ಆ್ಯಪ್ನಗರ

ಸ್ತೋತ್ರಗಳ ಪಠಣದಿಂದ ಅನುಗ್ರಹ

ಸಾಮಾನ್ಯ ಭಕ್ತನು ಸಹ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲು ಧ್ಯಾನ ಅಗತ್ಯ. ನಿತ್ಯ ಸ್ತೋತ್ರಗಳ ಪಠಣದಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಇತಿಹಾಸ ಸಂಶೋಧಕ ಜಿ.ವಿ. ಕೊಲ್ಲಾಪುರ್‌ ಹೇಳಿದರು.

Vijaya Karnataka 17 Nov 2019, 5:00 am
ಸಾಗರ: ಸಾಮಾನ್ಯ ಭಕ್ತನು ಸಹ ಭಗವಂತನ ಅನುಗ್ರಹಕ್ಕೆ ಪಾತ್ರವಾಗಲು ಧ್ಯಾನ ಅಗತ್ಯ. ನಿತ್ಯ ಸ್ತೋತ್ರಗಳ ಪಠಣದಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಇತಿಹಾಸ ಸಂಶೋಧಕ ಜಿ.ವಿ. ಕೊಲ್ಲಾಪುರ್‌ ಹೇಳಿದರು.
Vijaya Karnataka Web 13142951411513SGR4_46
ಸಾಗರದ ದುರ್ಗಾ ದೇವಸ್ಥಾನದಲ್ಲಿಮಾಧ್ವ ಸಂಘ ಹಮ್ಮಿಕೊಂಡ ಲಕ್ಷಿತ್ರ್ಮೕ ಶೋಭಾನ ಪಾರಾಯಣ ಕಾರ‍್ಯಕ್ರಮಕ್ಕೆ ಇತಿಹಾಸ ಸಂಶೋಧಕ ಜಿ.ವಿ. ಕೊಲ್ಲಾಪುರ್‌ ಚಾಲನೆ ನೀಡಿದರು.


ಇಲ್ಲಿನ ದುರ್ಗಾ ದೇವಸ್ಥಾನದಲ್ಲಿಇತ್ತೀಚೆಗೆ ಮಾಧ್ವ ಸಂಘ ಹಮ್ಮಿಕೊಂಡ ಲಕ್ಷಿತ್ರ್ಮೕ ಶೋಭಾನ ಪಾರಾಯಣ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋಟಿ ಗಾಯತ್ರಿ ಜಪ, ಹರಿಕಥಾಸಾರ, ವಿಷ್ಣು ಸಹಸ್ರನಾಮ ಮುಂತಾದ ಪಾರಾಯಣ ಕಾರ‍್ಯಕ್ಕೆ ನಮ್ಮ ಮಠಪರಂಪರೆಯ ಗುರುಗಳು ಸಂಕಲ್ಪ ಮಾಡುತ್ತಾರೆ. ಲಕ್ಷಿತ್ರ್ಮೕ ಶೋಭಾನ ಪಾರಾಯಣದಿಂದ ಸನ್ಮಂಗಳ ಪ್ರಾಪ್ತಿಯಾಗಲಿದೆ ಎಂದರು.

ಮಾನ್ಯತಾ ಪ್ರಾರ್ಥಿಸಿ, ರೇವತಿ ಹತ್ವಾರ್‌ ಸ್ವಾಗತಿಸಿದರು. ರಘುನಂದನ್‌ ಪುರೋಹಿತ್‌ ನಿರೂಪಿಸಿದರು. ವಾದಿರಾಜ್‌ ವೆಂಕಟೇಶ್‌ ಕಟ್ಟಿ , ಹರಿಶ್ಚಂದ್ರ ಭಟ್‌ , ಶ್ರೀದೇವಿ ಮೋಹನ್‌, ಭಾರತೀಯ ಬಾಯಿ, ವೀಣಾ ಕಟ್ಟಿ, ನಿರ್ಮಲಾ ಮತ್ತಿತರರು ಇದ್ದರು.

---
ಸೋಂದಾ ವಾದಿರಾಜ ಮಠದ ಸ್ವಾಮಿಗಳ ಮಾರ್ಗದರ್ಶನದಲ್ಲಿವಾದಿರಾಜ ಗುರುಗಳ ರಚನೆ ಲಕ್ಷಿತ್ರ್ಮೕ ಶೋಭಾನ ಪಾರಾಯಣದ ಸಂಕಲ್ಪ ಮಾಡಿದ್ದು, ರಾಷ್ಟಾ್ರದ್ಯಂತ ಪಾರಾಯಣ ಕಾರ‍್ಯಕ್ರಮ ನಡೆಯಲಿದೆ. ಸಾಗರ ವ್ಯಾಪ್ತಿ ಎಲ್ಲಭಕ್ತರ ಮನೆಗಳಲ್ಲಿಪಾರಾಯಣ ನಡೆಯಲಿದೆ.
-ಜಿ.ವಿ. ಕೊಲ್ಲಾಪುರ್‌, ಇತಿಹಾಸ ಸಂಶೋಧಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ