ಆ್ಯಪ್ನಗರ

ಶಾಸಕ ಕುಮಾರ್‌ ಬಂಗಾರಪ್ಪರಿಂದ ನೆರೆ ಪರಿಶೀಲನೆ

ಹೋಬಳಿಯ ನೆರೆ ಆವೃತ ಪ್ರದೇಶಕ್ಕೆ ಶಾಸಕ ಕುಮಾರ್‌ ಬಂಗಾರಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Vijaya Karnataka 8 Aug 2019, 5:00 am
ತಾಳಗುಪ್ಪ: ಹೋಬಳಿಯ ನೆರೆ ಆವೃತ ಪ್ರದೇಶಕ್ಕೆ ಶಾಸಕ ಕುಮಾರ್‌ ಬಂಗಾರಪ್ಪ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
Vijaya Karnataka Web SMR-7tgp1


ಮಾವಿನಹೊಳೆ, ಕಣಸೆ ಹೊಳೆ, ಕನ್ನ ಹೊಳೆ, ವರದಾನದಿ ಪ್ರವಾಹದಿಂದ ತಡಗಳಲೆ, ಸುಳ್ಳೂರು,ಕಣಸೆ,ಹಾರೆಗೊಪ್ಪ,ಕೆಲುವೆ, ಮಂಡಗಳಲೆ, ಗಡೆಮನೆ ಮುಂತಾದ ಹಲವು ಗ್ರಾಮಗಳ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತಗೊಂಡಿದೆ. ಅಪಾರ ಪ್ರಮಾಣದ ನೀರು ವ್ಯರ್ಥವಾಗುವುದನ್ನು ತಡೆದು ನೀರಾವರಿ,ವಿದ್ಯುತ್‌ ಮೊದಲಾದ ಜನಪರ ಬಳಕೆಗೆ ಒದಗುವಂತೆ ಶಾಶ್ವತ ಯೋಜನೆ ರೂಪಿಸಲು ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಸ್ಥಳದಲ್ಲಿದ್ದ ನೀರಾವರಿ ಅಧಿಕಾರಿ ಮಣಿಕಂಠ ಅವರಿಗೆ ನೆರೆ ನೀರಿನ ಪ್ರಮಾಣ, ಆವರಿಸುವ ಪ್ರದೇಶ,ಬಳಕೆಗೆ ಇರುವ ಅವಕಾಶ ಕುರಿತು ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿದರು. ಪ್ರತಿವರ್ಷ ದ್ವೀಪವಾಗುವ ಬೀಸನಗದ್ದೆಗೆ ಶಾಶ್ವತ ಪರಿಹಾರ ರೂಪಿಸುವ ಭರವಸೆ ನೀಡಿದರು.

ಜಿ.ಪಂ. ಸದಸ್ಯ ರಾಜಶೇಖರ ಗಾಳಿಪುರ, ತಾ.ಪಂ. ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ಮಹಬಲೇಶ್ವರ ತಡಗಳಲೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ