ಆ್ಯಪ್ನಗರ

ಇಂಧನ ಬಳಕೆ ಮಿತವಾಗಿರಲಿ

ಇಂಧನ ಸಂರಕ್ಷ ಣೆ ಇಂಧನದ ದಕ್ಷ ತೆ ಉಪಯೋಗಗಳು ಸರಿಯಾದ ಪ್ರಮಾಣದಲ್ಲಿ ಆಗಬೇಕು. ಇಂಧನ ಸಂರಕ್ಷ ಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್‌.ವಾಸುದೇವ್‌ ಹೇಳಿದರು.

Vijaya Karnataka 29 Mar 2019, 5:00 am
ಶಿವಮೊಗ್ಗ : ಇಂಧನ ಸಂರಕ್ಷ ಣೆ ಇಂಧನದ ದಕ್ಷ ತೆ ಉಪಯೋಗಗಳು ಸರಿಯಾದ ಪ್ರಮಾಣದಲ್ಲಿ ಆಗಬೇಕು. ಇಂಧನ ಸಂರಕ್ಷ ಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್‌.ವಾಸುದೇವ್‌ ಹೇಳಿದರು.
Vijaya Karnataka Web fuel consumption should be moderate
ಇಂಧನ ಬಳಕೆ ಮಿತವಾಗಿರಲಿ


ಬೆಂಗಳೂರು ಕರ್ನಾಟಕ ರಿನೀವಬಲ್‌ ಎಜರ್ನಿ ಡೆವೆಲೆಪ್‌ಮೆಂಟ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಇಂಧನ ಸಂರಕ್ಷ ಣೆ ಬಗ್ಗೆ ನಗರದ ರಾಯಲ್‌ ಆರ್ಚಿಡ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುಗದಲ್ಲಿ ಅವಶ್ಯಕತೆಗಿಂತ ಹೆಚ್ಚು ಇಂಧನವನ್ನು ಬಳಕೆ ಮಾಡುತ್ತಿದ್ದೇವೆ. ಲಭ್ಯ ಇರುವ ಇಂಧನ ಸಂಪನ್ಮೂಲವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡದೇ ಮಿತಿ ಬಳಕೆ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದರೂ ಇಂಧನ ಸಿಗದೇ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಂದು ಕಾರ್ಖಾನೆಗಳಲ್ಲಿ ಮತ್ತು ಸಾರ್ವಜನಿಕ ಜಗತ್ತಿನಲ್ಲಿ ಇಂಧನ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಇದು ಬಳಕೆಯಾಗಬೇಕೇ ವಿನಾ ದುರ್ಬಳಕೆ ಆಗಬಾರದು. ಇಂಧನವನ್ನು ಸರಿಯಾದ ರೀತಿ, ಪ್ರಮಾಣದಲ್ಲಿ ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಈ ಬಗ್ಗೆ ಅತಿ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.

ಸಂಘ ನಿರ್ದೇಶಕ ವಸಂತ ಹೋಬಳಿದಾರ್‌ ಮಾತನಾಡಿ, ಎಲ್ಲ ಕಾರ್ಖಾನೆಗಳು, ವ್ಯಾಪಾರಸ್ಥರು ಇಂಧನ ಸಂರಕ್ಷ ಣೆ ಬಗ್ಗೆ ಸರಿಯಾದ ಮಾಹಿತಿ ಅರಿಯುವುದು ಅತ್ಯಂತ ಮುಖ್ಯ. ಇಂಧನ ಬೇಡಿಕೆಯ ಸವಾಲನ್ನು ಎದುರಿಸಲು ನಾವು ನೀವೆಲ್ಲವರೂ ಸಿದ್ದರಾಗಿರಬೇಕು ಎಂದರು.

ಬರುವ ದಿನಗಳಲ್ಲಿ ಕರ್ನಾಟಕ ರಿನಿವಬಲ್‌ ಎನರ್ಜಿ ಡೆವೆಲೆಪ್‌ಮೆಂಟ್‌ ಕಾಪೋರ್‍ರೇಷನ್‌ ಮುಖಾಂತರ ಇಂಧನ ವಿದ್ಯುತ್‌ ಹಾಗೂ ಇತರೆ ಅಗತ್ಯ ವಸ್ತುಗಳ ಬಗ್ಗೆ ಸಾರ್ವಜನಿಕರಿಗೆ, ಗ್ರಾಹಕರಿಗೆ, ಇನ್ನು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಗಾರದಲ್ಲಿ ಕೆ.ಆರ್‌.ಡಿ.ಯ.ಎಲ್‌ ಸಂಸ್ಥೆಯ ಮುಖ್ಯಸ್ಥರಾದ ದಿನೇಶ್‌ಕುಮಾರ್‌, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ರುದ್ರೇಶ್‌,ಮಾಜಿ ಅಧ್ಯಕ್ಷ ಡಿ.ಎಸ್‌.ಅರುಣ್‌, ಖಜಾಂಚಿ ಜಿ.ಎನ್‌.ಪ್ರಕಾಶ್‌, ನಿರ್ದೇಶಕ ಎ.ಎಂ.ಸುರೇಶ್‌, ಕಾರ್ಯದರ್ಶಿ ಗೋಪಿನಾಥ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ