ಆ್ಯಪ್ನಗರ

ಉತ್ತಮ ಪುಸ್ತಕ ಉನ್ನತ ಶಿಕ್ಷ ಣದ ಜೀವಾಳ

ಪುಸ್ತಕಗಳು ಉನ್ನತ ಶಿಕ್ಷ ಣದ ಜೀವಾಳ ಮತ್ತು ಅವಿಭಾಜ್ಯ ಅಂಗ. ಉತ್ತಮ ಗ್ರಂಥ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗೆ ಬಳಸುವ ಮೂಲಕ ಜಾಗತೀಕರಣದ ಸ್ಪರ್ಧೆ, ಸವಾಲುಗಳಿಗೆ ಉತ್ತರ ನೀಡಲು ಸಜ್ಜಾಗಬೇಕೆಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಹೇಳಿದರು.

Vijaya Karnataka 5 Jan 2019, 5:00 am
ಶಿವಮೊಗ್ಗ: ಪುಸ್ತಕಗಳು ಉನ್ನತ ಶಿಕ್ಷ ಣದ ಜೀವಾಳ ಮತ್ತು ಅವಿಭಾಜ್ಯ ಅಂಗ. ಉತ್ತಮ ಗ್ರಂಥ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗೆ ಬಳಸುವ ಮೂಲಕ ಜಾಗತೀಕರಣದ ಸ್ಪರ್ಧೆ, ಸವಾಲುಗಳಿಗೆ ಉತ್ತರ ನೀಡಲು ಸಜ್ಜಾಗಬೇಕೆಂದು ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಹೇಳಿದರು.
Vijaya Karnataka Web smr-4ganesh1


ಶಂಕರಘಟ್ಟದ ಕುವೆಂಪು ವಿವಿ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವವಿದ್ಯಾಲಯ ಗ್ರಂಥಾಲಯ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಎರಡು ದಿನದ ಪುಸ್ತಕ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಅಭಿವೃದ್ಧಿಗೊಂಡು ಇ-ಗ್ರಂಥಗಳು ಇಂಟರ್ನೆಟ್‌ ಮೂಲಕ ದೊರೆಯುತ್ತಿದ್ದರೂ, ಕಾಗದ ಪ್ರಕಟಣೆ ಮಾದರಿಯ ಪುಸ್ತಕಗಳನ್ನು ಇಂದಿಗೂ ಜನರು ಇಷ್ಟಪಡುತ್ತಾರೆ. ಅಂತಹ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಶೇಖರಿಸಿ ಓದುಗರಿಗೆ ಒದಗಿಸುವುದು ಸಾಂಸ್ಥಿಕ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಮೇಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರು ಮತ್ತು ವಿತರಕರು ಪಾಲ್ಗೊಂಡು ಪ್ರದರ್ಶಿಸಲಾಗಿದ್ದ ಕಲೆ, ಸಾಹಿತ್ಯ, ಸಮಾಜ ವಿಜ್ಞಾನ, ವಿಜ್ಞಾನ-ತಂತ್ರಜ್ಞಾನ ವಿಷಯಗಳ ಗ್ರಂಥಗಳನ್ನು ಅಧ್ಯಾಪಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಅವಲೋಕಿಸಿ ಕೊಳ್ಳುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ವಿವಿ ಹಣಕಾಸು ಅಧಿಕಾರಿ ಪ್ರೊ.ಹಿರೇಮಣಿನಾಯ್ಕ್‌, ಪ್ರಭಾರ ಗ್ರಂಥಪಾಲಕ ಡಾ.ಆರ್‌.ಎಚ್‌. ವಾಲ್ಮೀಕಿ, ಡಾ.ಶಂಕರಪ್ಪ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ