ಆ್ಯಪ್ನಗರ

ಮಚ್ಚಿನಿಂದ ಕೊಚ್ಚಿ ಬಾಲಕಿ ಕೊಲೆ

ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ 16 ವರ್ಷ ಬಾಲಕಿಯನ್ನು ಮನೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Vijaya Karnataka 5 Aug 2019, 5:00 am
ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ 16 ವರ್ಷ ಬಾಲಕಿಯನ್ನು ಮನೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
Vijaya Karnataka Web girl murder
ಮಚ್ಚಿನಿಂದ ಕೊಚ್ಚಿ ಬಾಲಕಿ ಕೊಲೆ


ಇಂದಿರಾ ಕೊಲೆಯಾದ ಬಾಲಕಿ. ಪ್ರಥಮ ಪಿಯುಸಿ ಓದುತ್ತಿದ್ದ ಈಕೆಯನ್ನು ಅಡುಗೆ ಮನೆಯಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಬಾಲಕಿಯ ತಂದೆ ಈ ಮೊದಲು ಮೃತಪಟ್ಟಿದ್ದು, ಬಳಿಕ ತಾಯಿಯೊಂದಿಗೆ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಳು.

ಚಿಕ್ಕಪ್ಪನ ಮನೆಯಲ್ಲಿ ಒಟ್ಟು ಐದು ಜನ ವಾಸವಿದ್ದರು. ಈಕೆಯ ಇಬ್ಬರೂ ಚಿಕ್ಕಮ್ಮಂದಿರು ಮೂಗರಾಗಿದ್ದು, ಬಾಲಕಿ ಚಿಕ್ಕಮ್ಮಳೊಂದಿಗೆ ಮಲಗುತ್ತಿದ್ದಳು. ಕೊಲೆ ನಡೆದ ರಾತ್ರಿಯೂ ಈಕೆ ಚಿಕ್ಕಮ್ಮಳೊಂದಿಗೆ ಮಲಗಿದ್ದು, ತಡರಾತ್ರಿ ಕೋಣೆಯಿಂದ ಪಕ್ಕದ ಅಡುಗೆಮನೆಗೆ ಬಂದಿದ್ದಾಳೆ. ಆದರೆ, ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಬಾಲಕಿಯ ಶವ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿರುವುದು ಬೆಳಕಿಗೆ ಬಂದಿದೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಸ್‌ಪಿ ಕೆ.ಎಂ. ಶಾಂತರಾಜು ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸಾವಿನ ಬಗ್ಗೆ ತನಿಖೆ ನಡೆದಿದ್ದು, ಭದ್ರಾವತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ