ಶಿವಮೊಗ್ಗ: ಕುಲದಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ . ಪ್ರತಿಯೊಂದು ಕಾಯಕ ಶ್ರೇಷ್ಠ ಎಂದ ವಚನಕಾರರ ತತ್ವಗಳ ಪಾಲನೆಯಾಗಬೇಕಿದೆ ಎಂದು ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಟಿ.ಕೃಷ್ಣಮೂರ್ತಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಮಡಿವಾಳ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶ್ರೇಣಿಕರಣವಿಲ್ಲದ ಸಮಾಜದ ಸೃಷ್ಟಿಯ ಕನಸುಕಂಡ ವಚನಕಾರರನ್ನು ಶ್ರೇಣೀಕರಣದ ವ್ಯವಸ್ಥೆಗೆ ತಂದುಕೊಂಡಿರುವುದು ನಮ್ಮ ಸಮಾಜದ ಅಜ್ಞಾನಕ್ಕೆ ಉದಾಹರಣೆಯಾಗಿದೆ. ಕುಲದಲ್ಲಿ ಯಾವುದೂ ಮೇಲಿಲ್ಲ ಮತ್ತು ಪ್ರತಿಯೊಂದು ಕಾಯಕ ಶ್ರೇಷ್ಠ ಎಂದ ವಚನಕಾರರ ತತ್ವ ಪಾಲಿಸುವ ಅಗತ್ಯವಿದೆ ಎಂದರು.
ಮಾಚಿದೇವ ಸಾಮಾಜಿಕ ಸಮಾನತೆ ಸಂದೇಶವನ್ನು ತನ್ನ ವಚನಗಳ ಮೂಲಕ ಸಾರಿದ್ದಾರೆ. ಸಮಾನತೆಯ ಚಿಂತನೆ ವಿರೋಧಿಸಿದವರ ಬಟ್ಟೆ ತೊಳೆಯುವುದಿಲ್ಲ ಎಂದು ತಿರಸ್ಕರಿಸಿದ್ದ ಮಾಚಿದೇವ ರಾಜ ಬಿಜ್ಹಳನನ್ನು ಸಹ ವಿರೋಧಿಸಿದ ಧೈರ್ಯಶಾಲಿ ಹಾಗೂ ಬಸವಣ್ಣನನ್ನು ಪ್ರಶ್ನಿಸುವಷ್ಟು ನಿಷ್ಠುರವಾದಿಯಾಗಿದ್ದರು ಎಂದರು.
ಮಾಚಿದೇವನ ನಿಜವಾದ ಅಸ್ತ್ರ ಎಂದರೆ ವಸ್ತ್ರ. ಆದರೆ, ಅವರ ಕೈಯಲ್ಲಿ ಕತ್ತಿಕೊಟ್ಟು ನಮ್ಮ ಸಂಸ್ಕೃತಿಗೆ ಮಸಿ ಬಳಿದಿದ್ದೇವೆ. ಆಹಾರ ಅವರವರ ಸ್ವತಂತ್ರ ಆಯ್ಕೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಅಂದೇ ಮಾಚಿದೇವ ಹೇಳಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಸಹನೆ ಮತ್ತು ವಿಚಾರವಾದದ ಜೀವನ ನಡೆಸುವ ಅಗತ್ಯವಿದೆ ಎಂದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿಕ್ಷ ಣ, ರಾಜಕೀಯ ಹಾಗೂ ಆರ್ಥಿಕ ಸದೃಢರಾದರೆ ಸಮಾಜದಲ್ಲಿ ಸುಭದ್ರ ನೆಲೆ ಕಂಡುಕೊಳ್ಳುವ ಸಾಧ್ಯವಿದೆ. ತಮ್ಮ ಹಕ್ಕು ಪಡೆಯಲು ಜನರು ಸಂಘಟಿತರಾಗಬೇಕು. ಸಮಾಜದ ಪರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಗತ್ಯ ನೆರವನ್ನು ಸರಕಾರದಿಂದ ದೊರಕಿಸಿಕೊಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಗಿರೀಶ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಮತ್ತು ಜಿಲ್ಲಾ ಮಡಿವಾಳ ಸಮಾಜದ ಸಂಘದ ಅಧ್ಯಕ್ಷ ಎಂ.ಎಸ್.ಸುರೇಶ್ ಹಾಜರಿದ್ದರು.
ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ. ಆದರೆ, ನಮ್ಮ ಪೂರ್ವಜರ ಕಾಯಕ ಮುಂದುವರಿಸಿಕೊಂಡು ಹೋಗುವುದಕ್ಕಿಂತ ಪ್ರತಿಯೊಬ್ಬರೂ ಶೈಕ್ಷ ಣಿಕ ಮತ್ತು ಆರ್ಥಿಕವಾಗಿ ಸದೃಢರಾಗಬೇಕು.
-ಕೆ.ಎಸ್.ಈಶ್ವರಪ್ಪ, ಶಾಸಕ
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಮಡಿವಾಳ ಸಂಘ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶ್ರೇಣಿಕರಣವಿಲ್ಲದ ಸಮಾಜದ ಸೃಷ್ಟಿಯ ಕನಸುಕಂಡ ವಚನಕಾರರನ್ನು ಶ್ರೇಣೀಕರಣದ ವ್ಯವಸ್ಥೆಗೆ ತಂದುಕೊಂಡಿರುವುದು ನಮ್ಮ ಸಮಾಜದ ಅಜ್ಞಾನಕ್ಕೆ ಉದಾಹರಣೆಯಾಗಿದೆ. ಕುಲದಲ್ಲಿ ಯಾವುದೂ ಮೇಲಿಲ್ಲ ಮತ್ತು ಪ್ರತಿಯೊಂದು ಕಾಯಕ ಶ್ರೇಷ್ಠ ಎಂದ ವಚನಕಾರರ ತತ್ವ ಪಾಲಿಸುವ ಅಗತ್ಯವಿದೆ ಎಂದರು.
ಮಾಚಿದೇವ ಸಾಮಾಜಿಕ ಸಮಾನತೆ ಸಂದೇಶವನ್ನು ತನ್ನ ವಚನಗಳ ಮೂಲಕ ಸಾರಿದ್ದಾರೆ. ಸಮಾನತೆಯ ಚಿಂತನೆ ವಿರೋಧಿಸಿದವರ ಬಟ್ಟೆ ತೊಳೆಯುವುದಿಲ್ಲ ಎಂದು ತಿರಸ್ಕರಿಸಿದ್ದ ಮಾಚಿದೇವ ರಾಜ ಬಿಜ್ಹಳನನ್ನು ಸಹ ವಿರೋಧಿಸಿದ ಧೈರ್ಯಶಾಲಿ ಹಾಗೂ ಬಸವಣ್ಣನನ್ನು ಪ್ರಶ್ನಿಸುವಷ್ಟು ನಿಷ್ಠುರವಾದಿಯಾಗಿದ್ದರು ಎಂದರು.
ಮಾಚಿದೇವನ ನಿಜವಾದ ಅಸ್ತ್ರ ಎಂದರೆ ವಸ್ತ್ರ. ಆದರೆ, ಅವರ ಕೈಯಲ್ಲಿ ಕತ್ತಿಕೊಟ್ಟು ನಮ್ಮ ಸಂಸ್ಕೃತಿಗೆ ಮಸಿ ಬಳಿದಿದ್ದೇವೆ. ಆಹಾರ ಅವರವರ ಸ್ವತಂತ್ರ ಆಯ್ಕೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಅಂದೇ ಮಾಚಿದೇವ ಹೇಳಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಸಹನೆ ಮತ್ತು ವಿಚಾರವಾದದ ಜೀವನ ನಡೆಸುವ ಅಗತ್ಯವಿದೆ ಎಂದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶಿಕ್ಷ ಣ, ರಾಜಕೀಯ ಹಾಗೂ ಆರ್ಥಿಕ ಸದೃಢರಾದರೆ ಸಮಾಜದಲ್ಲಿ ಸುಭದ್ರ ನೆಲೆ ಕಂಡುಕೊಳ್ಳುವ ಸಾಧ್ಯವಿದೆ. ತಮ್ಮ ಹಕ್ಕು ಪಡೆಯಲು ಜನರು ಸಂಘಟಿತರಾಗಬೇಕು. ಸಮಾಜದ ಪರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಗತ್ಯ ನೆರವನ್ನು ಸರಕಾರದಿಂದ ದೊರಕಿಸಿಕೊಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅನುರಾಧ, ತಹಸೀಲ್ದಾರ್ ಗಿರೀಶ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ ಮತ್ತು ಜಿಲ್ಲಾ ಮಡಿವಾಳ ಸಮಾಜದ ಸಂಘದ ಅಧ್ಯಕ್ಷ ಎಂ.ಎಸ್.ಸುರೇಶ್ ಹಾಜರಿದ್ದರು.
ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ. ಆದರೆ, ನಮ್ಮ ಪೂರ್ವಜರ ಕಾಯಕ ಮುಂದುವರಿಸಿಕೊಂಡು ಹೋಗುವುದಕ್ಕಿಂತ ಪ್ರತಿಯೊಬ್ಬರೂ ಶೈಕ್ಷ ಣಿಕ ಮತ್ತು ಆರ್ಥಿಕವಾಗಿ ಸದೃಢರಾಗಬೇಕು.
-ಕೆ.ಎಸ್.ಈಶ್ವರಪ್ಪ, ಶಾಸಕ