ರಿಪ್ಪನ್ಪೇಟೆ: ಜೈನರ ಪವಿತ್ರ ಕ್ಷೇತ್ರ ಶ್ರೀಹೊಂಬುಜದಲ್ಲಿ ಶ್ರೀಪದ್ಮಾವತಿ ದೇವಿಯ ಮಹಾರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ರಥಬೀದಿಯಲ್ಲಿ ಪದ್ಮಾವತಿ ದೇವಿ ಉತ್ಸವ ಮೂರ್ತಿಯ ರಥಾರೋಹಣವಾಗುತ್ತಿದ್ದಂತೆ ಕ್ಷೇತ್ರದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ರಥೋತ್ಸವದಲ್ಲಿ ಅರಿಹಂತಗಿರಿ ಪರಮಪೂಜ್ಯ ಸ್ವಸ್ತಿ ಧವಳಕೀರ್ತಿ ಭಟ್ಟಾರಕರು, ಕಂಬದಹಳ್ಳಿಯ ಸ್ವಸ್ತಿ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.
ಮಜ್ಜಿಗೆ ಅನ್ನದಾಸೋಹ: ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಜ್ಜಿಗೆ ವಿತರಣೆ ಮತ್ತು ಅರಳಿಕಟ್ಟೆ ಸ್ನೇಹಿತರ ಬಳಗದಿಂದ ಅನ್ನದಾಸೋಹ ವ್ಯವಸ್ಥೆಮಾಡಲಾಗಿತ್ತು.
ದೆಹಲಿ, ಪಾಟ್ನ, ಗೌಹಾಟಿ, ಚೆನೈ, ಬೆಂಗಳೂರು, ಮಣಿಪುರ, ಮುಂಬೈ, ಕಾರ್ಕಳ, ಮೂಡಬಿದರೆ, ಬೆಳಗಾಂ, ಕುಂದಾದ್ರಿ, ಹುಬ್ಬಳ್ಳಿ, ಧಾರವಾಡ, ಸೋಂದಾ, ಸೋಲಾಪುರ, ಶಿವಮೊಗ್ಗ, ಭದ್ರಾವತಿ,ಚಿಕ್ಕಮಗಳೂರು,ಚಿತ್ರದುರ್ಗ ವರಂಗ, ದಾವಣಗೆರೆ, ಕೊಪ್ಪಳ, ಗದಗ, ಬಾಗಲಕೋಟೆ, ಹಟ್ಟಿಯಂಗಡಿ ಇತರ ಕಡೆಗಳಿಂದ ಭಕ್ತರ ಸಮೂಹ, ಮೈಸೂರು ಮತ್ತು ಶಿವಮೊಗ್ಗ ಜೈನ ಮಿಲನದವರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಿಯ ದರ್ಶನ ಪಡೆದು ಪುನೀತರಾದರು.
ರಥಬೀದಿಯಲ್ಲಿ ಪದ್ಮಾವತಿ ದೇವಿ ಉತ್ಸವ ಮೂರ್ತಿಯ ರಥಾರೋಹಣವಾಗುತ್ತಿದ್ದಂತೆ ಕ್ಷೇತ್ರದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ರಥೋತ್ಸವದಲ್ಲಿ ಅರಿಹಂತಗಿರಿ ಪರಮಪೂಜ್ಯ ಸ್ವಸ್ತಿ ಧವಳಕೀರ್ತಿ ಭಟ್ಟಾರಕರು, ಕಂಬದಹಳ್ಳಿಯ ಸ್ವಸ್ತಿ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.
ಮಜ್ಜಿಗೆ ಅನ್ನದಾಸೋಹ: ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಜ್ಜಿಗೆ ವಿತರಣೆ ಮತ್ತು ಅರಳಿಕಟ್ಟೆ ಸ್ನೇಹಿತರ ಬಳಗದಿಂದ ಅನ್ನದಾಸೋಹ ವ್ಯವಸ್ಥೆಮಾಡಲಾಗಿತ್ತು.
ದೆಹಲಿ, ಪಾಟ್ನ, ಗೌಹಾಟಿ, ಚೆನೈ, ಬೆಂಗಳೂರು, ಮಣಿಪುರ, ಮುಂಬೈ, ಕಾರ್ಕಳ, ಮೂಡಬಿದರೆ, ಬೆಳಗಾಂ, ಕುಂದಾದ್ರಿ, ಹುಬ್ಬಳ್ಳಿ, ಧಾರವಾಡ, ಸೋಂದಾ, ಸೋಲಾಪುರ, ಶಿವಮೊಗ್ಗ, ಭದ್ರಾವತಿ,ಚಿಕ್ಕಮಗಳೂರು,ಚಿತ್ರದುರ್ಗ ವರಂಗ, ದಾವಣಗೆರೆ, ಕೊಪ್ಪಳ, ಗದಗ, ಬಾಗಲಕೋಟೆ, ಹಟ್ಟಿಯಂಗಡಿ ಇತರ ಕಡೆಗಳಿಂದ ಭಕ್ತರ ಸಮೂಹ, ಮೈಸೂರು ಮತ್ತು ಶಿವಮೊಗ್ಗ ಜೈನ ಮಿಲನದವರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಿಯ ದರ್ಶನ ಪಡೆದು ಪುನೀತರಾದರು.