ಆ್ಯಪ್ನಗರ

ಅಂತರ್ಜಲ ಹೆಚ್ಚಿಸುವ ಯೋಜನೆ ಅಗತ್ಯ: ಹಾಲಪ್ಪ

ಮಲೆನಾಡಿನಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ಹೇಳಿದರು.

Vijaya Karnataka 30 Jun 2019, 5:00 am
Vijaya Karnataka Web SMR-29HOSP3
ಹೊಸನಗರ: ಮಲೆನಾಡಿನಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಲೆನಾಡಿನಲ್ಲಿ ಈ ಬಾರಿ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದೆ. ವಿಶೇಷವಾಗಿ ರೈತಾಪಿವರ್ಗ ಸಂಕಷ್ಟ ಎದುರಿಸುತ್ತಿದೆ. ಅಲ್ಪಾವಧಿ ಬೆಳೆಗಳ ಬಿತ್ತನೆಗೆ ತೊಂದರೆಯಾದರೆ, ಅಡಕೆ ಮೊದಲಾದ ದೀರ್ಘಾವಧಿ ಬೆಳೆಗಳ ಮರಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ ಎಂದರು.

ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇನೆ. ಬರಪೀಡಿತ ಎಂದು ಘೋಷಣೆಯಾದಲ್ಲಿ ಒಂದಿಷ್ಟು ಅನುದಾನ ಹರಿದು ಬರುತ್ತದೆ. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ, ಚೆಕ್‌ಡ್ಯಾಂನಂತಹ ದೀರ್ಘಾವಧಿಯಲ್ಲಿ ಉಪಯೋಗವಾಗುವಂತಹ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೈಸರ್ಗಿಕ ಕಾಡು ಇಲ್ಲದಿದ್ದಲ್ಲಿ ನೀರು ಭೂಮಿಯಾಳಕ್ಕೆ ಇಂಗಲಾರದು. ಅಕೇಶಿಯಾ ನೆಡುತೋಪುಗಳ ನಿರ್ಮಾಣ ಸಂಪೂರ್ಣವಾಗಿ ನಿಲ್ಲಬೇಕು. ಅಧಿಕಾರಿವರ್ಗ ಇದನ್ನು ಅಥೈರ್‍ಸಿಕೊಳ್ಳಬೇಕು. ಸರಕಾರ ಅಕೇಶಿಯಾ ನಿಷೇಧಿಸಿದ್ದರೂ, ನರ್ಸರಿಗಳಲ್ಲಿ ಅಕೇಶಿಯಾ ಗಿಡಗಳನ್ನು ಬೆಳೆಯಲಾಗುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು. ಈ ವೇಳೆ ಮಾಜಿ ಶಾಸಕ ಬಿ.ಸ್ವಾಮಿರಾವ್‌, ಜಿಪಂ ಸದಸ್ಯ ಎಸ್‌.ಸುರೇಶ್‌, ತಾಪಂ ಸದಸ್ಯೆ ರುಕ್ಮಿಣಿರಾಜು, ಎ.ವಿ.ಮಲ್ಲಿಕಾರ್ಜುನ, ಮೋಹನ ಮಂಡಾನಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ