ಆ್ಯಪ್ನಗರ

ನಾಳೆಯಿಂದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ

ನಗರದಲ್ಲಿ ಹಳೆ ಜೈಲು ಆವರಣದಲ್ಲಿ ಜ.4ರಿಂದ ನಡೆಯಲಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷೆ ಪಿ. ವೀರಮ್ಮ ಕರೆ ನೀಡಿದರು.

Vijaya Karnataka 3 Jan 2019, 5:00 am
ಶಿವಮೊಗ್ಗ : ನಗರದಲ್ಲಿ ಹಳೆ ಜೈಲು ಆವರಣದಲ್ಲಿ ಜ.4ರಿಂದ ನಡೆಯಲಿರುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷೆ ಪಿ. ವೀರಮ್ಮ ಕರೆ ನೀಡಿದರು.
Vijaya Karnataka Web from tomorrow shivaratrisvara shiva yogis jayanti mahotsava
ನಾಳೆಯಿಂದ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ


ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಸಂಸ್ಕೃತಿ, ಧಾರ್ಮಿಕತೆ, ಭಾವೈಕ್ಯತೆ ಮೂಡಿಸುವ ಹಿನ್ನೆಲೆಯಲ್ಲಿ ಈ ಮಹೋತ್ಸವ ಏರ್ಪಡಿಸಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೆಚ್ಚಿನ ಪಾಲು ಮತ್ತು ಮಹತ್ವ ನೀಡಲಾಗಿದೆ. ಹಾಗಾಗಿ ಈ ಏಳುದಿನದ ಕಾರ್ಯಕ್ರಮಗಳಲ್ಲೂ ಮಹಿಳೆಯರು ಹೆಚ್ಚಾಗಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಜ.4ರಂದು ಅಕ್ಕಮಹಾದೇವಿ ಮಹಾದ್ವಾರವನ್ನು ಮಾಜಿ ಸಚಿವೆ ಡಾ. ಲೀಲಾದೇವಿ ಆರ್‌. ಪ್ರಸಾದ್‌ ಉದ್ಘಾಟಿಸಲಿದ್ದು, ಪಾಲಿಕೆ ಮೇಯರ್‌ ಲತಾ ಗಣೇಶ್‌ ಅಧ್ಯಕ್ಷತೆ ವಹಿಸುವರು. ಅಜಗಣ್ಣ ಮುಕ್ತದ್ವಾರವನ್ನು ಜಿ.ಪಂ.ಉಪಾಧ್ಯಕ್ಷೆ ವೇದಾವತಿ ವಿಜಯಕುಮಾರ್‌, ದೋಸೆ ಪಿಟ್ಟವ್ವೆ ದ್ವಾರವನ್ನು ತಾ.ಪಂ. ಅಧ್ಯಕ್ಷೆ ರೇಖಾ ಪ್ರವೀಣ್‌ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಭಾಗವಹಿಸುವರು ಎಂದರು.

ಮಹೋತ್ಸವದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಜ.5ರಂದು ಬೆಳಗ್ಗೆ 10.30ಕ್ಕೆ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಮಹಿಳೆ: ವಿಕಾಸದ ಹೊಸ ಸಾಧ್ಯತೆಗಳು ಕುರಿತು ಮೊದಲು ಗೋಷ್ಠಿ ನಡೆಯಲಿದ್ದು, ಪ್ರೊ. ಕಿರಣ್‌ ದೇಸಾಯಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾರ್ವತಮ್ಮ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಶುಭಾ ಮರವಂತೆ, ಡಾ. ವೀಣಾ ಭಟ್‌, ಸಿ. ಮಂಜುಳಾ ವಿಷಯ ಮಂಡನೆ ಮಾಡಲಿದ್ದಾರೆ. ಉತ್ಸವದಲ್ಲಿ ಡಾ.ವಿ.ಬಿ.ಆರತಿ, ರಶ್ಮಿ ಸೂರ್ಯನಾರಾಯಣ್‌, ಕವಿತಾ ಮಿಶ್ರಾ, ಆಶಾ ಶೇಷಾದ್ರಿ, ಡಾ. ರಜನಿ ಪೈ, ಸಂಸದೆ ಶೋಭಾ ಕರಂದ್ಲಾಜೆ, ಡಾ. ಆಶಾ ಡಿ.ಬೆನಕಪ್ಪ ಮತ್ತಿತರ ಮಹಿಳಾ ಸಾಧಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಶಾಂತಾಆನಂದ್‌, ಲೋಕೇಶ್ವರಿ ಚೋಳಕೆ, ಶಕುಂತಲಾ, ರೇಣುಕಾ ನಾಗರಾಜ್‌, ಪುಷ್ಪಾ, ರಕ್ಷಿತಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ