ಆ್ಯಪ್ನಗರ

ವೈಭವದ ಶ್ರೀಪದ್ಮಾವತಿ ದೇವಿ ರಥೋತ್ಸವ

ಜೈನರ ಪವಿತ್ರ ಕ್ಷೇತ್ರ ಶ್ರೀಹೊಂಬುಜದಲ್ಲಿ ಶ್ರೀಪದ್ಮಾವತಿ ದೇವಿಯ ಮಹಾರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

Vijaya Karnataka 28 Mar 2019, 5:00 am
ರಿಪ್ಪನ್‌ಪೇಟೆ: ಜೈನರ ಪವಿತ್ರ ಕ್ಷೇತ್ರ ಶ್ರೀಹೊಂಬುಜದಲ್ಲಿ ಶ್ರೀಪದ್ಮಾವತಿ ದೇವಿಯ ಮಹಾರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
Vijaya Karnataka Web SMR-D-27-RPT-1P


ರಥಬೀದಿಯಲ್ಲಿ ಪದ್ಮಾವತಿ ದೇವಿ ಉತ್ಸವ ಮೂರ್ತಿಯ ರಥಾರೋಹಣವಾಗುತ್ತಿದ್ದಂತೆ ಕ್ಷೇತ್ರದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ರಥೋತ್ಸವದಲ್ಲಿ ಅರಿಹಂತಗಿರಿ ಪರಮಪೂಜ್ಯ ಸ್ವಸ್ತಿ ಧವಳಕೀರ್ತಿ ಭಟ್ಟಾರಕರು, ಕಂಬದಹಳ್ಳಿಯ ಸ್ವಸ್ತಿ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.

ಮಜ್ಜಿಗೆ ಅನ್ನದಾಸೋಹ: ಸ್ಫೂರ್ತಿ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ಮಜ್ಜಿಗೆ ವಿತರಣೆ ಮತ್ತು ಅರಳಿಕಟ್ಟೆ ಸ್ನೇಹಿತರ ಬಳಗದಿಂದ ಅನ್ನದಾಸೋಹ ವ್ಯವಸ್ಥೆಮಾಡಲಾಗಿತ್ತು.

ದೆಹಲಿ, ಪಾಟ್ನ, ಗೌಹಾಟಿ, ಚೆನೈ, ಬೆಂಗಳೂರು, ಮಣಿಪುರ, ಮುಂಬೈ, ಕಾರ್ಕಳ, ಮೂಡಬಿದರೆ, ಬೆಳಗಾಂ, ಕುಂದಾದ್ರಿ, ಹುಬ್ಬಳ್ಳಿ, ಧಾರವಾಡ, ಸೋಂದಾ, ಸೋಲಾಪುರ, ಶಿವಮೊಗ್ಗ, ಭದ್ರಾವತಿ,ಚಿಕ್ಕಮಗಳೂರು,ಚಿತ್ರದುರ್ಗ ವರಂಗ, ದಾವಣಗೆರೆ, ಕೊಪ್ಪಳ, ಗದಗ, ಬಾಗಲಕೋಟೆ, ಹಟ್ಟಿಯಂಗಡಿ ಇತರ ಕಡೆಗಳಿಂದ ಭಕ್ತರ ಸಮೂಹ, ಮೈಸೂರು ಮತ್ತು ಶಿವಮೊಗ್ಗ ಜೈನ ಮಿಲನದವರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಿಯ ದರ್ಶನ ಪಡೆದು ಪುನೀತರಾದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ