ಆ್ಯಪ್ನಗರ

ನಾಲ್ವರು ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

ತಾಲೂಕಿನ ಇಕ್ಕೇರಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಶಿಕಾರಿಪುರದಲ್ಲಿನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿವಿಜೇತರಾಗಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Vijaya Karnataka 8 Nov 2019, 10:17 pm
ಸಾಗರ: ತಾಲೂಕಿನ ಇಕ್ಕೇರಿ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು ಶಿಕಾರಿಪುರದಲ್ಲಿನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿವಿಜೇತರಾಗಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web 07SGR1_46
ಸಾಗರ ತಾಲೂಕು ಇಕ್ಕೇರಿ ಪ್ರೌಢಶಾಲೆಯ ವರ್ಷ, ಗಾನವಿ, ಡಿ.ಕೆ.ಸಿರಿ ಹಾಗೂ ಶಬರೀಶ್‌ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


ಶಾಲೆಯ ಕ್ರೀಡಾಳುಗಳು ಒಟ್ಟು ಏಳು ಸ್ಪರ್ಧೆಗಳಲ್ಲಿಸ್ಪರ್ಧಿಸಲಿದ್ದಾರೆ. ಶಾಲೆ ವಿದ್ಯಾರ್ಥಿನಿಯರಾದ ವರ್ಷ, ಗಾನವಿ, ಡಿ.ಕೆ. ಸಿರಿ ಹಾಗೂ ವಿದ್ಯಾರ್ಥಿ ಎಸ್‌.ಶಬರೀಶ್‌ ಈ ಅರ್ಹತೆ ಪಡೆದಿದ್ದಾರೆ.

ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ9ನೇ ತರಗತಿಯ ವರ್ಷ 100, 200 ಹಾಗೂ 400 ಮೀ.ನಲ್ಲಿಪ್ರಥಮ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನ್‌ ಎನ್ನಿಸಿಕೊಂಡರೆ, ಇದೇ ತರಗತಿಯ ಎಂ.ಗಾನವಿ 800 ಹಾಗೂ 1500 ಮೀ. ಓಟದಲ್ಲಿದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. 10ನೇ ತರಗತಿಯ ಡಿ.ಕೆ. ಸಿರಿ ತ್ರಿವಿಧ ಜಿಗಿತದಲ್ಲಿದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿತೃತೀಯ ಸ್ಥಾನ ಪಡೆದುಕೊಂಡರು. 10ನೇ ತರಗತಿ ವಿದ್ಯಾರ್ಥಿ ಎಸ್‌.ಶಬರೀಶ್‌ ಪೋಲ್‌ವಾಲ್ಟ್‌ನಲ್ಲಿದ್ವಿತೀಯ ಸ್ಥಾನದೊಂದಿಗೆ ಅರ್ಹತೆ ಪಡೆದರು.

ವರ್ಷ, ಸಿರಿ, ಅಕ್ಷತಾ ಹಾಗೂ ಕಾವ್ಯ ಅವರಿದ್ದ ವಿದ್ಯಾರ್ಥಿನಿಯರ ತಂಡ 100 ಮೀ. ರಿಲೇ ವಿಭಾಗದಲ್ಲೂದ್ವಿತೀಯ ಸ್ಥಾನ ಪಡೆಯಿತು. ರಾಜ್ಯ ಮಟ್ಟದ ಸ್ಪರ್ಧೆ ನ. 11ರಿಂದ 14ರವರೆಗೆ ನಾಗಮಂಗಲದ ಆದಿಚುಂಚನಗಿರಿ ಮಠದ ಕ್ರೀಡಾಂಗಣದಲ್ಲಿನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ