ಆ್ಯಪ್ನಗರ

‘ಕಲೆಯಿಂದಲೇ ಉತ್ತಮ ಅಭಿರುಚಿ’

ರಾಮಾಯಣ, ಮಹಾಭಾರತ ಮಹಾಕೃತಿಗಳು ಕಾಲ್ಪನಿಕವಾದುದ್ದಲ್ಲ. ಮನುಷ್ಯನ ಪ್ರತಿಯೊಂದು ಗುಣ ಇಲ್ಲಿರುವ ಪಾತ್ರಧಾರಿಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅಭಿಪ್ರಾಯ ವ್ಯಕ್ತಪಡಿಸಿದರು

Vijaya Karnataka 20 Aug 2018, 5:00 am
ಶಿವಮೊಗ್ಗ: ರಾಮಾಯಣ, ಮಹಾಭಾರತ ಮಹಾಕೃತಿಗಳು ಕಾಲ್ಪನಿಕವಾದುದ್ದಲ್ಲ. ಮನುಷ್ಯನ ಪ್ರತಿಯೊಂದು ಗುಣ ಇಲ್ಲಿರುವ ಪಾತ್ರಧಾರಿಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web good taste by art
‘ಕಲೆಯಿಂದಲೇ ಉತ್ತಮ ಅಭಿರುಚಿ’


ಶಿವಮೊಗ್ಗ ರಂಗಾಯಣ ಕಲಾವಿದರ ರಂಗಸಂಚಾರ 'ರಂಗ ತೇರು' ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾವ ರೀತಿಯಲ್ಲಿ ಉತ್ತಮ ಮನುಷ್ಯರಾಗಿ ಬಾಳಲು ಸಾಧ್ಯ ಎಂಬುದನ್ನು ಮಹಾಕೃತಿಗಳ ಮೂಲಕ ತಿಳಿದುಕೊಳ್ಳಬಹುದು ಎಂದರು.

ಕಲೆ ಮೂಲಕ ಸಮಾಜದಲ್ಲಿ ಉತ್ತಮ ಅಭಿರುಚಿ ಮೂಡಿಸುವ ಉದ್ದೇಶದಿಂದ ರಾಜ್ಯ ನಾಲ್ಕು ವಿಭಾಗಗಳಲ್ಲಿ ರಂಗಾಯಣ ಆರಂಭಿಸಲಾಗಿದೆ. ಅದಲ್ಲೂ 'ಶಿವಮೊಗ್ಗ ರಂಗಾಯಣ' ದೃಢವಾಗಿ ಹೆಜ್ಜೆಗಳನ್ನು ಇಡುತ್ತಿರುವುದು ಶ್ಲಾಘನೀಯ ಎಂದರು. ಶಿವಮೊಗ್ಗ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ರಂಗಾಯಣ ಕಲಾವಿದರಿಗೆ ಉತ್ತಮ ಭವಿಷ್ಯವಿದೆ. ಕಲಾವಿದರ ಸಮಸ್ಯೆಗಳ ಬಗ್ಗೆಯೂ ಅರಿವಿದ್ದು, ಅದನ್ನೇ ವೈಭವೀಕರಿಸದೇ ಕಲೆಯ ಅಭಿವ್ಯಕ್ತಿಗೆ, ಪ್ರತಿಭೆಗಳ ಅನಾವರಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ನೈಜ ಅರ್ಥದಲ್ಲಿ ಕಲಾವಿದರೂ 'ಅಜಾತಶತ್ರು'ಗಳು: ಕಲಾವಿದರು ನಿಜವಾದ ಅರ್ಥದಲ್ಲಿ ಅಜಾತಶತ್ರುಗಳಾಗಿದ್ದು, ಸಮಾಜದಲ್ಲಿ ಉತ್ತಮ ಅಭಿರುಚಿ ಮೂಡಿಸುವ ಕಾರ್ಯವನ್ನು ಕಲೆಯ ಮೂಲಕ ಮಾಡಬೇಕಿದೆ. ಸಮಾಜದಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಬಿತ್ತುವ ಕೆಲಸವಾಗಬೇಕಿದೆ ಎಂದು ಡಿಸಿ ತಿಳಿಸಿದರು.

ರಂಗಾಯಣ ನಿರ್ದೇಶಕ ಗಣೇಶ್‌ ಅವರು 'ರಂಗ ತೇರು' ಪಯಣ ವಿವರ ನೀಡಿದರು. ಆ.20, 21ರಂದು ಎಡಿಎ ರಂಗಮಂದಿರದಲ್ಲಿ, 22, 23, 24ರಂದು ಕೋಲಾರ, 26, 27, 28ರಂದು ಹೊಸಕೋಟೆ, 29,30 ಮತ್ತು 31ಮೆಳೇಹಳ್ಳಿ ತುಮಕೂರು, ಸೆಪ್ಟೆಂಬರ್‌ 1 ರಿಂದ 3ರವರೆಗೆ ಚಿತ್ರದುರ್ಗ, 4-6ರವರೆಗೆ ದಾವಣಗೆರೆ, 8ರಿಂದ 19ರವರೆಗೆ ಬಾಗಲಕೋಟೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಶಿವಮೊಗ್ಗ ರಂಗಾಯಣದ ಕಲಾವಿದರು ಅಭಿನಯಿಸಿರುವ ಆಷಾಢದ ಒಂದು ದಿನ, ಟ್ರಾನ್ಸ್‌ನೇಷನ್‌ ಮತ್ತು ದುಬೈ ದೂಳಪ್ಪನ ಭರ್ಜರಿ ಗಾಳ ನಾಟಕಗಳ ಪ್ರದರ್ಶನ ನಡೆಯಲಿವೆ. ಪ್ರತಿ ಊರಿನಲ್ಲಿ ನಾಟಕದ ಒಂದು ಪ್ರದರ್ಶನ ನಡೆಯಲಿದ್ದು, ಬಾಗಲಕೋಟೆಯಲ್ಲಿ 12 ದಿನಗಳ ಪ್ರದರ್ಶನ ನೀಡಲಾಗುವುದು ಎಂದು ತಿಳಿಸಿದರು. ರಂಗಾಯಣ ಆಡಳಿತ ಅಧಿಕಾರಿ ಶಫಿ ಸಾದುದ್ದೀನ್‌, ಹಿರಿಯ ರಂಗಕರ್ಮಿ ಸತ್ಯನಾರಾಯಣಸ್ವಾಮಿ ಅಣತಿ, ಸಾಸ್ವೆಹಳ್ಳಿ ಸತೀಶ್‌ ಇತರರಿದ್ದರು.

=============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ