನಿಕರು ಪಾಲ್ಗೊಂಡರು.

'ಈ ಎಲ್ಲ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಸುಮಾರು 2450 ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ, ಬಡವರ, ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ತಪಾಸಣೆ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಏರ್ಪಡಿಸಲಾಗುವ ಶಿಬಿರದಲ್ಲಿ ನೂರಾರು ಜನ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳುತ್ತಾರೆ' ಎಂದು ಆಸ್ಪತ್ರೆ ಮಾರ್ಕೆಟಿಂಗ್‌ ವಿಭಾಗದ ಹಿರಿಯ ವ್ಯವಸ್ಥಾಪಕ ರಾಜಾ ಸಿಂಗ್‌ ಹೇಳಿದರು.

45ರಿಂದ 55ರ ವಯೋಮಾನದಲ್ಲಿರುವವರು ಸಣ್ಣ ಪುಟ್ಟ ಸಮಸ್ಯೆಗಳಾದರೂ ಅವುಗಳೆಡೆಗೆ ಹೆಚ್ಚು ಒತ್ತು ನೀಡುವುದಿಲ್ಲ. ತಪಾಸಣೆಯಂಯಹ ಕೆಲಸಕ್ಕೂ ಕೈಹಾಕುವುದಿಲ್ಲ. ಅಂತಹವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಭಾನುವಾರದಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಆರೋಗ್ಯದಲ್ಲಾದ ಏರು ಪೇರುಗಳ ಬಗ್ಗೆ ಈ ವೇಳೆ ತಿಳಿದುಕೊಳ್ಳಬಹುದು. ಆರೋಗ್ಯ ತೀರ ಹದಗೆಡುವುದಕ್ಕೂ ಮುನ್ನ ಚಿಕಿತ್ಸೆ ಪಡೆಯಬಹುದು. ಪ್ರತಿವರ್ಷ ನಡೆಸಲಾಗುವ ಶಿಬಿರದಲ್ಲಿ ಸುಮಾರು 35ರಿಂದ 40 ಜನರಿಗೆ ಸಮಸ್ಯೆ ಇರುವುದಾಗಿ ಬೆಳಕಿಗೆ ಬರುತ್ತದೆ. ಬಳಿಕ, ಸೂಕ್ತ ಚಿಕಿತ್ಸೆಗೆ ಸಲಹೆ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.

ಆರ್ಥೊ ಡಾ.ಚೇತನ್‌, ಮಂಜುನಾಥ್‌, ಕಾರ್ಡಿಯೋಲಾಜಿಸ್ಟ್‌ ಡಾ.ಶ್ರೀಧರ್‌, ಡಾ.ಸಿದ್ಧಾರ್ಥ್‌, ಫಿಜಿಷಿಯನ್‌ ಡಾ.ಗೋಪಾಲ್‌, ಡಾ.ಪೃಥ್ವಿ, ಯುಎಸ್‌ಜಿ ಡಾ.ಚಂದ್ರಶೇಖರ್‌, ಪಿಡ್ರಿಯಾಟ್ರಿಶನ್‌ ಡಾ.ಚಂದ್ರಶೇಖರ್‌ ಸೇರಿ ಮತ್ತಿತರ ತಜ್ಞ ವೈದ್ಯರು ತಪಾಸಣೆ ನಡೆಸಿದರು. ಡಾ.ನಂದಾ, ಮಾರ್ಕೆಟಿಂಗ್‌ ವ್ಯವಸ್ಥಾಪಕ ಶೈಲೇಶ್‌ ಉಪಸ್ಥಿತರಿದ್ದರು.

-------


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ