ಆ್ಯಪ್ನಗರ

‘ಜಾರ್ಜ್‌ ನಿಲುವು ಪ್ರಜೆಗಳಿಗೆ ಮಾದರಿ’

ಸಮಾಜವಾದಿ ಚಿಂತನೆಯ ನೇತಾರರಾಗಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್‌ ಫರ್ನಾಂಡೀಸ್‌ ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ಇನ್ನಿಲ್ಲದ ನಷ್ಟವನ್ನು ಉಂಟು ಮಾಡಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ವಿ.ಜಯರಾಂ ತಿಳಿಸಿದರು.

Vijaya Karnataka 3 Feb 2019, 5:00 am
ಹೊಸನಗರ: ಸಮಾಜವಾದಿ ಚಿಂತನೆಯ ನೇತಾರರಾಗಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್‌ ಫರ್ನಾಂಡೀಸ್‌ ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ಇನ್ನಿಲ್ಲದ ನಷ್ಟವನ್ನು ಉಂಟು ಮಾಡಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ವಿ.ಜಯರಾಂ ತಿಳಿಸಿದರು.
Vijaya Karnataka Web SMR-2HOSP6


ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಜಾರ್ಜ್‌ ಫರ್ನಾಂಡೀಸ್‌ ಅವರಿಗೆ ಪಟ್ಟಣದ ನಾಗರಿಕರು ಶನಿವಾರ ಇಲ್ಲಿನ ಸುದ್ದಿಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಪ್ರಬಲವಾಗಿ ವಿರೋಧಿಸಿದವರಲ್ಲಿ ಜಾರ್ಜ್‌ ಮುಂಚೂಣಿಯಲ್ಲಿದ್ದರು. ಧೀಮಂತ ರಾಜಕಾರಣಿಯಾಗಿದ್ದ ಅವರು ಕಾರ್ಮಿಕರು ಹಾಗೂ ಶೋಷಿತ ವರ್ಗದ ಧ್ವನಿಯಾಗಿದ್ದರು. ಅವರ ನಿಲುವು ಭವಿಷ್ಯದಲ್ಲಿ ಮಾದರಿಯಾಗಲಿದೆ ಎಂದರು.

ಹಿರಿಯ ನಾಗರಿಕ ಲೋಕಪ್ಪಗೌಡ ಮಾತನಾಡಿ, ಜಾರ್ಜ್‌ ಅವರು ಸರಳ ವ್ಯಕ್ತಿತ್ವ, ಉನ್ನತ ಮಟ್ಟದ ಚಿಂತಕರಾಗಿದ್ದರು. ಕ್ರಾಂತಿಕಾರಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಲ್ಲದೇ, ಚಳವಳಿಗಳಲ್ಲಿ ಸಕ್ರಿಯರಾಗುವ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಪ್ರಜಾಪ್ರಭುತ್ವದಲ್ಲಿ ಅಚಲ ನಂಬಿಕೆ ಹೊಂದಿದ್ದ ಅವರು ತಮ್ಮ ಪ್ರಾಮಾಣಿಕತೆ, ತತ್ವಾದರ್ಶಗಳ ಮೂಲಕ ಜನಜನಿತರಾಗಿದ್ದರು ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ಜಾರ್ಜ್‌ ಫರ್ನಾಂಡೀಸ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಿಸಲಾಯಿತು. ಪ.ಪಂ. ಅಧ್ಯಕ್ಷ ಹಾಲಗದ್ದೆ ಉಮೇಶ್‌, ಮಾಜಿ ಅಧ್ಯಕ್ಷ ನಾಗರಾಜ ಚಡಗ, ಮಾಜಿ ಸದಸ್ಯ ವಾಸುದೇವ ಆಚಾರ್‌, ಪ್ರಮುಖರಾದ ಎನ್‌.ಆರ್‌.ದೇವಾನಂದ, ಬಿ.ಎಸ್‌.ಸುರೇಶ್‌, ಬಿ.ಜಿ.ನಾಗರಾಜ, ಉಮೇಶ ಕಂಚುಗಾರ್‌, ಜಬ್ಬಗೋಡು ಹಾಲಪ್ಪಗೌಡ , ಜಯಲಕ್ಷ್ಮಿ , ಎಚ್‌.ಆರ್‌.ಪ್ರಕಾಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ