ಆ್ಯಪ್ನಗರ

ಸರಕಾರಿ ನೌಕರರಂತೆ ಎನ್‌ಪಿಎಸ್‌ ಕೊಡಿ

ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ನೌಕರರಿಗೆ ಸರಕಾರಿ ನೌಕರರಿಗಿರುವಂತೆ ಪಿಂಚಣಿ ಸೌಲಭ್ಯ (ಎನ್‌ಪಿಎಸ್‌) ಯಥಾವತ್ತಾಗಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಶನಿವಾರ ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

Vijaya Karnataka 22 Dec 2019, 5:00 am
ಭದ್ರಾವತಿ: ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ನೌಕರರಿಗೆ ಸರಕಾರಿ ನೌಕರರಿಗಿರುವಂತೆ ಪಿಂಚಣಿ ಸೌಲಭ್ಯ (ಎನ್‌ಪಿಎಸ್‌) ಯಥಾವತ್ತಾಗಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಅನುದಾನಿತ ಶಾಲೆ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಶನಿವಾರ ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 21BDVT1_46


2006ಕ್ಕೂ ಪೂರ್ವದಲ್ಲಿನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಹಾಗೂ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಸುಮಾರು 60 ಸಾವಿರ ನೌಕರರಿಗೆ ಎನ್‌ಪಿಎಸ್‌ ಅಥವಾ ಒಪಿಎಸ್‌ ಯಾವುದೇ ಪಿಂಚಣಿ ಇರುವುದಿಲ್ಲ. ಈಗಾಗಲೇ ನಿವೃತ್ತರಾಗಿರುವ ಸಾವಿರಾರು ನೌಕರರು ಕೇವಲ ಕೊನೆಯ ತಿಂಗಳ ಸಂಬಳ ಪಡೆದು ನಿವೃತ್ತರಾಗಿದ್ದಾರೆ. ಕೆಲವರು ಮರಣಹೊಂದಿದ್ದಾರೆ. ಇದರಿಂದ ಪಿಂಚಣಿ ತಾರತಮ್ಯ ವಿಚಾರದಲ್ಲಿಅನೇಕ ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ ಎಂದು ಮನವಿಯಲ್ಲಿತಿಳಿಸಲಾಗಿದೆ.

ನೌಕರರ ವೇತನ ಅನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ಪಿಂಚಣಿ ಮತ್ತು ಇತರೆ ಸೌಲಭ್ಯ ನೀಡಬೇಕೆಂದು ಕೋರ್ಟ್‌ ನೌಕರರ ಪರ ತೀರ್ಪು ನೀಡಿದ್ದರೂ ಸರಕಾರ ಬೇಡಿಕೆ ಈಡೇರಿಸುತ್ತಿಲ್ಲ. ಹಾಲಿ ವೇತನ ನೀಡುತ್ತಿರುವುದು ಸರಕಾರವೇ ಆಗಿರುವುದರಿಂದ ಪಿಂಚಣಿ ವಿಚಾರದಲ್ಲಿಸರಕಾರಿ ಮತ್ತು ಅನುದಾನಿತ ಸಂಸ್ಥೆಗಳ ನೌಕರರ ಮಧ್ಯೆ ಯಾವುದೇ ತಾರತಮ್ಯ ಇಲ್ಲ. ಪಿಎಫ್‌ಆರ್‌ಡಿಎ ಗೆ ಉದ್ಯೋಗದಾತರ ಪಾಲಿನ ವಂತಿಗೆಯನ್ನು ಆಯಾ ರಾಜ್ಯ ಸರಕಾರಗಳೇ ಭರಿಸುತ್ತಿವೆ. 2006 ಏ.1ರ ಮೊದಲು ರಾಜ್ಯದಲ್ಲೂಯಥಾವತ್ತಾಗಿ ನೀಡಲಾಗುತ್ತಿತ್ತು. ಸರಕಾರ ನೌಕರರಿಗೆ ಪಿಂಚಣಿ ನೀಡುವಂತೆ ಎನ್‌ಪಿಎಸ್‌ ಸೌಲಭ್ಯ ಅನುದಾನಿತ ನೌಕರರಿಗೂ ನೀಡಬೇಕು. ಜ10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿತಿಳಿಸಿದ್ದಾರೆ. ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಸಿ.ಪಿ.ರವಿಕುಮಾರ್‌ ನೇತೃತ್ವ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಸಿ.ಡಿ.ಮಂಜುನಾಥ್‌, ಟಿ.ಕೃಷ್ಣಪ್ಪ, ಜೆ.ಸಿ.ರವಿನಾಯ್ಕ, ನಾಗಭೋವಿ, ಸಿ.ಎಚ್‌. ನಾಗೇಂದ್ರಪ್ಪ, ಲಕ್ಷತ್ರ್ಮಣ, ಶಿವಕುಮಾರ್‌ ಇತರರು ಇದ್ದರು. ತಹಸೀಲ್ದಾರ್‌ ಸೋಮಶೇಖರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ