ಆ್ಯಪ್ನಗರ

ನಾಳೆ ಸರ್ವೋದಯ ಪಾದಯಾತ್ರೆ ಸುವರ್ಣ ಮಹೋತ್ಸವ

ಕರ್ನಾಟಕ ಗಾಂಧಿ ಸರ್ದಾರ್‌ ಮಲ್ಲಿಕಾರ್ಜುನ ಗೌಡರ ಅಖಂಡ ಕರ್ನಾಟಕ ಭೂದಾನ ಗ್ರಾಮದಾನ ಸರ್ವೋದಯ ಪಾದಯಾತ್ರೆಯ ಸುವರ್ಣ ಮಹೋತ್ಸವ ಆಚರಣೆ ಜ.25ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ಆರ್‌.ಪಾಟೀಲ್‌ ತಿಳಿಸಿದರು.

Vijaya Karnataka 24 Jan 2019, 5:00 am
ಸೊರಬ: ಕರ್ನಾಟಕ ಗಾಂಧಿ ಸರ್ದಾರ್‌ ಮಲ್ಲಿಕಾರ್ಜುನ ಗೌಡರ ಅಖಂಡ ಕರ್ನಾಟಕ ಭೂದಾನ ಗ್ರಾಮದಾನ ಸರ್ವೋದಯ ಪಾದಯಾತ್ರೆಯ ಸುವರ್ಣ ಮಹೋತ್ಸವ ಆಚರಣೆ ಜ.25ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ.ಆರ್‌.ಪಾಟೀಲ್‌ ತಿಳಿಸಿದರು.
Vijaya Karnataka Web golden jubilee for sarvodaya marchfast tomorrow
ನಾಳೆ ಸರ್ವೋದಯ ಪಾದಯಾತ್ರೆ ಸುವರ್ಣ ಮಹೋತ್ಸವ


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುವರ್ಣ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಆಚಾರ್ಯ ವಿನೋಬ ಬಾವೆಯವರ ಸರ್ವೋದಯ ಚಳವಳಿ ಮತ್ತು ಭೂದಾನ ಆಂದೋಲನದ ಅನುಯಾಯಿಯಾಗಿ, ಕರ್ನಾಟಕದಾದ್ಯಂತ ಪಾದಯಾತ್ರೆ ಮಾಡಿದ್ದ ಸರ್ದಾರ್‌ ಮಲ್ಲಿಕಾರ್ಜುನ ಅವರು ಸಾವಿರಾರು ಮನಸ್ಸುಗಳನ್ನು ಭೂದಾನಕ್ಕೆ ಪ್ರೇರೇಪಿಸಿದ್ದಲ್ಲದೆ, ಸ್ವತಹ 800 ಎಕರೆ ಜಮೀನನ್ನು ದಾನ ಮಾಡಿದ್ದಾರೆ. ಆನವಟ್ಟಿಯ ಎಣ್ಣೆಕೊಪ್ಪ ಗ್ರಾಮದ ಸರ್ದಾರ್‌ ಮಲ್ಲಿಕಾರ್ಜುನ ಅವರು ನಡೆಸಿದ ಭೂದಾನ ಪಾದಯಾತ್ರೆಯ 50ನೇ ವರ್ಷದ ಕಾರ್ಯಕ್ರಮವನ್ನು ಆನವಟ್ಟಿಯ ಮಹಾತ್ಮಗಾಂಧಿ ಸಾರ್ವಜನಿಕ ವಿದ್ಯಾರ್ಥಿ ನಿಲಯದ ವೇದಿಕೆಯಲ್ಲಿ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದರು.

ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಆನಂದಪುರಂ ಮುರುಘಾಮಠದ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹಿರೇಮಾಗಡಿಯ ಶ್ರೀ.ಡಾ. ಶಿವಮೂರ್ತಿ ಮುರುಘರಾಜೆಂದ್ರ ಸ್ವಾಮೀಜಿ, ಗೊಗ್ಗೆಹಳ್ಳಿ ಸಂಸ್ಥಾನ ಮಠದ ಶ್ರೀಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ.ಡಾ.ಮಹಂತಸ್ವಾಮಿಗಳು, ಮೂಡಿ ಲಿಂಗೇಶ್ವರ ಮಠದ ಸದಾಶಿವ ಸ್ವಾಮಿಗಳು, ತೊಗರ್ಸಿಯ ಶಿವಾಚಾರ್ಯ ಸ್ವಾಮೀಜಿ, ಶಾಂತಪುರ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕ್ಯಾಸನೂರು ಮಠದ ಶ್ರೀಗುರುಬಸವ ಶಿವಾಚಾರ್ಯ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ಸರ್ವೋದಯ ಜ್ಯೋತಿ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಶಾಸಕ ಕುಮಾರ್‌ ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಸರ್ವೋದಯ ಚಳವಳಿಯ ಭಾವಚಿತ್ರ ಉದ್ಘಾಟಿಸಲಿದ್ದು, ಬಿ.ವೈ.ರಾಘವೇಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಹರತಾಳು ಹಾಲಪ್ಪ ಅಹಿಂಸೆಯ ಸರ್ದಾರ್‌ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದು, ಶಾಸಕ ಬಿ.ಸಿ.ಪಾಟೀಲ್‌ ದೇಶ ಭಕ್ತ ಸತ್ಪುರುಷರು ಇತಿಹಾಸ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದರು.

ದಾನ ಶ್ರೇಷ್ಠ ಎಣ್ಣೆಕೊಪ್ಪದ ಸರ್ದಾರ್‌ ಹರೀಶ್‌ಗೌಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಈಸೂರಿನ ಹುಚ್ಚರಾಯಪ್ಪ ಅವರನ್ನು ಸನ್ಮಾನಿಸಲಾಗುವುದು. ಸಮಗ್ರ ಕೃಷಿ ಕುರಿತು ರಾಯಚೂರಿನ ಕವಿತಾ ಮಿಶ್ರಾ, ಸರ್ವೋದಯ ಕುರಿತು ಬಿ.ಶಿವರಾಜ ಬೆಂಗಳೂರು, ಸರ್ದಾರ್‌ ಮಲ್ಲಿಕಾರ್ಜುನಗೌಡರ ಬಗ್ಗೆ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥೆ ವಿಜಯದೇವಿ ಹಾಗೂ ಡಾ. ಸುರೇಶ್‌ ಬೆಂಗಳೂರು, ಇ. ಎನ್‌. ತಿಪ್ಪೆನಗೌಡ ಮಾತನಾಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಭೆಯಲ್ಲಿ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಇಂದೂಧರ ಒಡೆಯರ್‌, ಕಾರ್ಯದರ್ಶಿ ಎಂ.ನಾಗಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚಿಕ್ಕವಲಿ ನಾಗರಾಜಗೌಡ, ಸಂಚಾಲಕ ಸದಾನಂದ ಗೌಡ, ಶಿವಯೋಗಿ ವೀರೇಶ್‌ ಗೌಡ, ಬೇನವಪ್ಪ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ