ಆ್ಯಪ್ನಗರ

ಸರಕಾರಿ ಮರಳು ಕ್ವಾರೆ ಜಂಟಿ ಸಮೀಕ್ಷೆ

ಸರಕಾರಿ ಮರಳು ಕ್ವಾರೆಯ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಶಾಸಕ ಆರಗ ಜ್ಞಾನೇಂದ್ರ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಮಳಲೂರು ಗ್ರಾಮದ ಕ್ವಾರೆಗಳಲ್ಲಿ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ಕಾರ‍್ಯ ನಡೆಸಿತು.

Vijaya Karnataka 6 Jun 2019, 5:00 am
ತೀರ್ಥಹಳ್ಳಿ: ಸರಕಾರಿ ಮರಳು ಕ್ವಾರೆಯ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಶಾಸಕ ಆರಗ ಜ್ಞಾನೇಂದ್ರ ಅವರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಮಳಲೂರು ಗ್ರಾಮದ ಕ್ವಾರೆಗಳಲ್ಲಿ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ಕಾರ‍್ಯ ನಡೆಸಿತು.
Vijaya Karnataka Web SMR-5TTH7


ಸಿಸಿಟಿವಿ ಕ್ಯಾಮೆರಾ, ವೇಬ್ರಿಡ್ಜ್‌ ಅಳವಡಿಕೆ, ಮರಳು ತೆಗೆದ ಪ್ರದೇಶ ವಿಸ್ತೀರ್ಣ, ಸಾಗಣೆ ಪ್ರಮಾಣ ಕುರಿತಂತೆ ಸಮೀಕ್ಷೆ ತಂಡ ಮಾಹಿತಿ ಸಂಗ್ರಹಿಸಿತು. ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸಮೀಕ್ಷಾ ತಂಡದಲ್ಲಿದ್ದರು.

ಶಾಸಕ ಆರಗ ಜ್ಞಾನೇಂದ್ರ ಅವರ ಸೂಚನೆ ಮೇರೆಗೆ ತಾ.ಪಂ.ಸದಸ್ಯರಾದ ಪ್ರಶಾಂತ್‌ಕುಕ್ಕೆ, ಗೀತಾಶೆಟ್ಟಿ, ಶಾಸಕರ ಆಪ್ತ ಸಹಾಯಕ ಹೊದಲ ಬಸವರಾಜ್‌ ಮತ್ತಿತರ ಬಿಜೆಪಿ ಮುಖಂಡರು ಹಾಜರಿದ್ದರು. ಸಾರ್ವಜನಿಕರೂ ಸೇರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ