ಆ್ಯಪ್ನಗರ

ಮುಖ್ಯಮಂತ್ರಿಗಳಿಗೆ ಶಕ್ತಿ ಇದ್ದರೆ ಸರಕಾರ ಉಳಿಸಿಕೊಳ್ಳಲಿ

ಮೈತ್ರಿ ಸರಕಾರಕ್ಕೆ ಆಧಾರವಾಗಿರುವ ಕಾಂಗ್ರೆಸ್‌ ಪಕ್ಷದವರೇ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಸರಕಾರ ಬೀಳುತ್ತದೆ. ಶಕ್ತಿ ಇದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಕಾರ ಉಳಿಸಿಕೊಳ್ಳಲಿ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಸವಾಲುಹಾಕಿದರು.

Vijaya Karnataka 16 Sep 2018, 5:00 am
ಶಿವಮೊಗ್ಗ : ಮೈತ್ರಿ ಸರಕಾರಕ್ಕೆ ಆಧಾರವಾಗಿರುವ ಕಾಂಗ್ರೆಸ್‌ ಪಕ್ಷದವರೇ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ ಶೀಘ್ರವೇ ಸರಕಾರ ಬೀಳುತ್ತದೆ. ಶಕ್ತಿ ಇದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಕಾರ ಉಳಿಸಿಕೊಳ್ಳಲಿ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಸವಾಲುಹಾಕಿದರು.
Vijaya Karnataka Web KS Eshwarappa-new.1


ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ರಾಜ್ಯ ಬಿಜೆಪಿಯು ಕಿಂಗ್‌ ಪಿನ್‌ಗಳನ್ನು ಬಳಸಿಕೊಂಡು ಸರಕಾರ ಬೀಳಿಸಲು ತೊಡಗಿದೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳಿಗೆ ಶಕ್ತಿ ಇದ್ದರೆ ಸರಕಾರ ಉಳಿಸಿಕೊಳ್ಳಲಿ, ಇಲ್ಲವೆಂದಾದರೆ ಬೇರೆಯವರ ಮೇಲೆ ಆಪಾದನೆ ಮಾಡುವುದನ್ನ ಬಿಡಲಿ ಎಂದು ಖಾರವಾಗಿ ಹೇಳಿದರು.

ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ಸರಕಾರ ಉರುಳಲಿದೆ ಎಂದು ನಮ್ಮ ಪಕ್ಷ ದ ನಾಯಕರು ಹೇಳಿಲ್ಲ. ಆದರೆ, ಎರಡು ದಿನ ಕಾದು ನೋಡಿ ರಾಜ್ಯ ಸರಕಾರದಲ್ಲಿ ಏನೇನು ಆಗುತ್ತೆ ಎಂಬುದರ ಬಗ್ಗೆ ಹೇಳಲಾಗಿತ್ತು ಎಂದರು.

ಅಪವಿತ್ರ ಮೈತ್ರಿಯ ರಾಜ್ಯ ಸರಕಾರ ಬಿದ್ದು ಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ಜನ ಇದ್ದಾರೆ. ಇದಕ್ಕಾಗಿ ಬಿಜೆಪಿ ಪಕ್ಷ ಪ್ರಯತ್ನ ಮಾಡಬೇಕಾದ ಅವಶ್ಯಕತೆ ಇಲ್ಲ. ಶೀಘ್ರವೇ ಅದಾಗ್ಯೆ ಪತನಗೊಳ್ಳಲಿದೆ ಎಂದರು.

ಸ್ವಾಮಿಗಳ ವಿರುದ್ಧ ಮಾತನಾಡಲಾರೆ:

ಸರಕಾರ ಕೆಡವಲು ಹೋದರೆ ದೈವಕ್ಕೆ ಮಾಡುವ ಮೋಸ ಎಂದು ಶಿವಮೊಗ್ಗದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಮಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ವಿರುದ್ಧ ಮಾತನಾಡುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ