ಆ್ಯಪ್ನಗರ

ಆನಂದಪುರಂನ ಎಲ್ಲೆಡೆ ಪ್ರವಾಹ

ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಎಡ ಬಿಡದೆ ಸುರಿಯುತ್ತಿರುವ ಮಳೆಯಿಂದ ಹೊಳೆ-ಹಳ್ಳಗಳು, ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿವೆ.

Vijaya Karnataka 7 Aug 2019, 11:51 pm
ಆನಂದಪುರಂ : ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಎಡ ಬಿಡದೆ ಸುರಿಯುತ್ತಿರುವ ಮಳೆಯಿಂದ ಹೊಳೆ-ಹಳ್ಳಗಳು, ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿವೆ.
Vijaya Karnataka Web SMR-6ANPP6 GILALGUNDI BOMMANA KERE KODI FLOOD


ಹೊಳೆ-ಹಳ್ಳಿಗಳ ಪ್ರವಾಹ, ಕೆರೆಕೋಡಿಯ ನೀರು ಬಹುತೇಕ ಭತ್ತ, ಶುಂಠಿ, ಜೋಳ,ಅಡಕೆ ತೋಟ ಇತ್ಯಾದಿ ಕೃಷಿ ಜಮೀನು ನೀರಿನಿಂದ ಆವೃತವಾಗಿವೆ.

ಸಮೀಪದ ಅಂದಾಸುರ ಗ್ರಾಮದ ನವಟೂರು ಹೊಳೆ ಅಪಾಯ ಮಟ್ಟ ಮೀರಿ ಹರಿದಿದೆ. ಹೊಳೆಯ ಎರಡೂ ದಡದಲ್ಲಿರುವ ಅಡಕೆ ತೋಟ ನೀರಿನಲ್ಲಿ ಮುಳುಗಿತ್ತು. ಅಂದಾಸುರ ಗ್ರಾಮ ಸಂಪರ್ಕ ರಸ್ತೆಯ ರೇಲ್ವೆ ಅಂಡರ್‌ ಪಾಸ್‌ನಲ್ಲಿ ಹಳ್ಳದಂತೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿದೆ.

ಹಳ್ಳೂರಿನ ಸೇತುವೆ ಮೇಲೆ ಸುಮಾರು 10 ಅಡಿ ಎತ್ತರಕ್ಕೆ ನೀರು ಹರಿಯುತ್ತಿದ್ದು ಲಕ್ಕವಳ್ಳಿ, ಮಾದಾಪುರ ಗ್ರಾಮ ಸಂಪರ್ಕ ರಸ್ತೆ ಬಂದ್‌ ಆಗಿದೆ.

ಗಿಳಾಲಗುಂಡಿ ಗ್ರಾಮದ ಅಮ್ಮನಕೆರೆಯ ಸುಮಾರು 60 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ತುಂಬಿದೆ.

ಗಿಳಾಲಗುಂಡಿ ಗ್ರಾಮದ ಬೊಮ್ಮನಕೆರೆ ಕೋಡಿ ಪ್ರವಾಹದಂತೆ ಹರಿದು ಗ್ರಾಮ ಸಂಪರ್ಕ ರಸ್ತೆಯಲ್ಲಿ ಹರಿದಿದೆ. ಈ ಪ್ರವಾಹದಿಂದ ಗ್ರಾಮದ ಸುಮಾರು 300ಕ್ಕೂ ಅಧಿಕ ಎಕರೆ ವಿಸ್ತೀರ್ಣದ ಭತ್ತದ ಗದ್ದೆ, ಶುಂಠಿ, ಮೆಕ್ಕೆಜೋಳದ ಹೊಲದಲ್ಲಿ ನೀರು ಹರಿಯುತ್ತಿದೆ. ಖೈರಾ ಗ್ರಾಮದ ಹಳ್ಳದಲ್ಲಿ ಅಧಿಕ ನೀರು ಬಂದು ಗುಂಡಿ ಗದ್ದೆ ಪ್ರದೇಶದ ಸುಮಾರು 500 ಎಕರೆಗೂ ಅಧಿಕ ಭತ್ತದ ಗದ್ದೆಯಲ್ಲಿ 4 ಅಡಿಗಿಂತ ಹೆಚ್ಚು ನೀರು ನಿಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ