ಆ್ಯಪ್ನಗರ

ಮಾನವನ ದುರಾಸೆಗೆ ಅರಣ್ಯ ವಿನಾಶ

ಮಾನವನ ದುರಾಸೆಯಿಂದ ಅರಣ್ಯ ವಿನಾಶವಾಗುತ್ತಿದೆ. ಅರಣ್ಯ ನಾಶದಿಂದ ಮಳೆ ಬಾರದಂತಾಗಿ ಜನರ ಬದುಕು ದುಸ್ತರಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಭೂಸೇನಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

Vijaya Karnataka 20 Jun 2019, 5:00 am
ಭದ್ರಾವತಿ: ಮಾನವನ ದುರಾಸೆಯಿಂದ ಅರಣ್ಯ ವಿನಾಶವಾಗುತ್ತಿದೆ. ಅರಣ್ಯ ನಾಶದಿಂದ ಮಳೆ ಬಾರದಂತಾಗಿ ಜನರ ಬದುಕು ದುಸ್ತರಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಭೂಸೇನಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.
Vijaya Karnataka Web SMR-19BDVT3


ಅವರು ಬುಧವಾರ ನಗರದ ರೋಟರಿ ಕ್ಲಬ್‌, ಅರಣ್ಯ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಜೀವಿಯ ಆರೋಗ್ಯಕ್ಕೆ ಪರಿಸರ ಸಂರಕ್ಷ ಣೆ ಮುಖ್ಯ. ಪರಿಸರ ಉಳಿಸಿ ಜಾಗೃತಿ ಕೇವಲ ಮಾತುಗಳಲ್ಲಿ ಉಳಿಯದೆ ಕಾರ‍್ಯರೂಪಕ್ಕೆ ಬರಬೇಕು. ಗಿಡ ನೆಟ್ಟು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ ಡಾ.ಪರಿಸರ ನಾಗರಾಜ್‌ ಮಾತನಾಡಿ, ವಿಶ್ವದ ಪಟ್ಟಿಯಲ್ಲಿ ಭದ್ರಾವತಿ ವಾಯುಮಾಲಿನ್ಯ ನಗರವಾಗಿ ಗುರುತಿಸಿಕೊಂಡಿದೆ. ತಾಲೂಕಲ್ಲಿ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಹೆಚ್ಚು ಹೆಚ್ಚು ಗಿಡ ನೆಟ್ಟು ಪೋಷಿಸಬೇಕಾಗಿದೆ. ಬಗರ್‌ಹುಕುಂ ಹೆಸರಲ್ಲಿ ಕಾಡು ನಾಶವಾಗುತ್ತಿದೆ. ಸರಕಾರ ಅರ್ಜಿ ಹಾಕಿದ ಎಲ್ಲರಿಗೂ ಭೂಮಿ ಕೊಡುತ್ತಿದ್ದರೆ ಕಾಡು ಸಂಪೂರ್ಣ ನಾಶವಾಗುತ್ತದೆ. ತಮ್ಮ ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಪರಿಸರ ಮಾಲಿನ್ಯ ತಡೆಗಟ್ಟಲು ಮುಂದಾಗಬೇಕೆಂದರು. ಕಾರ್ಯಕ್ರಮದಲ್ಲಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಾದ ಸುಂದರ್‌ರಾಜ್‌, ರಮಾಕಾಂತ್‌, ರೋಟರಿ ಅಧ್ಯಕ್ಷ ರಾಘವೇಂದ್ರರಾವ್‌, ಅರಣ್ಯ ಇಲಾಖೆ ಅಧಿಕಾರಿ ದಿನೇಶ್‌, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಮಲ್ಲಪ್ಪ, ಡಾ.ಪ್ರೀತಿ, ಡಾ.ಮಯೂರಿ, ಡಾ.ಸುದರ್ಶನ್‌, ಡಾ.ಶ್ರೀಕಾಂತ್‌, ಹಿರಿಯ ಆರೋಗ್ಯ ನಿರೀಕ್ಷ ಕ ನೀಲೇಶ್‌ರಾಜ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ