ಆ್ಯಪ್ನಗರ

ಹೊಳೆಬಾಗಿಲು ,ಹಸಿರುಮಕ್ಕಿ ಲಾಂಚ್‌: ಪ್ರವಾಸಿಗರಿಗೆ ಪ್ರವೇಶವಿಲ್ಲ

ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನ ಸೇರಿದಂತೆ ಈ ಭಾಗದವರಿಗೆ ಸಂಪರ್ಕ ಕಲ್ಪಿಸುವ ಅಂಬಾರಗೋಡ್ಲುಕಳಸವಳ್ಳಿ ಲಾಂಚ್‌ ಸೇವೆಯಲ್ಲಿಪ್ರವಾಸಿಗರಿಗೆ ಹಾಗೂ ಪ್ರವಾಸಿಗರ ವಾಹನಗಳಿಗೆ ಅವಕಾಶವಿಲ್ಲಎಂಬ ನಾಮಫಲಕ ಅಳವಡಿಸುವಂತೆ ತಾಪಂ ಇಒ ಮಂಗಳವಾರ ಆದೇಶ ಹೊರಡಿಸಿದ್ದಾರೆ.

Vijaya Karnataka 2 Jul 2020, 5:00 am
ಸಾಗರ:ತಾಲೂಕಿನ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನ ಸೇರಿದಂತೆ ಈ ಭಾಗದವರಿಗೆ ಸಂಪರ್ಕ ಕಲ್ಪಿಸುವ ಅಂಬಾರಗೋಡ್ಲುಕಳಸವಳ್ಳಿ ಲಾಂಚ್‌ ಸೇವೆಯಲ್ಲಿಪ್ರವಾಸಿಗರಿಗೆ ಹಾಗೂ ಪ್ರವಾಸಿಗರ ವಾಹನಗಳಿಗೆ ಅವಕಾಶವಿಲ್ಲಎಂಬ ನಾಮಫಲಕ ಅಳವಡಿಸುವಂತೆ ತಾಪಂ ಇಒ ಮಂಗಳವಾರ ಆದೇಶ ಹೊರಡಿಸಿದ್ದಾರೆ.
Vijaya Karnataka Web glossy greenbark launch no access for tourists
ಹೊಳೆಬಾಗಿಲು ,ಹಸಿರುಮಕ್ಕಿ ಲಾಂಚ್‌: ಪ್ರವಾಸಿಗರಿಗೆ ಪ್ರವೇಶವಿಲ್ಲ


ಸಿಗಂದೂರು ದೇವಾಲಯದಲ್ಲಿಸಾರ್ವಜನಿಕ ದರ್ಶನ ನಿಷೇಧಿಸಿದ್ದರೂ ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.ಹೊಳೆಬಾಗಿಲು ಹಾಗೂ ಹಸಿರುಮಕ್ಕಿ ಲಾಂಚ್‌ನಲ್ಲಿ ವಾಹನ ಹಾಗೂ ಜನದಟ್ಟಣೆಯಿಂದ ಸ್ಥಳೀಯರಿಗೆ, ಲಾಂಚ್‌ ಸಿಬ್ಬಂದಿಗೆ ಮಾರಕ ಕೊರೊನಾ ವೈರಸ್‌ ಹರಡುವ ಸಾಧ್ಯತೆ ಇದೆ.ಆದ್ದರಿಂದ ಪ್ರವಾಸಿಗರಿಗೆ ಮತ್ತು ಪ್ರವಾಸಿ ವಾಹನಗಳಿಗೆ ಪ್ರವೇಶ ಇರುವುದಿಲ್ಲಎಂಬ ನಾಮಫಲಕ ಅಳವಡಿಸಲು ಸೂಚಿಸಲಾಗಿದೆ.ಮುಂದಿನ ಆದೇಶದವರೆಗೆ ಕೋಳೂರು ಮತ್ತು ತುಮರಿ ಗ್ರಾಪಂಗಳ ಎದುರು ಬ್ಯಾರಿಕೇಡ್‌ ಅಳವಡಿಸುವ ಮೂಲಕ ಪ್ರವಾಸಿವಾಹನಗಳನ್ನು ಪರಿಶೀಲಿಸಿ, ನಿಯಂತ್ರಿಸಬೇಕು. ಪ್ರವಾಸಿ ವಾಹನಗಳನ್ನು ವಾಪಾಸು ಕಳಿಸಬೇಕು ಎಂದು ತಾಪಂ ಇಒ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ