ಆ್ಯಪ್ನಗರ

ಎಷ್ಟಾದರೂ ಕೊಡಿ, ಹೊಟ್ಟೆ ತುಂಬ ಊಟ ಮಾಡಿ!

ಭೋಜನ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ. ವಿನೂತನ ಚಿಂತನೆಯಲ್ಲಿ ಹಸಿದ ಹೊಟ್ಟೆಗೆ ಊಟ ಬಡಿಸುವ ಹೋಟೆಲ್‌ ಪಟ್ಟಣದ ಮುಖ್ಯಬಸ್‌ ನಿಲ್ದಾಣ ಬಳಿ ವರಮಹಾಲಕ್ಷ್ಮೇ ವ್ರತದ ದಿನ ಆರಂಭವಾಗಿದೆ.

Vijaya Karnataka 26 Aug 2018, 5:00 am
ತೀರ್ಥಹಳ್ಳಿ : ಭೋಜನ ಪ್ರಿಯರಿಗೆ ಇದೊಂದು ಸಿಹಿ ಸುದ್ದಿ. ವಿನೂತನ ಚಿಂತನೆಯಲ್ಲಿ ಹಸಿದ ಹೊಟ್ಟೆಗೆ ಊಟ ಬಡಿಸುವ ಹೋಟೆಲ್‌ ಪಟ್ಟಣದ ಮುಖ್ಯಬಸ್‌ ನಿಲ್ದಾಣ ಬಳಿ ವರಮಹಾಲಕ್ಷ್ಮೇ ವ್ರತದ ದಿನ ಆರಂಭವಾಗಿದೆ.
Vijaya Karnataka Web SMR-25TTH9


'ಎಷ್ಟಾದರೂ ದುಡ್ಡು ಕೊಡಿ, ಹೊಟ್ಟೆ ತುಂಬ ಊಟ ಮಾಡಿ' ಚಿಂತನೆಯಿಂದ ಮಾಲೀಕರು ಅನ್ನಲಕ್ಷ್ಮೇ ಹೆಸರಲ್ಲಿ ಹೋಟೆಲ್‌ ಆರಂಭಿಸಿದ್ದಾರೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಭದ ವ್ಯವಹಾರ ಹೊರತಾಗಿ ಆರಂಭಗೊಂಡಿರುವ ಹೋಟೆಲ್‌ ಎಂಬ ಹೆಗ್ಗಳಿಕೆಯಲ್ಲಿ ಮಾಲೀಕರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಜನರು ಮುಗಿಬಿದ್ದು ಹೋಟೆಲ್‌ನಲ್ಲಿ 'ಅನ್ನಲಕ್ಷ್ಮೇ' ಸ್ವೀಕರಿಸಿ ಇಷ್ಟವಾದಷ್ಟು ದುಡ್ಡು ಕೊಟ್ಟು ಸಂತೃಪ್ತರಾಗುತ್ತಿದ್ದಾರೆ.

ಮಧ್ಯಾಹ್ನ 12.30ರಿಂದ 2.30ರ ವರೆಗೆ ಹೋಟೆಲ್‌ನಲ್ಲಿ ಈ ಸೇವೆ ಲಭ್ಯ. ದಕ್ಷಿಣ, ಉತ್ತರ ಭಾರತೀಯ ಅಡುಗೆ ಶೈಲಿಯ ತಿಂಡಿ, ತಿನಿಸು, ಚಾಟ್ಸ್‌, ಚೈನೀಸ್‌ ಪುಡ್‌ ಎಲ್ಲವೂ ಸಿಗುತ್ತದೆ. ಸೇವಾ ಮನೋಭಾವ ಮುಖ್ಯವಾಗಿಸಿಕೊಂಡು ಆರಂಭವಾಗಿರುವ ಹೋಟೆಲ್‌ಗೆ ಶ್ರೀನಿಧಿ ಪ್ರಿಂಟಿಂಗ್‌ ಪ್ರೆಸ್‌ನ ಟಿ.ಡಿ.ರಾಘವೇಂದ್ರ, ದುರ್ಗಾ ಬುಕ್‌ ಹೌಸ್‌ನ ಗೋವರ್ಧನ್‌ ಪಾಲುದಾರರಾಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ