ಆ್ಯಪ್ನಗರ

ಮೈದೊಳಲು ಗ್ರಾ.ಪಂ. ಕಚೇರಿ ಮುಂದೆ ವಾಮಚಾರ: ದೂರು

ಸಮೀಪದ ಮೈದೊಳಲು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ವಾಮಚಾರ ಮಾಡಲಾಗಿದ್ದು, ಗುರುವಾರ ಬೆಳಗ್ಗೆ ಗಾ.್ರಪಂ. ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 15 Feb 2019, 5:00 am
ಹೊಳೆಹೊನ್ನೂರು: ಸಮೀಪದ ಮೈದೊಳಲು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ವಾಮಚಾರ ಮಾಡಲಾಗಿದ್ದು, ಗುರುವಾರ ಬೆಳಗ್ಗೆ ಗಾ.್ರಪಂ. ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web SMR-14HHR2


ಗ್ರಾ.ಪಂ. ಸೂಪರ್‌ಸೀಡ್‌ ಆಗಬೇಕು ಎಂದು ಹರಕೆ ಚೀಟಿಯನ್ನು ಬರೆದಿಡಲಾಗಿದೆ. ಈ ಪ್ರಕರಣದಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

''ಮೈದೊಳಲಿನಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ ಕಾಲರ ಬಂದು ಸಾವು ನೋವು ಸಂಭವಿಸಿತ್ತು. ಕಾಲರದ ಅವಘಡವಾಗಿ ವರ್ಷ ಕಳೆದಿದ್ದು, ಶೋಕಾಚರಣೆ ಮಾಡಬೇಕಾದ ಗ್ರಾ.ಪಂ. ಸದಸ್ಯರು ದಂಪತಿ ಸಮೇತ ಪ್ರವಾಸ ಮಾಡುತ್ತಿದ್ದಾರೆ. ಗ್ರಾ.ಪಂ. ಸದಸ್ಯರಿಗೆ ಜನರ ಹಿತಾಸಕ್ತಿ ಇಲ್ಲದಾಗಿದೆ. ನಮಗೆ ವಿರೋಧ ವ್ಯಕ್ತಪಡಿಸಿದವನಿಗೆ ಕಳೆದ ವಾರ ತಕ್ಕ ಶಾಸ್ತಿ ಮಾಡಿಸಿದ್ದೇವೆ. ಇನ್ನೆರಡು ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಬೆಂಬಲಿಗರಿಗೆ ಅಧಿಕಾರ ಮಾಡಲು ಬಿಡದಿದ್ದರೆ ಮುಂದೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ'' ಎಂದು ಹರಕೆ ಚೀಟಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಮೈದೊಳಲು ಗ್ರಾ.ಪಂ. ಅಧ್ಯಕ್ಷ ಜಯಪ್ಪ ಅವರು ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ