ಆ್ಯಪ್ನಗರ

ನಾಲ್ವರು ಕಳ್ಳರ ಬಂಧನ, 14 ಮೊಬೈಲ್‌ ವಶ

ನಗರದ ಮುಖ್ಯ ಬಸ್‌ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ನ್ಯೂಟೌನ್‌ ಪೊಲೀಸರು ಬಂಧಿಸಿ ಅವರಿಂದ 1.27 ಲಕ್ಷ ರೂ ಬೆಲೆ ಬಾಳುವ 14 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಸುಧಾಕರ್‌ ಎಸ್‌.ನಾಯ್ಕ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.

Vijaya Karnataka 5 Oct 2019, 5:00 am
ಭದ್ರಾವತಿ: ನಗರದ ಮುಖ್ಯ ಬಸ್‌ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ನಾಲ್ವರನ್ನು ನ್ಯೂಟೌನ್‌ ಪೊಲೀಸರು ಬಂಧಿಸಿ ಅವರಿಂದ 1.27 ಲಕ್ಷ ರೂ ಬೆಲೆ ಬಾಳುವ 14 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಸುಧಾಕರ್‌ ಎಸ್‌.ನಾಯ್ಕ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
Vijaya Karnataka Web four robbers arrested 14 mobile phones seized
ನಾಲ್ವರು ಕಳ್ಳರ ಬಂಧನ, 14 ಮೊಬೈಲ್‌ ವಶ


ನ್ಯೂಟೌನ್‌ ಸಬ್‌ಇನ್ಸ್‌ಪೆಕ್ಟರ್‌ ಸರ್ವಮಂಗಳ, ಸಿಬ್ಬಂದಿ ವೆಂಕಟೇಶ್‌, ಅನಿಲ್‌ಕುಮಾರ್‌, ಮಂಜುನಾಥ್‌, ಕುಮಾರ್‌, ಪಾಲಾಕ್ಷ, ನಾಗರಾಜ್‌, ಯಧುನಂದನ್‌, ನವೀನ್‌ ಪವಾರ್‌, ಅಜಿತ್‌, ಪ್ರಸನ್ನಸ್ವಾಮಿ, ತಮ್ಮಣ್ಣ, ಚಾಲಕ ಮಧುಸೂದನ್‌ ತಂಡವು ಕೆಎಸ್‌ಆರ್‌ಟಿಸಿ ಮುಖ್ಯಬಸ್‌ ನಿಲ್ದಾಣದಲ್ಲಿಗುರುವಾರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಎನ್‌.ಪ್ರಸಾದ್‌, ರಾಜು, ಭದ್ರಾವತಿಯ ಕೃಷ್ಣಪ್ಪ, ಆರ್‌.ಪ್ರಸಾದ್‌ನನ್ನು ವಿಚಾರಣೆಗೊಳಪಡಿಸಿದಾಗ ವಿವಿಧೆಡೆ ಕಳ್ಳತನ ಮಾಡಿರುವ ಪ್ರಕರಣ ಬಯಲಾಗಿದೆ. ಅವರಿಂದ 14 ಬೆಲೆ ಬಾಳುವ ಮೊಬೈಲ್‌ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಎಂದರು.

ಇತ್ತೀಚೆಗೆ ನಗರದೆಲ್ಲೆಡೆ ಮೊಬೈಲ್‌ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದರಿಂದ ಪತ್ತೆಹಚ್ಚಲು ಜಿಲ್ಲಾರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್‌ ಮತ್ತು ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿ ಡಾ.ಎಚ್‌.ಟಿ.ಶೇಖರ್‌ ಮಾರ್ಗದರ್ಶನದಲ್ಲಿಹಾಗೂ ಡಿವೈಎಸ್‌ಪಿ ಸುಧಾಕರ್‌ ಎಸ್‌.ನಾಯ್ಕ ನೇತೃತ್ವದಲ್ಲಿನಗರ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ನಂಜಪ್ಪ ಮುಂದಾಳತ್ವದ ಪೊಲೀಸರ ತಂಡ ರಚಿಸಲಾಗಿತ್ತು. ಪ್ರಕರಣ ಪತ್ತೆ ಕಾರ‍್ಯಕ್ಕೆ ಜಿಲ್ಲಾರಕ್ಷಣಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ