ಆ್ಯಪ್ನಗರ

ಅಡಕೆಗೆ ಗೊಣ್ಣೆ ಬಾಧೆ: ಜಾಗರೂಕತೆಗೆ ಸೂಚನೆ

ಮಳೆಗಾಲದಲ್ಲಿ ಉಲ್ಬಣಿಸುವ ಗೊಣ್ಣೆ ಹುಳು ಬಾಧೆಯಿಂದ ಅಡಕೆ ಬೆಳೆಗಾರರು ಜಾಗರೂಕತೆ ವಹಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Vijaya Karnataka 31 Jul 2019, 5:00 am
ಶಿವಮೊಗ್ಗ: ಮಳೆಗಾಲದಲ್ಲಿ ಉಲ್ಬಣಿಸುವ ಗೊಣ್ಣೆ ಹುಳು ಬಾಧೆಯಿಂದ ಅಡಕೆ ಬೆಳೆಗಾರರು ಜಾಗರೂಕತೆ ವಹಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web SMG-3007-2-15-30SMG6


ಗೊಣ್ಣೆ ಹುಳುವಿನ ಬಾಧೆ ಮಳೆಗಾಲದಲ್ಲಿ ತೀವ್ರವಾಗಿರುತ್ತದೆ. ಇದು ಉತ್ಪಾದನೆ ಕುಂಠಿತಗೊಳಿಸುತ್ತದೆ. ಹುಳುಗಳ ನಿರ್ವಹಣೆಗೆ ರೈತರು ಸಮಗ್ರ ಹತೋಟಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಮರಿ ಹುಳುಗಳು ಎಳೆ ಬೇರನ್ನು ಕಡಿದು ತಿನ್ನುತ್ತವೆ. ಅಂತಹ ಮರಗಳ ಎಲೆಗಳು ಹಳದಿಯಾಗುತ್ತವೆ. ಮರಗಳು ಬುಡದಿಂದ ಮೇಲಕ್ಕೆ ಚೂಪಾಗುತ್ತವೆ. ಸಣ್ಣ ಕಾಯಿಗಳು ಉದುರುತ್ತವೆ. ಕ್ರಮೇಣ ಬಾಧೆಗೊಳಗಾದ ಮರಗಳು ಒಣಗುತ್ತವೆ ಎಂದು ಹೇಳಿದ್ದಾರೆ.

(ಹತೋಟಿ ಕ್ರಮಗಳು) :
* ಬೇವು, ಪೇರಲ ಮುಂತಾದ ಗಿಡಗಳ ಟೊಂಗೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ಬದುಗಳ ಮೇಲೆ ಇಡಬೇಕು. ಇದರಿಂದ ದುಂಬಿಗಳು ಆಕರ್ಷಿಸಲ್ಪಟ್ಟು ಸಾಯುತ್ತವೆ.

* 10 ಮಿ.ಲೀ ಕ್ಲೋರೋಪೈರಿಫಾಸ್‌ 20 ಇ.ಸಿ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ