ಆ್ಯಪ್ನಗರ

‘ಮಕ್ಕಳಿಗೆ ಸಂಸ್ಕಾರ ಕಲಿಸಿ, ಮೌಲ್ಯ ಉಳಿಸಿ’

ಕುಟುಂಬಗಳ ವಿಭಜನೆಯಿಂದಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವುದೇ ಕಷ್ಟವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 14 Dec 2018, 5:00 am
ಶಿವಮೊಗ್ಗ: ಕುಟುಂಬಗಳ ವಿಭಜನೆಯಿಂದಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವುದೇ ಕಷ್ಟವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್‌ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web SMG-1312-2-15-13GANESH3


ನಗರದ ಅಂಬೇಡ್ಕರ್‌ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ 9ನೇ ವರ್ಷದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬಗಳು ಇಂದು ವಿಭಜನೆಯಾಗುತ್ತಿವೆ. ಮಕ್ಕಳು ಕೂಡ ಒಂಟಿಯಾಗುತ್ತಿದ್ದಾರೆ. ಹಿಂದೆ ಅವಿಭಕ್ತ ಕುಟುಂಬಗಳು ಇದ್ದವು. ಅಲ್ಲಿ ಸಂಬಂಧಗಳ ಅನುಬಂಧವಿತ್ತು. ಅಜ್ಜ, ಅಜ್ಜಿ ತಮ್ಮ ಮೊಮ್ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಜೀವನ ಮೌಲ್ಯ ಮತ್ತು ಸಂಸ್ಕಾರಗಳನ್ನು ತುಂಬುತ್ತಿದ್ದರು. ಆದರೆ, ಇಂದು ಕಥೆ ಹೇಳುವವರೇ ಇಲ್ಲವಾಗಿದೆ. ಮಕ್ಕಳು ಕೂಡ ಅನಾಥಪ್ರಜ್ಞೆಯಿಂದ ಬೆಳೆಯುವಂತಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಎಷ್ಟೋ ಮಕ್ಕಳು ಬಾಲ್ಯವನ್ನು ಕಳೆದುಕೊಳ್ಳುವುದರ ಜತೆಗೆ ಮೌಲ್ಯವನ್ನು ಕೂಡ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಅವಿಭಕ್ತ ಕುಟುಂಬದ ಹಿರಿಯರ ಜವಾಬ್ದಾರಿಯನ್ನು ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಹೊರಬೇಕಾದ ಅನಿವಾರ್ಯತೆ ಇಂದು ಇದೆ. ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಮಕ್ಕಳಲ್ಲಿ ಪ್ರೀತಿ ತುಂಬಬೇಕು. ಕಥೆಗಳನ್ನು ಹೇಳಬೇಕು. ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದರು.

ಮಾತೆಯರು ಮನಸ್ಸು ಮಾಡಿದರೆ ಇದೆಲ್ಲ ಸಾಧ್ಯ. ಶಿಲೆಯನ್ನು ಕೆತ್ತಿ ಸುಂದರ ವಿಗ್ರಹ ಮಾಡಿದಂತೆ ಮಕ್ಕಳನ್ನು ಕೂಡ ಬದಲಾಯಿಸಬೇಕು. ಇದರಿಂದ ಅಪರಾಧಗಳ ಸಂಖ್ಯೆಯೂ ಕೂಡ ಮುಂದೆ ತಡೆದಂತಾಗುತ್ತದೆ ಎಂದರು.

ಅಂಗನವಾಡಿ ಕಾರ‍್ಯಕರ್ತೆ ಮೀನಾಕ್ಷ ಮ್ಮ ಅಧ್ಯಕ್ಷ ತೆ ವಹಿಸಿದ್ದರು. ಶಿಶು ಅಭಿವೃದ್ಧಿ ಅಧಿಕಾರಿ ಎನ್‌. ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್‌.ಶೇಷಪ್ಪ, ದಿವಾಕರ್‌, ಗಂಗೂಬಾಯಿ ಸೇರಿದಂತೆ ಹಲವರಿದ್ದರು.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಫಲ ಸಿಗಬೇಕು ಎಂದರೆ ಕಾನೂನಾತ್ಮಕ ಹೋರಾಟ ಆಗಬೇಕಿದೆ. ಸೇವೆ ಕಾಯಂಗೊಳಿಸಲು ಕಾಯ್ದೆ ತಿದ್ದುಪಡಿ ತಂದು ಹೊಸ ಕಾನೂನು ರಚಿಸುವಂತೆ ಕಾರ್ಯಕರ್ತೆಯರು ಸರಕಾರ ಮೇಲೆ ಒತ್ತಡ ಹಾಕಬೇಕು. ಕಾನೂನಾತ್ಮಕ ಹೋರಾಟ ಮಾಡಲು ಅವಕಾಶವಿದೆ.

-ಸೋಮಶೇಖರ್‌ ಸಿ.ಬದಾಮಿ, ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರು




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ