ಆ್ಯಪ್ನಗರ

ಅಡಕೆ ಬೆಳೆಗೆ ಪರಿಹಾರ ಕೊಡಿ

ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಅಡಕೆ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಆಫ್ಸ್‌ಕೋಸ್‌ ವತಿಯಿಂದ ಶಾಸಕ ಎಚ್‌.ಹಾಲಪ್ಪ ಮತ್ತು ಉಪವಿಭಾಗಾಧಿಕಾರಿ ಪಿ.ವಿ.ದರ್ಶನ್‌ ಅವರ ಮೂಲಕ ಸಿಎಂಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

Vijaya Karnataka 11 Aug 2019, 5:00 am
ಸಾಗರ : ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಅಡಕೆ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಆಫ್ಸ್‌ಕೋಸ್‌ ವತಿಯಿಂದ ಶಾಸಕ ಎಚ್‌.ಹಾಲಪ್ಪ ಮತ್ತು ಉಪವಿಭಾಗಾಧಿಕಾರಿ ಪಿ.ವಿ.ದರ್ಶನ್‌ ಅವರ ಮೂಲಕ ಸಿಎಂಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
Vijaya Karnataka Web SMR-09SGR4


ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತೆ ಆಗಿದೆ. ಸಾಗರ, ಸೊರಬ, ಹೊಸನಗರ ತಾಲೂಕಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಾಂತ್ಯದ ಮುಖ್ಯ ವಾಣಿಜ್ಯ ಬೆಳೆÜ ಅಡಕೆ ಮತ್ತು ಅಡಕೆ ತೋಟಗಳಿಗೆ ಅಪಾರ ಹಾನಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಧಾರಾಕಾರ ಮಳೆಯಿಂದಾಗಿ ಅಡಕೆಗೆ ವ್ಯಾಪಕ ಕೊಳೆ ರೋಗ ಬಂದಿದ್ದು, ಅಡಕೆಗಳು ಉದುರುತ್ತಿವೆ. ಗುಡ್ಡಬೆಟ್ಟಗಳಿಂದ ತೋಟಕ್ಕೆ ನೀರು ನುಗ್ಗಿ ತೋಟದ ಬದುಗಳಿಗೆ ಹಾನಿಯಾಗಿದೆ. ಮನೆಗಳಿಗೆ ಸಹ ನೀರು ನುಗ್ಗಿ ಕೆಲವು ಕಡೆ ಕುಸಿದಿವೆ. ಕೆಲ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಅಪಾರ ಹಾನಿ ಸಂಭವಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಅಡಕೆ ಬೆಲೆ ಕುಸಿತದ ಪರಿಣಾಮದಿಂದ ಕಂಗಾಲಾಗಿರುವ ಬೆಳೆಗಾರರು ಅತಿವೃಷ್ಟಿಯಿಂದ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷ ಣ ಇಲಾಖೆ ವತಿಯಿಂದ ನಷ್ಟ ಪರಿಹಾರದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಆಫ್ಸ್‌ಕೋಸ್‌ ಅಧ್ಯಕ್ಷ ಬಿ.ಎ.ಇಂದೂಧರ, ನಿರ್ದೇಶಕ ಮಂಡಳಿಯ ಕೆ.ಎಂ.ಸೂರ್ಯನಾರಾಯಣ್‌, ಹೊಡಬಟ್ಟೆ ರಾಘವೇಂದ್ರ, ಆರ್‌.ಎಸ್‌.ಗಿರಿ, ಕೆ.ಎಸ್‌.ಸುಬ್ರಾವ್‌, ಪಿ.ಎನ್‌.ಸುಬ್ರಾವ್‌, ಮಂಜಪ್ಪ, ಕಾರ‍್ಯದರ್ಶಿ ಶಶಿಧರ್‌, ವಿಶ್ವನಾಥ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ