ಆ್ಯಪ್ನಗರ

ಉತ್ತಮ ಫಲಿತಾಂಶಕ್ಕೆ ಈಗಿನಿಂದಲೇ ಸಿದ್ಧವಾಗಿ

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷ ಕರು ಆರಂಭದಿಂದಲೂ ಸೂಕ್ತ ಯೋಜನೆ ಹಾಕಿಕೊಂಡು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್‌ ಸಲಹೆ ನೀಡಿದರು.

Vijaya Karnataka 10 Jul 2019, 5:00 am
ಹೊಸನಗರ : ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷ ಕರು ಆರಂಭದಿಂದಲೂ ಸೂಕ್ತ ಯೋಜನೆ ಹಾಕಿಕೊಂಡು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್‌ ಸಲಹೆ ನೀಡಿದರು.
Vijaya Karnataka Web SMR-9hosp2


ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಶ್ಲೇಷಣಾ ಕಾರಾರ‍ಯಗಾರಕ್ಕೆ ಚಾಲನೆ ನೀಡಿದ ಅವರು, ಶಿಕ್ಷ ಕರನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕು ಜಿಲ್ಲೆಯಲ್ಲಿ ಈ ಬಾರಿ ಮೊದಲ ಸ್ಥಾನ ಗಳಿಸಿರುವುದು ಸಂತಸದ ವಿಷಯ. ಆದರೆ, ಕೆಲ ಶಾಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಲಭ್ಯವಾಗಿಲ್ಲ. ಈ ಕುರಿತು ಶಿಕ್ಷ ಕರು ವಿಮರ್ಶೆ ಮಾಡಬೇಕಿದೆ. ತರಗತಿಗಳನ್ನು ನಡೆಸುವುದು, ಮನೆಪಾಠ ನೋಡುವುದು ಎಲ್ಲ ಶಾಲೆಗಳಲ್ಲಿಯೂ ನಡೆಯುತ್ತದೆ. ಆದರೆ, ವ್ಯವಸ್ಥಿತ ಯೋಜನೆ ಹಾಕಿಕೊಂಡಲ್ಲಿ ಮಾತ್ರ ಸಫಲತೆ ಕಾಣಲು ಸಾಧ್ಯ. ಉತ್ತಮ ಫಲಿತಾಂಶ ಗಳಿಸಿದ ಶಾಲೆಗಳು ಮಾದರಿಯಾಗಲಿ ಎಂದರು.

ಜಿ.ಪಂ. ಸದಸ್ಯೆ ಶ್ವೇತಾ ಬಂಡಿ ಮಾತನಾಡಿ, ಶೈಕ್ಷ ಣಿಕ ಫಲಿತಾಂಶ ಉತ್ತಮಪಡಿಸಲು ಇಂತಹ ಕಾರಾರ‍ಯಗಾರ ನಡೆಸುತ್ತಿರುವುದು ಶ್ಲಾಘನೀಯ. ಆದರೆ, ಕಾರಾರ‍ಯಗಾರಕ್ಕೆ ಡಿಡಿಪಿಐ ಹಾಜರಾಗದಿರುವುದು ಬೇಸರ ತಂದಿದೆ. ಶಿಕ್ಷ ಕರು ನಿರ್ದಿಷ್ಟ ವಿದ್ಯಾರ್ಥಿಗಳ ಪಾಠ ಪ್ರವಚನ ಉತ್ತಮ ಪಡಿಸಲು ದತ್ತುಯೋಜನೆ ಸಹಕಾರಿ ಎಂದರು.

ಎಲ್ಲ ಶಾಲೆಯ ಮುಖ್ಯ ಶಿಕ್ಷ ಕರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದ ಕುರಿತು ಜಿಲ್ಲಾ ಶಿಕ್ಷ ಣಾಧಿಕಾರಿ ಕೃಷ್ಣಮೂರ್ತಿ ಮಾಹಿತಿ ಪಡೆದರು. ಕಡಿಮೆ ಫಲಿತಾಂಶ ಪಡೆದ ವಿಷಯ, ವಿದ್ಯಾರ್ಥಿಗಳ ಸಂಖ್ಯೆ, ಕಾರಣಗಳ ಕುರಿತು ಚರ್ಚೆ ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ತಾ.ಪಂ. ಅಧ್ಯಕ್ಷ ವಾಸಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ಕಾರ‍್ಯನಿರ್ವಹಣಾಧಿಕಾರಿ ಡಾ.ರಾಮಚಂದ್ರ, ಬಿಇಒ ರಾಮಪ್ಪಗೌಡ, ಮುಖ್ಯ ಶಿಕ್ಷ ಕರ ಸಂಘದ ರವೀಶ್‌, ಪ್ರವೀಣ್‌, ಅಕ್ಷ ರ ದಾಸೋಹದ ನಿರ್ದೇಶಕ ನಾಗರಾಜ್‌ ಮತ್ತಿತರರು ಇದ್ದರು. ಕಳೆದ ಬಾರಿ ಶೇ.100 ಫಲಿತಾಂಶ ಗಳಿಸಿದ ಶಾಲೆಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ