ಆ್ಯಪ್ನಗರ

ಮತದಾನದಿಂದ ಉತ್ತಮರ ಆಯ್ಕೆ

ಕಡ್ಡಾಯ ಮತದಾನ ಮತ್ತು 18 ವರ್ಷ ತುಂಬಿದವರು ಮತ ಪತ್ರ ನೋಂದಣಿ ಮಾಡಿಸುವುದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂದು ಹೊಸನಗರ ತಾಲೂಕು ಮತದಾರ ಸಾಕ್ಷರತಾ ಸಂಚಾಲಕ ಹಾಗೂ ಉಪನ್ಯಾಸಕ ಫ್ರಾನ್ಸಿಸ್‌ ಬೆಂಜಮಿನ್‌ ಹೇಳಿದರು.

Vijaya Karnataka 15 Sep 2019, 5:00 am
ರಿಪ್ಪನ್‌ಪೇಟೆ: ಕಡ್ಡಾಯ ಮತದಾನ ಮತ್ತು 18 ವರ್ಷ ತುಂಬಿದವರು ಮತ ಪತ್ರ ನೋಂದಣಿ ಮಾಡಿಸುವುದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಎಂದು ಹೊಸನಗರ ತಾಲೂಕು ಮತದಾರ ಸಾಕ್ಷರತಾ ಸಂಚಾಲಕ ಹಾಗೂ ಉಪನ್ಯಾಸಕ ಫ್ರಾನ್ಸಿಸ್‌ ಬೆಂಜಮಿನ್‌ ಹೇಳಿದರು.
Vijaya Karnataka Web good choice by voting
ಮತದಾನದಿಂದ ಉತ್ತಮರ ಆಯ್ಕೆ


ಗರ್ತಿಗೆರೆ ಗ್ರಾಮದ ಅಮೃತ ಸರಕಾರಿ ಪದವಿಪೂರ್ವ ಕಾಲೇಜಲ್ಲಿಶುಕ್ರವಾರ ಮತದಾರರ ಸಾಕ್ಷರತಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಒಳ್ಳೆ ಆಡಳಿತ ನಿರೀಕ್ಷೆ ಮಾಡುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮತದಾರರ ಪಾತ್ರವು ಮಹತ್ತರವಾಗಿದೆ. ಶೇ 100ರಷ್ಟು ಮತದಾನವಾಗಬೇಕೆಂದು ಚುನಾವಣಾ ಆಯೋಗ ಮತ್ತು ಸರಕಾರ ಅನೇಕ ಯೋಜನೆ ಅನುಷ್ಠಾನಗೊಳಿಸಿದರೂ ಕಾರ್ಯಗತವಾಗುತ್ತಿಲ್ಲ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಶೇಕಡವಾರು ಮತದಾನ ಹೆಚ್ಚಾಗಿದೆ. ನಗರ ಪ್ರದೇಶ ಹಾಗೂ ಗ್ರಾಮೀಣ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯವಾಗಿ ಯುವ ಸಮೂಹಕ್ಕೆ ಮತದಾನದ ಪಟ್ಟಿಯಲ್ಲಿಹೆಸರು ಸೇರ್ಪಡೆ, ತಿದ್ದುಪಡಿ ಬಗ್ಗೆ ಮಾಹಿತಿ ನೀಡುವ ಜತೆಗೆ ಮತದಾನದ ಬಗ್ಗೆ ಅರಿವು ಮೂಡಿಸಬೇಕೆಂದರು.

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕಲ್ಲೂರು ಶಂಕ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಬಿ.ಉದಯಕುಮಾರ ಮಾತನಾಡಿ, ಮತದಾನ ಪಾವಿತ್ರತ್ರ್ಯತೆಯ ಹಕ್ಕು. ಹಣ ಹಾಗೂ ವಸ್ತುಗಳ ಆಮಿಷಕ್ಕೆ ಬಲಿಯಾಗಿ ಮತದಾನಮಾಡಿದರೆ ನಮ್ಮ ಹಕ್ಕನ್ನು ನಾವು ಕಳೆದುಕೊಂಡಂತಾಗುತ್ತದೆ. ಮತದಾನದ ಮೂಲಕ ಒಳ್ಳೆ ಪ್ರತಿನಿಧಿ ಆಯ್ಕೆಮಾಡಿದರೆ ಉತ್ತಮ ಆಡಳಿತ ನಿರೀಕ್ಷೆ ಮಾಡಬಹುದು ಎಂದರು.

ವಿದ್ಯಾರ್ಥಿಗಳು ಮತದಾನ ಜಾಗೃತಿ ಜಾಥಾ ನಡೆಸಿದರು. ಉಪನ್ಯಾಸಕರಾದ ಲೇಖನ್‌, ಹಾಲಪ್ಪ ಸಂಕೂರ್‌, ಸತೀಶ್‌, ನಾಗೇಶ್‌ ಸೋಮಯಾಜಿ , ರಾಜು, ಬಸವರಾಜಪ್ಪ, ಸಬಾಸ್ಟಿನ್‌ ಮ್ಯಾಥ್ಯೂಸ್‌, ಶಾಂತ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ