ಆ್ಯಪ್ನಗರ

ತುಂಗೆಗೆ ಹಾರಿ ಆಹಾರ ನಿರೀಕ್ಷಕ ಆತ್ಮಹತ್ಯೆ

ಹೊಸನಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೇಯ (60) ಅವರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆ ಸಮೀಪ ಶನಿವಾರ ಬೆಳಗ್ಗೆ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 8 Dec 2019, 5:00 am
ನರಸಿಂಹರಾಜಪುರ: ಹೊಸನಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೇಯ (60) ಅವರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆ ಸಮೀಪ ಶನಿವಾರ ಬೆಳಗ್ಗೆ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web food inspector suicide by felling river
ತುಂಗೆಗೆ ಹಾರಿ ಆಹಾರ ನಿರೀಕ್ಷಕ ಆತ್ಮಹತ್ಯೆ


ಮೂಲತಃ ಭದ್ರಾವತಿ ತಾಲೂಕು ಕೆಂಚೇನಹಳ್ಳಿ ಕಾಲೋನಿ ವಾಸಿಯಾದ ದತ್ತಾತ್ರೇಯ ಅವರ ನಿವೃತ್ತಿಗೆ 2 ತಿಂಗಳು ಮಾತ್ರ ಇತ್ತು. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡುವುದಾಗಿ ಹೇಳಿ ಶನಿವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಅವರು 10 ಗಂಟೆ ಹೊತ್ತಿಗೆ ಪತ್ನಿ ಅನುಸೂಯ ಅವರಿಗೆ ಕರೆ ಮಾಡಿ, 'ನನಗೆ ಬೇಜಾರಾಗಿದೆ, ಮನೆಗೆ ಬರುವುದಿಲ್ಲ, ನಾನು ಮುಡುಬ ಸೇತುವೆ ಬಳಿ ಇದ್ದೇನೆ, ಬೇಜಾರು ಮಾಡಿಕೊಳ್ಳಬೇಡ' ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಅನುಸೂಯ ಅವರು ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸ್ಥಳಕ್ಕೆ ಬರುವ ಹೊತ್ತಿಗೆ ದತ್ತಾತ್ರೇಯ ಅವರ ದೇಹ ನೀರಿನಲ್ಲಿತೇಲುತ್ತಿತ್ತು.

ತಮ್ಮ ಪತಿ ದತ್ತಾತ್ರೇಯ ಅವರ ಸಾವಿಗೆ ಹೊಸನಗರ ತಹಸೀಲ್ದಾರ್‌ ಶ್ರೀಧರಮೂರ್ತಿ, ನುಲಿಗೇರಿ ಗ್ರಾಮದ ನಾಗೇಂದ್ರ, ಮುರುಗೇಶ, ವಿಠಲ, ಆನಂದಕಾರ್ವೆ, ಶಶಿಕಲಾ, ವನಜಾಕ್ಷಿ ಅವರು ಕಾರಣ. ಇವರೆಲ್ಲನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದರು. ಅವರ ಕಿರುಕುಳದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನುಸೂಯ ಅವರು ದೂರು ಸಲ್ಲಿಸಿದ್ದಾರೆ. ನರಸಿಂಹರಾಜಪುರ ಠಾಣೆ ಪೊಲೀಸರು ದೂರು ಅನ್ವಯ ತಹಸೀಲ್ದಾರ್‌ ಶ್ರೀಧರಮೂರ್ತಿ ಮತ್ತು ಇತರೆ ಏಳು ಮಂದಿರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ